ಆ್ಯಪ್ನಗರ

ಭಗವದ್ಗೀತಾ ಪ್ರವಚನ ಸಮಾರೋಪದಲ್ಲಿ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರು

ನನ್ನಲ್ಲಿರುವ ಪರಮಾತ್ಮನೂ ನಿಮ್ಮಲ್ಲಿರುವ ಪರಮಾತ್ಮನೂ ಒಬ್ಬನೇ ಎನ್ನುವ ಅರಿವೆಯೇ ಸಾತ್ವಿಕ ಜ್ಞಾನ ಎಂದು ಶ್ರೀಸುವಿದ್ಯೇಂದ್ರತೀರ್ಥರು ಹೇಳಿದ್ದಾರೆ.

Vijaya Karnataka 21 Dec 2018, 5:00 am
ಉಡುಪಿ: ನನ್ನಲ್ಲಿರುವ ಪರಮಾತ್ಮನೂ ನಿಮ್ಮಲ್ಲಿರುವ ಪರಮಾತ್ಮನೂ ಒಬ್ಬನೇ ಎನ್ನುವ ಅರಿವೆಯೇ ಸಾತ್ವಿಕ ಜ್ಞಾನ ಎಂದು ಶ್ರೀಸುವಿದ್ಯೇಂದ್ರತೀರ್ಥರು ಹೇಳಿದ್ದಾರೆ.
Vijaya Karnataka Web 333


ಅವರು ಗೀತಾ ಜಯಂತಿ ಅಂಗವಾಗಿ 18 ದಿನಗಳ ಕಾಲ ನಡೆದ ಭಗವದ್ಗೀತಾ ಪ್ರವಚನ ಸಮಾರೋಪದಲ್ಲಿ ಗುರುವಾರ ಮಾತನಾಡಿದರು.

ಎಲ್ಲರಲ್ಲೂ ಭಗವಂತ ಒಬ್ಬನೇ ಇದ್ದಾನೆ ಎನ್ನುವ ಸಾತ್ವಿಕ ಜ್ಞಾನ ನಮ್ಮದಾಗಬೇಕು. ನಾನೇ ಪರಮಾತ್ಮ ಎನ್ನುವುದು ತಾಮಸ ಗುಣವಾದರೆ ನನ್ನಲ್ಲಿರುವ ಪರಮಾತ್ಮ, ನಿಮ್ಮಲ್ಲಿರುವ ಪರಮಾತ್ಮ ಬೇರೆ ಎನ್ನುವುದು ರಾಜಸ ಗುಣ.

ಧರ್ಮ ಮತ್ತು ಅಧರ್ಮ, ಕಾರ್ಯ ಮತ್ತು ಕಾರ್ಯದ ವ್ಯತ್ಯಾಸ ತಿಳಿದು ಕೆಲಸಮಾಡಬೇಕು. ಆಸೆ ಬಿಟ್ಟು, ಇಂದ್ರಿಯ ನಿಗ್ರಹದಿಂದ ಪ್ರತಿಯೊಬ್ಬರೂ ತಮ್ಮ ಪಾಲಿನ ಕೆಲಸವನ್ನು ಬದುಕಿನ ಕರ್ತವ್ಯದ ನೆಲೆಯಲ್ಲಿ ಮಾಡಬೇಕು. ಪರಮಾತ್ಮನಿಗೆ ಶರಣಾಗೋದು ಶ್ರೇಯಸ್ಕರ. ವೇದ ವ್ಯರ್ಥವಲ್ಲ, ವಿಧಿಯೂ ವ್ಯರ್ಥವಲ್ಲ. ಪರಮಾತ್ಮನ ಜ್ಞಾನ ಪಡೆದು ಕರ್ಮ ಮಾಡಬೇಕು ಎಂದು ಹೇಳಿದರು.

ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕೊಟ್ಟ ವಿಷಯವನ್ನು ನಿಗದಿತ ಅವಧಿಯಲ್ಲಿ ಒಪ್ಪಿಸುವ ಶ್ರೀಸುವಿದ್ಯೇಂದ್ರತೀರ್ಥರು ಮಕ್ಕಳಿಂದ ಹಿಡಿದು ಮುದುಕರನ್ನು ಸೆಳೆವ ಒಬ್ಬ ಬೆಸ್ಟ್‌ ಟೀಚರ್‌, ಪ್ರೊಫೆಸರ್‌ ಎಂದು ಬಣ್ಣಿಸಿದರು.

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕಾರ್ಯಕ್ರಮ ಪ್ರಾಯೋಜಕ ಭುವನೇಂದ್ರ ಕಿದಿಯೂರು ಉಪಸ್ಥಿತರಿದ್ದರು. ಬಳಿಕ ವೇದವ್ಯಾಸರಿಗೆ ಪೂಜೆ ನೆರವೇರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ