ಆ್ಯಪ್ನಗರ

‘ಸಂಸ್ಕೃತಿ, ಸಂಸ್ಕಾರದಿಂದ ತುಳುವಿಗೆ ವಿಶ್ವ ಮಾನ್ಯತೆ’

ಕರಾವಳಿಯಂತಹ ಸಣ್ಣ ಪ್ರದೇಶದ ತುಳು ಭಾಷೆ ಸಂಸ್ಕೃತಿ, ಸಂಸ್ಕಾರದ ತಳಗಟ್ಟಿನಲ್ಲಿ ವಿಶ್ವ ವ್ಯಾಪ್ತಿಯ ಮಾನ್ಯತೆ ಪಡೆದಿದೆ ಎಂದು ಉದ್ಯಮಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಹೇಳಿದ್ದಾರೆ.

Vijaya Karnataka 23 Dec 2018, 5:00 am
ಉಡುಪಿ: ಕರಾವಳಿಯಂತಹ ಸಣ್ಣ ಪ್ರದೇಶದ ತುಳು ಭಾಷೆ ಸಂಸ್ಕೃತಿ, ಸಂಸ್ಕಾರದ ತಳಗಟ್ಟಿನಲ್ಲಿ ವಿಶ್ವ ವ್ಯಾಪ್ತಿಯ ಮಾನ್ಯತೆ ಪಡೆದಿದೆ ಎಂದು ಉದ್ಯಮಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಹೇಳಿದ್ದಾರೆ.
Vijaya Karnataka Web 1


ಉಡುಪಿ ತುಳುಕೂಟದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ(17ನೇ ವರ್ಷದ ಕೆಮ್ತೂರು ತುಳು ನಾಟಕ ಹಬ್ಬ) ಉದ್ಘಾಟಿಸಿ ಶನಿವಾರ ಮಾತನಾಡಿದರು.

ವ್ಯಕ್ತಿಯ ಬದುಕಿನ ಉನ್ನತಿಗೆ ಪೂರಕವಾದ ತುಳು ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡಬೇಕು. ಕರಾವಳಿಯಿಂದ ಮುಂಬಯಿ, ಬೆಂಗಳೂರು, ವಿದೇಶದಲ್ಲಿ ನೆಲೆಯಾಗಿ ಕನ್ನಡ ಮರೆತರೂ ತುಳು ಮಾತನಾಡುವವರು, ಮಕ್ಕಳಿಗೂ ಕಲಿಸುವವರಿದ್ದಾರೆ ಎಂದರು.

ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್‌ ಡಾ. ಎಂ.ಜಿ. ವಿಜಯ ಮಾತನಾಡಿ, ಸಾಹಿತ್ಯ ಪ್ರಕಾರದಲ್ಲಿ ನಾಟಕಕ್ಕೆ ಮಹತ್ವವಿದ್ದು ಚರಿತ್ರೆ, ಜನಜೀವನ ಬಿಂಬಿಸಿ ಜನರಿಗೆ ಪಾಠ ಹೇಳಲು ಬಳಕೆಯಲ್ಲಿದೆ. ಸಾಮಾಜಿಕ ಬದಲಾವಣೆ, ತಿದ್ದುವ ಸಾಧನವಾದ ನಾಟಕದಲ್ಲಿ ಮಾತಿನ ಜತೆಗೆ ಭಾವನೆ ಆಂತರ್ಯದಿಂದ ಬರಬೇಕು ಎಂದು ಹೇಳಿದರು.

ವಿ.ಜಿ. ಶೆಟ್ಟಿ ಮಾತನಾಡಿ, ನಾವು ಭಾಷಾಂಧರಾಗದೆ ಅನ್ಯ ಭಾಷೆಗಳನ್ನು ಕಲಿಯಬೇಕು. ನಮ್ಮ ಭಾಷೆ, ಆಚಾರ ವಿಚಾರ, ಸಂಸ್ಕೃತಿಯನ್ನು ಮರೆಯಬಾರದು ಎಂದರು. ತೀರ್ಪುಗಾರರಾದ ಪ್ರಭಾಕರ ಜಿ. ಪಿ., ಎಂ.ಎಸ್‌.ಭಟ್‌, ಬಿ.ಎಸ್‌. ರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು. ವಿಜಯ ಕುಮಾರ್‌ ಶೆಟ್ಟಿ , ಚೈತನ್ಯ ಎಂ.ಜಿ., ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು. ನಾಟಕ ಸ್ಪರ್ಧೆ ಸಂಚಾಲಕ ಪ್ರಭಾಕರ ಭಂಡಾರಿ ಪ್ರಾಸ್ತಾವಿಕ ಮಾತನ್ನಾಡಿದರು. ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯಶೋದಾ ಕೇಶವ ಪ್ರಾರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ