ಆ್ಯಪ್ನಗರ

ಚಲಿಸುತ್ತಿದ್ದ ಬೈಕ್‌ ಮೇಲೆ ವಿದ್ಯುತ್ ಕಂಬ ಬಿದ್ದು ಸಹ ಸವಾರ ಗಂಭೀರ ಗಾಯ

ಕೆಳ ಪರ್ಕಳ ಸಮೀಪದ ಮನೆಯೊಂದರ ಕಾಂಪೌಂಡ್‍ನಲ್ಲಿದ್ದ ತೆಂಗಿನ ಮರವೊಂದು ಜೋರಾದ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದಾಗಿ ಕಂಪೌಂಡ್‍ನೊಳಗಿದ್ದ ವಿದ್ಯುತ್ ಕಂಬದ ಜತೆ ರಸ್ತೆ ಬದಿಯಲ್ಲಿದ್ದ ಕಂಬವೂ ತಂತಿ ಸಹಿತವಾಗಿ ಮುರಿದು ಬಿದ್ದಿತ್ತು.

Vijaya Karnataka Web 7 Sep 2020, 5:28 pm
ಉಡುಪಿ: ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬವೊಂದು ಚಲಿಸುತ್ತಿದ್ದ ಬೈಕ್‍ ಮೇಲೆ ಬಿದ್ದು ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಳಪರ್ಕಳ ಶ್ರೀಕೃಷ್ಣ ಕಲ್ಯಾಣ ಮಂಟಪದ ಬಳಿ ವರದಿಯಾಗಿದೆ.
Vijaya Karnataka Web Udupi


ಹಿರಿಯಡ್ಕ ಅಂಜಾರಿನ ಸದಾಶಿವ ಶೇರಿಗಾರ್ (58) ಘಟನೆಯಿಂದ ಗಾಯಗೊಂಡಿರುವ ಸಹಸವಾರ ಎಂದು ಗುರುತಿಸಲಾಗಿದೆ. ಸದ್ಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಬೈಕ್ ಸವಾರ ಹರೀಶ್ ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೀನುಗಾರರಿಗೆ ಮತ್ತೊಂದು ಸಂಕಷ್ಟ: ಗಂಗೊಳ್ಳಿ ಅಳಿವೆಯಲ್ಲಿ ಮರಳು ದಿಬ್ಬ ಸೃಷ್ಟಿ, ಹಲವು ಅನಾಹುತಕ್ಕೆ ಸಾಕ್ಷಿ!

ಕೆಳ ಪರ್ಕಳ ಸಮೀಪದ ಮನೆಯೊಂದರ ಕಾಂಪೌಂಡ್‍ನಲ್ಲಿದ್ದ ತೆಂಗಿನ ಮರವೊಂದು ಜೋರಾದ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದಾಗಿ ಕಂಪೌಂಡ್‍ನೊಳಗಿದ್ದ ವಿದ್ಯುತ್ ಕಂಬದ ಜತೆ ರಸ್ತೆ ಬದಿಯಲ್ಲಿದ್ದ ಕಂಬವೂ ತಂತಿ ಸಹಿತವಾಗಿ ಮುರಿದು ಬಿದ್ದಿತ್ತು.

ಅಲೆಯ ಹೊಡೆತಕ್ಕೆ ಮಗುಚಿ ಬಿದ್ದ ನಾಡದೋಣಿ, ನಾಲ್ವರು ಮೀನುಗಾರರು ಪಾರು

ಈ ವೇಳೆ ರಸ್ತೆಯಲ್ಲಿ ಬೈಕ್‍ನಲ್ಲಿ ಸಾಗುತ್ತಿದ್ದ ಹರೀಶ್ ಹಾಗೂ ಸದಾಶಿವ ಶೇರಿಗಾರ್ ಅವರ ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಕಂಬ ಮೇಲೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಸದಾಶಿವ ಅವರಿಗೆ ಗಾಯವಾಗಿದೆ. ಸ್ಥಳಕ್ಕೆ ಮಣಿಪಾಲ ಠಾಣಾ ಪೊಲೀಸರು, ಪರ್ಕಳ ಮೆಸ್ಕಾಂ ಸಿಬ್ಬಂದಿ ಆಗಮಿಸಿ ವಿದ್ಯುತ್ ಕಂಬ ಹಾಗೂ ತಂತಿಯನ್ನು ಬೇರ್ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಾಯಾಳುವನ್ನು ಸ್ಥಳೀಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ