ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಣ್ಮರೆಯಾದ 7 ಮಂದಿ ಏನಾದರೆನ್ನುವ ಸ್ಪಷ್ಟ ಚಿತ್ರಣವನ್ನು ವಾರದೊಳಗೆ ಮೀನುಗಾರರಿಗೆ ನೀಡದಿದ್ದರೆ ಬೀದಿಗಿಳಿದು ಹೋರಾಡುವ ಎಚ್ಚರಿಕೆಯನ್ನು ಉತ್ತರ ಕನ್ನಡ ಮೀನುಗಾರರು ಶನಿವಾರ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಎಸ್ಪಿ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ, ಮೀನುಗಾರರ ಜಂಟಿ ಸಭೆ ನಡೆಸಿದ್ದು, ಈ ಸಂದರ್ಭ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ತಿಳಿಸಿದ್ದಾರೆ.
ವಿ.ಕ. ಜತೆ ಮಾತನಾಡಿದ ಅವರು, ಮೀನುಗಾರರು ನಾಪತ್ತೆಯಾಗಿ 35 ದಿನಗಳೇ ಕಳೆದಿದ್ದು, ಯಾವ ಸುಳಿವೂ ಸಿಕ್ಕಿಲ್ಲ. ಡಿಸಿ ಕಚೇರಿ ಸಭೆಯಲ್ಲಿ ಇಲಾಖೆ, ನೌಕಾಪಡೆ, ಕೋಸ್ಟ್ ಗಾರ್ಡ್ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ ಘಟನೆಯ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಅಧಿಕಾರಿಗಳಿಗೆ ಐವರ ಮನೆಯ ಪರಿಸ್ಥಿತಿಯನ್ನು ಮನದಟ್ಟು ಮಾಡಿದ್ದೇವೆ. ವಾರದೊಳಗೆ ಸಮಗ್ರ ಮಾಹಿತಿ ಕೊಡಲು ತಾಕೀತು ಮಾಡಿದ್ದು, ಸಿಗದೇ ಹೋದರೆ ಬೀದಿಗಿಳಿಯುವ ಬಗ್ಗೆ ಸೂಚನೆ ಕೊಟ್ಟಿದ್ದೇವೆ ಎಂದರು.
ನಾವು ಯಾವ ಸರಕಾರವನ್ನೂ ದೂರುತ್ತಿಲ್ಲ. ಐವರ ಮನೆಯಲ್ಲೂ ಹೋದವರು ಮರಳಿ ಬರುವರೆನ್ನುವ ನಿರೀಕ್ಷೆಯಿದೆ. ಎಲ್ಲೇ ಇರಲಿ ಒಮ್ಮೆ ತಂದು ನಮ್ಮ ಮುಂದೆ ಬಿಡಿ. ಸರಕಾರದ ಮನವೊಲಿಸಿ ನಮ್ಮ ಕೆಲಸ ಮಾಡಿಕೊಳ್ಳಬೇಕಿದೆ ಎಂದು ಮಾಂಗ್ರೆ ತಿಳಿಸಿದರು.
ಸಿಎಂ ಪರಿಹಾರ ಹಣ: ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಸಿಎಂ ಪರಿಹಾರ ನಿಧಿಯಿಂದ ಐವರು ಮೀನುಗಾರರ ಕುಟುಂಬಕ್ಕೆ ಘೋಷಿಸಿದ್ದ ತಾತ್ಕ್ಕಾಲಿಕ ಪರಿಹಾರ ಮೊತ್ತ 1 ಲಕ್ಷ ರೂ. ಶನಿವಾರ ಬಿಡುಗಡೆಗೊಂಡಿದ್ದು , 2, 3 ದಿನಗಳಲ್ಲಿ ಜಿಲ್ಲಾಡಳಿತ ಕುಟುಂಬಸ್ಥರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಮಾಂಗ್ರೆ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಎಸ್ಪಿ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ, ಮೀನುಗಾರರ ಜಂಟಿ ಸಭೆ ನಡೆಸಿದ್ದು, ಈ ಸಂದರ್ಭ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ತಿಳಿಸಿದ್ದಾರೆ.
ವಿ.ಕ. ಜತೆ ಮಾತನಾಡಿದ ಅವರು, ಮೀನುಗಾರರು ನಾಪತ್ತೆಯಾಗಿ 35 ದಿನಗಳೇ ಕಳೆದಿದ್ದು, ಯಾವ ಸುಳಿವೂ ಸಿಕ್ಕಿಲ್ಲ. ಡಿಸಿ ಕಚೇರಿ ಸಭೆಯಲ್ಲಿ ಇಲಾಖೆ, ನೌಕಾಪಡೆ, ಕೋಸ್ಟ್ ಗಾರ್ಡ್ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ ಘಟನೆಯ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಅಧಿಕಾರಿಗಳಿಗೆ ಐವರ ಮನೆಯ ಪರಿಸ್ಥಿತಿಯನ್ನು ಮನದಟ್ಟು ಮಾಡಿದ್ದೇವೆ. ವಾರದೊಳಗೆ ಸಮಗ್ರ ಮಾಹಿತಿ ಕೊಡಲು ತಾಕೀತು ಮಾಡಿದ್ದು, ಸಿಗದೇ ಹೋದರೆ ಬೀದಿಗಿಳಿಯುವ ಬಗ್ಗೆ ಸೂಚನೆ ಕೊಟ್ಟಿದ್ದೇವೆ ಎಂದರು.
ನಾವು ಯಾವ ಸರಕಾರವನ್ನೂ ದೂರುತ್ತಿಲ್ಲ. ಐವರ ಮನೆಯಲ್ಲೂ ಹೋದವರು ಮರಳಿ ಬರುವರೆನ್ನುವ ನಿರೀಕ್ಷೆಯಿದೆ. ಎಲ್ಲೇ ಇರಲಿ ಒಮ್ಮೆ ತಂದು ನಮ್ಮ ಮುಂದೆ ಬಿಡಿ. ಸರಕಾರದ ಮನವೊಲಿಸಿ ನಮ್ಮ ಕೆಲಸ ಮಾಡಿಕೊಳ್ಳಬೇಕಿದೆ ಎಂದು ಮಾಂಗ್ರೆ ತಿಳಿಸಿದರು.
ಸಿಎಂ ಪರಿಹಾರ ಹಣ: ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಸಿಎಂ ಪರಿಹಾರ ನಿಧಿಯಿಂದ ಐವರು ಮೀನುಗಾರರ ಕುಟುಂಬಕ್ಕೆ ಘೋಷಿಸಿದ್ದ ತಾತ್ಕ್ಕಾಲಿಕ ಪರಿಹಾರ ಮೊತ್ತ 1 ಲಕ್ಷ ರೂ. ಶನಿವಾರ ಬಿಡುಗಡೆಗೊಂಡಿದ್ದು , 2, 3 ದಿನಗಳಲ್ಲಿ ಜಿಲ್ಲಾಡಳಿತ ಕುಟುಂಬಸ್ಥರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಮಾಂಗ್ರೆ ತಿಳಿಸಿದ್ದಾರೆ.