ಆ್ಯಪ್ನಗರ

‘ಧರ್ಮ ರಕ್ಷಣೆ ಮನುಷ್ಯನ ಕೆಲಸವಲ್ಲ’

ಧರ್ಮದ ರಕ್ಷಣೆ ಮನುಷ್ಯನ ಕೆಲಸವಲ್ಲ. ಮನುಷ್ಯನ ರಕ್ಷಣೆ ಧರ್ಮದ ಕೆಲಸವಾಗಿದೆ. ಮನುಷ್ಯರಾದ ನಾವು ಎಲ್ಲ ಧರ್ಮದ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಪೂಜೆ ಪುನಸ್ಕಾರಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಹಾಜಿ ಅಕ್ಬರ್ ಅಲಿ ಹೇಳಿದರು.

ವಿಕ ಸುದ್ದಿಲೋಕ 23 May 2016, 4:15 pm
ಕೋಟ: ಧರ್ಮದ ರಕ್ಷಣೆ ಮನುಷ್ಯನ ಕೆಲಸವಲ್ಲ. ಮನುಷ್ಯನ ರಕ್ಷಣೆ ಧರ್ಮದ ಕೆಲಸವಾಗಿದೆ. ಮನುಷ್ಯರಾದ ನಾವು ಎಲ್ಲ ಧರ್ಮದ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಪೂಜೆ ಪುನಸ್ಕಾರಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಹಾಜಿ ಅಕ್ಬರ್ ಅಲಿ ಹೇಳಿದರು.
Vijaya Karnataka Web
‘ಧರ್ಮ ರಕ್ಷಣೆ ಮನುಷ್ಯನ ಕೆಲಸವಲ್ಲ’


ಅವರು ಭಾನುವಾರ ಕೋಟ ಜಾಮಿಯಾ ನವೀಕೃತ ಮಸೀದಿಯಲ್ಲಿ ನಡೆದ ಸೌಹಾರ್ದ ಸಮಾವೇಶದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಇಡೀ ಜಗತ್ತಿನ ಮಸೀದಿಗಳು ಒಂದೇ ರೂಪದಲ್ಲಿದ್ದು, ಜಗತ್ತಿನ ಎಲ್ಲ ಮುಸ್ಲಿಮರು ಒಂದೇ ಕಡೆ ಮುಖ ಮಾಡಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಮಸೀದಿಗೆ ಎಲ್ಲ ಧರ್ಮದವರು ಬರಬೇಕು. ಅಲ್ಲಿ ಕಷ್ಟಗಳನ್ನು ಹೇಳಿಕೊಳ್ಳಬೇಕು.ಸುಖಗಳನ್ನು ಅನುಭವಿಸಬೇಕು. ಜತೆಗೆ ಪ್ರವಾದಿ ಮಹಮ್ಮದ್ ಆಶಯದಂತೆ ನಾವು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಪತ್ರಕರ್ತ ಹಾಜಿ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಕೋಟದ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ.ಕುಂದರ್, ಉಡುಪಿ ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ನಖ್ವಾ ಯಹ್ಯಾ, ಕೋಟ ಸಂತ ಜೋಸೆಫ್‌ರ ಇಗರ್ಜಿಯ ವಂ.ಫಾ.ಲಾರೆನ್ಸ್ ಮಾರ್ಟಿಸ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ತಾಲೂಕು ಪಂಚಾಯಿತಿ ಸದಸ್ಯ ಲಲಿತಾ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಉಡುಪಿ ಜಿಲ್ಲಾ ಜಿಎಸ್‌ಪಿ ಸಮಾಜದ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಉಪಾಧ್ಯಕ್ಷ ಟಿ.ಮಂಜುನಾಥ ಗಿಳಿಯಾರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.

ಮಸೀದಿಯ ಅಧ್ಯಕ್ಷ ಜಿ.ಮಹಮ್ಮದ್ ಶರೀಫ್, ಧರ್ಮಗುರು ಸೈಯದ್ ರುಜುವಾತ್, ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಕೆ.ಎಂ. ಸಲೀಂ, ಕಾರ್ಯದರ್ಶಿ ಅಬ್ದುಲ್ ಸಿರಾಜ್, ಉಪಾಧ್ಯಕ್ಷ ಮಹಮ್ಮದ್ ಉಸ್ಮಾನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಕೋಟ ಶಾಂಭವೀ ಶಾಲೆ ಮುಖ್ಯಶಿಕ್ಷಕ ರಾಜಾರಾಂ ಐತಾಳ್, ಕೋಟ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಆಚಾರ್ಯ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಸೀತಾರಾಮ ಮಧ್ಯಸ್ಥ, ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ನಾಗರಾಜ ಕಾಮಧೇನು ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಮಹಮ್ಮದ್ ಸಲೀಂ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಇಬ್ರಾಹಿಂ ಸಾಹೇಬ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ