ಆ್ಯಪ್ನಗರ

ಉಡುಪಿಯ ಮನೆಯೊಂದರ ಅಡುಗೆ ಕೋಣೆ ಡಬ್ಬದಲ್ಲಿಟ್ಟಿದ್ದ 22 ಲಕ್ಷ ರೂ. ಕಳ್ಳತನ!

ಉಡುಪಿಯಲ್ಲಿ ಹಾಡಹಗಲೇ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 22 ಲಕ್ಷ ರೂ. ನಗದು ಜತೆಗೆ ಬೆಳ್ಳಿ ಕಳ್ಳತನವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Vijaya Karnataka 14 Sep 2019, 10:11 am
ಉಡುಪಿ: ನಗರದ ಒಳಕಾಡು ಹರಿಶ್ಚಂದ್ರ ಮಾರ್ಗದಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿಟ್ಟಿದ್ದ 22 ಲಕ್ಷ ರೂ. ನಗದು ಹಾಗೂ ಬೆಳ್ಳಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web theft


ಒಳಕಾಡು ಹರಿಶ್ಚಂದ್ರ ಮಾರ್ಗದ ಛತ್ರಪತಿ ಶಿವಾಜಿ ರೋಡ್‌ ನಿವಾಸಿ ಸುನಂದ ಮಾಣಿಕ್ಯ ಪಾಟೀಲ ಎಂಬವರ ಮನೆಯಲ್ಲಿ ಸೆ. 12ರಂದು ಈ ಘಟನೆ ನಡೆದಿದ್ದು, ಅಡುಗೆ ಕೋಣೆಯೊಳಗೆ ಡಬ್ಬದಲ್ಲಿಟ್ಟಿದ್ದ ಹಣ ಕಳವಾಗಿದೆ.

ಮನೆಯವರು ಪ್ರತಿಷ್ಠಿತ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಟಿಫಿನ್‌ ನೀಡುವ ಸಲುವಾಗಿ ಮಧ್ಯಾಹ್ನ 12.15ಕ್ಕೆ ಮನೆಗೆ ಬೀಗ ಹಾಕಿ ಹೋಗಿದ್ದರು. ಮಧ್ಯಾಹ್ನ 1 ಗಂಟೆಗೆ ವಾಪಸ್‌ ಬಂದು ನೋಡುವಾಗ ಮನೆ ಬಾಗಿಲ ಬೀಗ ಮುರಿದಿದೆ. 22 ಲಕ್ಷ ರೂ. ನಗದು ಹಾಗೂ 30 ಸಾವಿರ ರೂ. ಮೌಲ್ಯದ ಬೆಳ್ಳಿ ಕಳವು ಆಗಿದೆ.

ಈ ಕೃತ್ಯವನ್ನು ಸುನಂದ ಮಾಣಿಕ್ಯ ಪಾಟೀಲರ ಗಂಡನ ಸಂಬಂಧಿ ಸಾಂಗ್ಲಿಯ ಅತುಲ ಬಾಗ್ನೆ ಹಾಗೂ ಇನ್ನೊಬ್ಬ ಸೇರಿ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ