ಆ್ಯಪ್ನಗರ

‘ದೇಶದ್ರೋಹ ಅಪಾದನೆ ಅಂಬೇಡ್ಕರ್ ಮೇಲೂ ಬಂದಿತ್ತು’

ಜನರ ಪರ ಮಾತನಾಡುವವರ ವಿರುದ್ಧ ದೇಶದ್ರೋಹದ ಆಪಾದನೆ ಬರುವುದು ಇದೇನು ಹೊಸತಲ್ಲ. ಅಂಬೇಡ್ಕರ್ ಮೇಲೂ ಈ ಅಪಾದನೆ ಬಂದಿತ್ತು. ಸಾವಿರಾರು ವರ್ಷಗಳಿಂದ ಮಾತಿಲ್ಲದ, ಸ್ವಾತಂತ್ರ್ಯವಿಲ್ಲದ ಜನರನ್ನು ಇಂಗ್ಲಿಷರು ಆಳಿದರೂ, ಬೇರೆಯವರು ಆಳಿದರೂ ವ್ಯತ್ಯಾಸವೇನಿಲ್ಲ. ಮೊದಲು ಆ ಜನರಿಗೆ ಸ್ವಾತಂತ್ರ್ಯ ಸಿಗಬೇಕು ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಖ್ಯಾತ ಚಿಂತಕಿ ಡಾ. ಎಚ್.ಎಸ್. ಅನುಪಮಾ ಹೇಳಿದರು.

ವಿಕ ಸುದ್ದಿಲೋಕ 29 Mar 2016, 6:30 am
ಉಡುಪಿ: ಜನರ ಪರ ಮಾತನಾಡುವವರ ವಿರುದ್ಧ ದೇಶದ್ರೋಹದ ಆಪಾದನೆ ಬರುವುದು ಇದೇನು ಹೊಸತಲ್ಲ. ಅಂಬೇಡ್ಕರ್ ಮೇಲೂ ಈ ಅಪಾದನೆ ಬಂದಿತ್ತು. ಸಾವಿರಾರು ವರ್ಷಗಳಿಂದ ಮಾತಿಲ್ಲದ, ಸ್ವಾತಂತ್ರ್ಯವಿಲ್ಲದ ಜನರನ್ನು ಇಂಗ್ಲಿಷರು ಆಳಿದರೂ, ಬೇರೆಯವರು ಆಳಿದರೂ ವ್ಯತ್ಯಾಸವೇನಿಲ್ಲ. ಮೊದಲು ಆ ಜನರಿಗೆ ಸ್ವಾತಂತ್ರ್ಯ ಸಿಗಬೇಕು ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಖ್ಯಾತ ಚಿಂತಕಿ ಡಾ. ಎಚ್.ಎಸ್. ಅನುಪಮಾ ಹೇಳಿದರು.
Vijaya Karnataka Web
‘ದೇಶದ್ರೋಹ ಅಪಾದನೆ ಅಂಬೇಡ್ಕರ್ ಮೇಲೂ ಬಂದಿತ್ತು’


ಬೆಂಗಳೂರು ಕಾನೂನು ಶಾಲೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಪ್ರತ್ಯೇಕತೆ ನೀತಿ ಅಧ್ಯಯನ ಸಂಸ್ಥೆ, ಅಂಬೇಡ್ಕರ್ ಅಧ್ಯಯನ ಕೇಂದ್ರ ವತಿ ಯಿಂದ ನಡೆದ ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿ ಯಾನದ ಸಮಾರೋಪದಲ್ಲಿ ಅವರು ಮಾತನಾಡಿದರು.

ನಾನೇದರೂ ತಪ್ಪು ಕೆಲಸಗಳನ್ನು ಮಾಡಿದ್ದರೆ ಅದಕ್ಕೆ ಈ ನೆಲ ಕಾರಣವೇ ಹೊರತು, ನಾನಲ್ಲ. ಅದೇ ರೀತಿ ಏನಾ ದರೂ ಒಳ್ಳೆಯದು ಮಾಡಿದ್ದರೆ ಅದು ಅಕಳಂಕಿತ ಪ್ರಜ್ಞೆಯಿಂದ ಮಾಡಿದ್ದೇ ಹೊರತು ದೇಶಪ್ರೇಮದಿಂದಲ್ಲ ಎಂಬು ದು ಅಂಬೇಡ್ಕರ್ ಮಾತಾಗಿತ್ತು. ಜನರ ಪರ ಮಾತನಾಡುವುದು ದೇಶ ವಿರೋಧ ಹೇಗಾಗುತ್ತದೆ ಎಂದು ಅನುಪಮಾ ಪ್ರಶ್ನಿಸಿದರು. ಚಿಂತಕ ಜಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದ ಸಂಪನ್ಮೂಲ ವ್ಯಕ್ತಿ ನಾರಾಯಣ ಮಣೂರು ಅಭಿಯಾನದ ಬಗ್ಗೆ ವಿವರಿಸಿದರು. ಜನಪರ ಹೋರಾಟಗಾರ ಕೋಮು ಸೌಹಾರ್ದ ವೇದಿಕೆಯ ಫಾ.ವಿಲಿಯಂ ಮಾರ್ಟಿಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶ್ಯಾಮರಾಜ ಬಿರ್ತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ಎಸ್.ಎಸ್.ಪ್ರಸಾದ್, ಡಿಎಸ್‌ಎಸ್ ಪ್ರೊ.ಕೃಷ್ಣಪ್ಪ ಸ್ಥಾಪಿತದ ಶೇಖರ ಹೆಜಮಾಡಿ, ಭೀಮವಾದದ ಉದಯಕುಮಾರ್ ತಲ್ಲೂರು, ಸಮಾಜ ಪರಿವರ್ತನ ಚಳವಳಿ ಯ ಮಂಜುನಾಥ, ಸಮತಾ ಸೈನಿಕ ದಳದ ವಿಶ್ವನಾಥ ಪೇತ್ರಿ, ಜೈಭೀಮ್ ಯುವಶಕ್ತಿಯ ಉಮೇಶ್ ಕುಮಾರ್, ಮುಸ್ಲಿಂ ಒಕ್ಕೂಟದ ಸಲಾಹುದ್ದದೀನ್, ರಥಬೀದಿ ಗೆಳೆಯರು ಬಳಗದ ಉದ್ಯಾವರ ನಾಗೇಶ್ ಕುಮಾರ್, ಭಾರತೀಯ ಕ್ರೈಸ್ತ ಒಕ್ಕೂಟದ ಚಾರ್ಲ್ಸ್ ಆ್ಯಂಬ್ಲರ್, ಬೌದ್ಧ ಮಹಾ ಸಭಾದ ಶಂಭುಸುವರ್ಣ, ಕೊರಗ ಅಭಿವೃದ್ಧಿ ಸಂಘಟನೆಗಳ ಒಕ್ಕೂಟದ ಬೊಗ್ರ ಕೊರಗ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಉದಯ ಗಾಂವ್ಕರ್ ಉಪಸ್ಥಿತರಿದ್ದರು. ಫಣಿರಾಜ್ ಸ್ವಾಗತಿಸಿದರು. ದಿನಕರ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ