Please enable javascript.ಪರ್ಯಾಯ ಮಹೋತ್ಸವ ಬಿಷಪ್ ಶುಭಾಶಂಸನೆ - ಪರ್ಯಾಯ ಮಹೋತ್ಸವ ಬಿಷಪ್ ಶುಭಾಶಂಸನೆ - Vijay Karnataka

ಪರ್ಯಾಯ ಮಹೋತ್ಸವ ಬಿಷಪ್ ಶುಭಾಶಂಸನೆ

ವಿಕ ಸುದ್ದಿಲೋಕ 17 Jan 2014, 5:08 am
Subscribe

ಈ ವರ್ಷ ಪರ್ಯಾಯ ಸ್ವಾಮಿಗಳಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿರುವ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರಿಗೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಬಾಂಧವರ ಪರವಾಗಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಶುಭ ಕೋರಿದ್ದಾರೆ.

ಪರ್ಯಾಯ ಮಹೋತ್ಸವ ಬಿಷಪ್ ಶುಭಾಶಂಸನೆ
ಉಡುಪಿ: ಉಡುಪಿ ಶ್ರೀಕೃಷ್ಣನ ಪೂಜೆಗಾಗಿ ಎರಡು ವರ್ಷಗಳಿಗೊಮ್ಮೆ ಎಂಟು ಯತಿಗಳಲ್ಲಿ ಒಬ್ಬೊಬ್ಬರು ಪೂಜೆಯ ಮತ್ತು ಮಠದ ನಿರ್ವಹಣೆಯನ್ನು ವಹಿಸಿಕೊಳ್ಳುವ ಪರ್ಯಾಯದಲ್ಲಿ ಈ ವರ್ಷ ಪರ್ಯಾಯ ಸ್ವಾಮಿಗಳಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿರುವ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರಿಗೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಬಾಂಧವರ ಪರವಾಗಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಶುಭ ಕೋರಿದ್ದಾರೆ.

ಉಡುಪಿ ಮಠಗಳ ನಾಡಾಗಿ ವಿಶ್ವಪ್ರಸಿದ್ಧವಾಗಿದೆ. ವಿಶ್ವದ ಎಲ್ಲ ಭಾಗಗಳಿಂದ ಜನರು ಉಡುಪಿಗೆ, ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಸಂಪನ್ನರಾಗುತ್ತಾರೆ. ಶ್ರೀ ಮದ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳಿಂದಾಗಿ ಈ ನಾಡಿನಲ್ಲಿ ಭಗವಂತನ ಸೇವೆ ಸುಸೂತ್ರವಾಗಿ ನಡೆದು ನಾಡಿನಲ್ಲಿ ಶಾಂತಿ ಸಮೃದ್ಧಿ ನೆಲೆಸಿದೆ. ಅಷ್ಟಮಠಗಳ ಸ್ವಾಮಿಗಳ ಸಾತ್ವಿಕ ಜೀವನ, ಸಮಾಜ ಕಲ್ಯಾಣಕ್ಕಾಗಿ ಅವರು ಕೈಗೊಳ್ಳುವ ಕಾರ್ಯಗಳು ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟಿವೆ.

ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು ಪರ್ಯಾಯ ಸ್ವಾಮಿಗಳಾಗಿ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಈ ಶುಭ ಸಂದರ್ಭ ಭಗವಂತ ಅವರನ್ನು ಹರಸಲಿ. ಅವರ ಕೈಂಕರ್ಯದ ಪ್ರತಿಕ್ಷಣದಲ್ಲೂ ಅವರನ್ನು ಕೈಹಿಡಿದು ನಡೆಸಲಿ ಮತ್ತು ಲೋಕ ಕಲ್ಯಾಣಕ್ಕಾಗಿ ಅವರನ್ನು ತನ್ನ ಬಲಿಷ್ಠ ಸಾಧನವನ್ನಾಗಿಸಲಿ ಬಿಷಪ್ ತಿಳಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ