ಆ್ಯಪ್ನಗರ

ವಿದ್ಯಾರ್ಥಿನಿ ಗೀತಾಳ ನೆರವಿಗೆ ಮಿಡಿದ ಉಡುಪಿ ಜನತೆ

ಉಡುಪಿಯ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಾಂಗ ಮಾಡುತ್ತಿರುವ ‘ಸಿಕ್ಕಲ್ ಥಲಸೇಮಿಯಾ ’ಕಾಯಿಲೆಯಿಂದ ಬಳಲುತ್ತಿರುವ ಗೀತಾ ಅವರ ಚಿಕಿತ್ಸೆಗೆ ವಿದ್ಯಾರ್ಥಿಗಳು ಸಂಗ್ರಹಿಸಿದ 7 ಲಕ್ಷ ರೂ. ಹಾಗೂ ಇತರ ದಾನಿಗಳ ನೆರವಿನಿಂದ 3ಲಕ್ಷ ರೂ. ಸೇರಿದಂತೆ ಒಟ್ಟು 10 ಲಕ್ಷ ರೂ.ಮೊತ್ತದ ನೆರವು ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು.

ವಿಕ ಸುದ್ದಿಲೋಕ 20 Mar 2016, 4:04 pm
ಉಡುಪಿ: ಉಡುಪಿಯ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಾಂಗ ಮಾಡುತ್ತಿರುವ ‘ಸಿಕ್ಕಲ್ ಥಲಸೇಮಿಯಾ ’ಕಾಯಿಲೆಯಿಂದ ಬಳಲುತ್ತಿರುವ ಗೀತಾ ಅವರ ಚಿಕಿತ್ಸೆಗೆ ವಿದ್ಯಾರ್ಥಿಗಳು ಸಂಗ್ರಹಿಸಿದ 7 ಲಕ್ಷ ರೂ. ಹಾಗೂ ಇತರ ದಾನಿಗಳ ನೆರವಿನಿಂದ 3ಲಕ್ಷ ರೂ. ಸೇರಿದಂತೆ ಒಟ್ಟು 10 ಲಕ್ಷ ರೂ.ಮೊತ್ತದ ನೆರವು ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು.
Vijaya Karnataka Web
ವಿದ್ಯಾರ್ಥಿನಿ ಗೀತಾಳ ನೆರವಿಗೆ ಮಿಡಿದ ಉಡುಪಿ ಜನತೆ


ಸಂಗ್ರಹವಾದ ಮೊತ್ತವನ್ನು ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ಡಾ.ಜಿ.ಶಂಕರ್ ಅವರು ಗೀತಾಳ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಮೋದ್ ಮಧ್ವರಾಜ್ ಅವರು ಮುಖ್ಯಮಂತ್ರಿಗಳ ಆರೋಗ್ಯ ಪರಿಹಾರ ನಿಧಿಯಿಂದ ಗರಿಷ್ಠ ಪ್ರಮಾಣದ ಆರ್ಥಿಕ ನೆರವನ್ನು ವಿದ್ಯಾರ್ಥಿನಿಗೆ ಒದಗಿಸಲಾಗುವುದು ಎಂದರು. ಡಾ.ಜಿ.ಶಂಕರ್ ಮಾತನಾಡಿ ತಮ್ಮದೇ ಸಹಪಾಠಿಯ ಚಿಕಿತ್ಸೆಗೆ ವಿದ್ಯಾರ್ಥಿನಿಯರು ಸ್ಪಂದಿಸಿದ ರೀತಿ ಸಮಾಜದ ಕಣ್ತೆರೆಸಿದೆ. ಅಗತ್ಯ ಬಿದ್ದರೆ ತಮ್ಮ ಟ್ರಸ್ಟ್ ವತಿಯಿಂದ ಹೆಚ್ಚುವರಿ 2 ಲಕ್ಷ ರೂ.ಚಿಕಿತ್ಸೆಗೆ ನೀಡಲಾಗುವುದು ಎಂದರು.

ವಿದ್ಯಾರ್ಥಿನಿಯರು ಉಡುಪಿ ನಗರದಲ್ಲಿ ಪಾದಯಾತ್ರೆ ಮಾಡಿ ಸಾರ್ವಜನಿಕರಿಂದ 7.07ಲಕ್ಷ ರೂ.ಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಅಲ್ಲದೆ ಡಾ.ಜಿ.ಶಂಕರ್ ಅವರು ತಮ್ಮ ಟ್ರಸ್ಟ್ ನಿಂದ 1 ಲಕ್ಷ , ಎಲೆಸಿಯಿಂದ 36,000ರೂ., ಗೀತಾಳ ಬ್ಯಾಂಕ್ ಖಾತೆಗೆ ಸಾರ್ವಜನಿಕರಿಂದ ಜಮೆಯಾಗಿರುವ 1.76 ಲಕ್ಷ ರೂ. ಸೇರಿದಂತೆ ಒಟ್ಟು 10ಲಕ್ಷ ರೂ. ಸಂಗ್ರಹವಾಗಿದೆ. ಈಕೆ ತಮಿಳುನಾಡಿನ ವೆಲ್ಲೂರು ಆಸ್ಪತ್ರೆಯಲ್ಲಿ ಪಡೆದುಕೊಳ್ಳಲಲಿರುವ ಚಿಕಿತ್ಸೆಗೆ ಸುಮಾರು 15ಲಕ್ಷ ರೂ.ವೆಚ್ಚ ತಗಲುವ ನಿರೀಕ್ಷೆಯಿದೆ.

ದೇಣಿಗೆ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿದ್ಯಾರ್ಥಿ ನಾಯಕಿ ಭವ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ.ದಿನೇಶ್ ನಾಯಕ್ ಅವರು ಈ ‘ಸಿಕ್ಕಲ್ ಥಲಸೇಮಿಯಾ’ ರೋಗದ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ರಾವ್, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಕಾಲೇಜಿನ ಅಧ್ಯಾಪಕ ವಂದ ಉಪಸ್ಥಿತರಿದ್ದರು.

ಕ್ರೀಡಾಧಿಕಾರಿ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಿದ್ಯಾರ್ಥಿನಿ ಗೀತಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ