ಆ್ಯಪ್ನಗರ

ಬೈಕ್ ಇದ್ದವರು 5 ಗಿಡ ನೆಡಿ : ಪೇಜಾವರ ಶ್ರೀ

ನಿಮ್ಮಲ್ಲಿ ಬೈಕ್ ಇದೆಯಾ? ಹಾಗಿದ್ದರೆ ಕನಿಷ್ಠ 5 ಗಿಡಗಳನ್ನಾದರೂ ನೆಟ್ಟು ಪೋಷಿಸಿ ಹೆಮ್ಮರವಾಗುವಂತೆ ನೋಡಿಕೊಳ್ಳಿ...

ವಿಕ ಸುದ್ದಿಲೋಕ 18 Mar 2016, 3:02 pm
ಉಡುಪಿ:ನಿಮ್ಮಲ್ಲಿ ಬೈಕ್ ಇದೆಯಾ? ಹಾಗಿದ್ದರೆ ಕನಿಷ್ಠ 5 ಗಿಡಗಳನ್ನಾದರೂ ನೆಟ್ಟು ಪೋಷಿಸಿ ಹೆಮ್ಮರವಾಗುವಂತೆ ನೋಡಿಕೊಳ್ಳಿ...
Vijaya Karnataka Web  5
ಬೈಕ್ ಇದ್ದವರು 5 ಗಿಡ ನೆಡಿ : ಪೇಜಾವರ ಶ್ರೀ


ಕಾರು ಇದ್ದರೆ 10ಸಸಿಗಳು, ಬಸ್ ಮಾಲೀಕರಾಗಿದ್ದರೆ 50 ಸಸಿಗಳನ್ನು ನೆಟ್ಟು ಪೋಷಿಸುವ ಬದ್ಧತೆ ತೋರಿಸಿ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

ಪ್ರಕೃತಿಪ್ರಿಯ, ವಾತಾವರಣದಲ್ಲಾಗುತ್ತಿರುವ ವೈಪರೀತ್ಯಗಳ ಬಗ್ಗೆ ತೀವ್ರ ಆತಂಕ ಹೊಂದಿದ ಶ್ರೀಗಳು ವೃಕ್ಷ ರಕ್ಷ ವಿಶ್ವ ರಕ್ಷ ಆಂದೋಲನದ ಮೂಲಕ 1ಕೋಟಿ ಸಸಿಗಳನ್ನು ನೆಟ್ಟು ನೆಟ್ಟು ಬೆಳೆಸುವ ಉತ್ಸಾಹದಲ್ಲಿದ್ದಾರೆ. ಪ್ರಕೃತಿ ಇಂದು ಎದುರಿಸುತ್ತಿರುವ ಅಪಾಯಗಳಿಗೆ ನಾವೇ ಹೊಣೆಗಾರರು ಮಾತ್ರವಲ್ಲ ಪರಿಹಾರ ವನ್ನೂ ಕಂಡುಕೊಳ್ಳಬೇಕಾಗಿದೆ. ವಾತಾವರಣದ ತಾಪಮಾನ ಏರಿಕೆಗೆ ವಾಹನಗಳ ಬಳಕೆ ಹೆಚ್ಚಳವೂ ಕಾರಣವಾಗಿದೆ.

ಹೀಗಾಗಿ ವಾಹನಗಳ ಮಾಲೀಕರು ಹೆಚ್ಚು ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪ್ರಕೃತಿಗೆ ದಂಡ ಕಟ್ಟಬೇಕು. ಕಾಂಕ್ರೀಟ್ ಕಟ್ಟಡಗಳ ಏರಿಕೆಯೂ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗಿದ್ದು ಎಲ್ಲ ಕಟ್ಟಡಗಳ ಮಾಲೀಕರು ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಬೆಳೆಸಲು ಸಿದ್ಧರಾಗುವಂತೆ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ