ಆ್ಯಪ್ನಗರ

ಎಸ್ಪಿ ಕಚೇರಿ ಸ್ಯಾನಿಟೈಸ್‌ ಮಾಡಿದ್ದು, ಮುಚ್ಚಿಲ್ಲ:ಉಡುಪಿ ಎಸ್ಪಿ ಸ್ಪಷ್ಟನೆ!

ವಿಕ ಸುದ್ದಿಲೋಕ ಉಡುಪಿಕಳೆದ ಕೆಲ ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿಸಾರ್ವಜನಿಕರು ಪಾಸ್‌ ಹಾಗೂ ಇತರೆ ಕೆಲಸಕ್ಕಾಗಿ ಎಸ್ಪಿ ಕಚೇರಿ ಬಂದಿರುವ ಹಿನ್ನೆಲೆಯಲ್ಲಿಮುಂಜಾಗೃತಾ ...

Vijaya Karnataka Web 26 May 2020, 12:10 pm
ಉಡುಪಿ: ಕಳೆದ ಕೆಲ ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿಸಾರ್ವಜನಿಕರು ಪಾಸ್‌ ಹಾಗೂ ಇತರೆ ಕೆಲಸಕ್ಕಾಗಿ ಎಸ್ಪಿ ಕಚೇರಿ ಬಂದಿರುವ ಹಿನ್ನೆಲೆ ಮುಂಜಾಗೃತಾ ಕ್ರಮಕ್ಕಾಗಿ 2 ದಿನದ ಹಿಂದೆಷ್ಟೇ ಕಚೇರಿಯನ್ನು ಸ್ಯಾನಿಟೈಸ್‌ ಮಾಡಿದ್ದೇವೆ ಹೊರತು ಎಸ್ಪಿ ಕಚೇರಿ ಮುಚ್ಚಿಲ್ಲ, ಮುಚ್ಚುವುದು ಇಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web jpg (19)


ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದಿದ್ದು, ಆತನ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಹಿನ್ನೆಲೆಯಲ್ಲಿಎಸ್ಪಿ ಕಚೇರಿಯನ್ನು ಸೀಲ್‌ ಡೌನ್‌ ಮಾಡಲಾಗಿತ್ತು ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಈ ಬಗ್ಗೆ ಎಸ್ಪಿ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲ ಕೆಲಸದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿಸಾರ್ವಜನಿಕರು ಬಂದಿದ್ದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಕ್ಕಾಗಿ ಸ್ಯಾನಿಟೈಸ್‌ ಮಾಡಿದ್ದೇವೆ. ಆದರೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಎಸ್ಪಿ ಕಚೇರಿ ಬಂದ್‌ ಆಗಿರುವುದು ಸುಳ್ಳುಸುದ್ದಿ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ಠಾಣೆಗಳನ್ನು ಸ್ಯಾನಿಟೈಸ್‌ ಮಾಡುವ ಆಲೋಚನೆ ಮಾಡಿದ್ದೇವೆ. ಒಂದು ಕಚೇರಿಯಲ್ಲಿ ಹಲವು ಮಂದಿ ಸೋಂಕಿತರು ಕಂಡು ಬಂದರೆ ಮಾತ್ರ ಸರಕಾರ ಮಾರ್ಗಸೂಚಿಯಂತೆ ಸೀಲ್‌ಡೌನ್‌ ಮಾಡಲು ಅವಕಾಶವಿದೆ. ಡಿಎಆರ್‌ ಸಿಬ್ಬಂದಿ ಎಸ್ಪಿ ಕಚೇರಿಯ ಪ್ರವೇಶ ದ್ವಾರದಲ್ಲಿಇರುವುದರಿಂದ ಕನಿಷ್ಟ ಮಂದಿಯನ್ನಷ್ಟೇ ಸಂಪರ್ಕ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ಪೊಲೀಸರಿಗೆ ಮೊಬೈಲ್‌ ವಿಶ್ರಾಂತಿ ಕೊಠಡಿ; ಸುರಕ್ಷತೆಗೆ ಮಾರ್ಗಸೂಚಿ (ವಿಕ ಇಂಪ್ಯಾಕ್ಟ್‌)


ಕರಾವಳಿ ಭಾಗದ ಪೊಲೀಸರಿಗೂ ಸೋಂಕು ತಗುಲುತ್ತಿದೆ. ಈ ಹಿನ್ನೆಲೆ ಉಡುಪಿ ಜಿಲ್ಲೆಯ ಎರಡು ಪೊಲೀಸ್‌ ಠಾಣೆಯನ್ನ ಸೀಲ್‌ಡೌನ್‌ ಮಾಡಲಾಗಿತ್ತು. ಇದೀಗ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ