Please enable javascript.ರೈಲಿನಿಂದ ಬಿದ್ದು ಬಿಎಸ್‌ಎಫ್ ಯೋಧ ಮೃತ್ಯು - ರೈಲಿನಿಂದ ಬಿದ್ದು ಬಿಎಸ್‌ಎಫ್ ಯೋಧ ಮೃತ್ಯು - Vijay Karnataka

ರೈಲಿನಿಂದ ಬಿದ್ದು ಬಿಎಸ್‌ಎಫ್ ಯೋಧ ಮೃತ್ಯು

ವಿಕ ಸುದ್ದಿಲೋಕ 25 Jun 2012, 8:27 pm
Subscribe

ಬಿಎಸ್‌ಎಫ್ ಯೋಧ ಸತ್ಯೇಂದ್ರ ಸಿಂಗ್(30) ಹಟ್ಟಿಯಂಗಡಿ ರೈಲ್ವೆ ಸೇತುವೆ ಬಳಿ ಭಾನುವಾರ ಮೃತಪಟ್ಟಿದ್ದಾರೆ.

ರೈಲಿನಿಂದ ಬಿದ್ದು ಬಿಎಸ್‌ಎಫ್ ಯೋಧ ಮೃತ್ಯು
ಕುಂದಾಪುರ: ಬಿಎಸ್‌ಎಫ್ ಯೋಧ ಸತ್ಯೇಂದ್ರ ಸಿಂಗ್(30) ಹಟ್ಟಿಯಂಗಡಿ ರೈಲ್ವೆ ಸೇತುವೆ ಬಳಿ ಭಾನುವಾರ ಮೃತಪಟ್ಟಿದ್ದಾರೆ.

ಹೊಸದಿಲ್ಲಿ ನಿವಾಸಿಯಾಗಿರುವ ಇವರು, ತುಂಬು ಗರ್ಭಿಣಿ ಪತ್ನಿ ಕಾಮಿನಿ ಅವರ ಹೆರಿಗೆಗೋಸ್ಕರ ರಜೆ ಹಾಕಿ ಊರಿಗೆ ಬರುತ್ತಿದ್ದರು. ಯೋಧನ ತಲೆಗೆ ಏಟು ತಗುಲಿದ್ದು ಆಕಸ್ಮಿಕವಾಗಿ ರೈಲ್ವೆಯಿಂದ ಬಿದ್ದು ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ.

ಹೊಸದಿಲ್ಲಿಯ ಭೀಮಸಿಂಗ್ ಅವರ ಏಕಮಾತ್ರ ಪುತ್ರನಾಗಿರುವ ಸತ್ಯೇಂದ್ರಸಿಂಗ್ 2003, ಜೂ.3ರಂದು ಸೇನೆಗೆ ಸೇರಿದ್ದರು. ಅವರು ಕೇರಳದ ತ್ರಿಶ್ಯೂರ್‌ನಲ್ಲಿ ಗಡಿರಕ್ಷಣಾ ಪಡೆಯ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಕುಂದಾಪುರದ ಶವಾಗಾರದಲ್ಲಿ ಇರಿಸಲಾಗಿದ್ದು ಬಿಎಸ್‌ಎಫ್‌ನ ಡೆಪ್ಯುಟಿ ಕಮಾಂಡೆಂಟ್ ಕಿರಣ್ ಗೋವಿಂದ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮದನ್ ಜಿ.ಗಾಂವ್ಕರ್ ಮಾಹಿತಿ ಒದಗಿಸಿದ್ದಾರೆ.

ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ: ಯೋಧನ ಸಾವು ಯಾವ ರೀತಿ ಆಗಿರಬಹುದೆಂದು ನಿಖರ ಮಾಹಿತಿ ಪಡೆಯಲು ಉನ್ನತ ಸ್ತರದಲ್ಲಿ ತನಿಖೆ ನಡೆಸುವ ದಷ್ಟಿಯಿಂದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದಲ್ಲಿ ನಡೆಸಲಾಗುವುದು ಎಂದು ಬಿಎಸ್‌ಎಫ್‌ನ ಡೆಪ್ಯುಟಿ ಕಮಾಂಡೆಂಟ್ ಕಿರಣ್‌ಗೋವಿಂದ್ ವಿಜಯಕರ್ನಾಟಕಕ್ಕೆ ತಿಳಿಸಿದ್ದಾರೆ.

ರೈಲ್ವೆಯಲ್ಲಿ ಪಯಣಿಸುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ. ಯೋಧನ ತಲೆ ಭಾಗ ಹೊರತುಪಡಿಸಿ ಬೇರೆಲ್ಲೂ ಗಾಯ ಆಗಿಲ್ಲ. ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಿಮಾನದಲ್ಲಿ ಮತದೇಹವನ್ನು ಹೊಸದಿಲ್ಲಿಗೆ ಕೊಂಡೊಯ್ಯಲಾಗುವುದು ಎಂದು ಅವರು ವಿವರಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ