ಆ್ಯಪ್ನಗರ

‘ಮಾದಕ ದ್ರವ್ಯದಿಂದ ಭಾರತ ಬಳಲದಿರಲಿ’

ಭಾರತ ವಿಶ್ವದಲ್ಲೇ ಅತಿ ಹೆಚ್ಚಿನ ಯುವಶಕ್ತಿ ಹೊಂದಿರುವ ಸದೃಢ ದೇಶವಾಗಿದ್ದು, ಮಾದಕ ವ್ಯಸನಗಳಿಂದ ದೇಶವನ್ನೇ ಬುಡಮೇಲು ಮಾಡಿ ಅಶಕ್ತರನ್ನು ಸೃಷ್ಟಿಸಬೇಡಿ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿಕಾಂತೇ ಗೌಡ ತಿಳಿಸಿದ್ದಾರೆ.

Vijaya Karnataka 17 Sep 2018, 3:21 pm
ಉಡುಪಿ: ಭಾರತ ವಿಶ್ವದಲ್ಲೇ ಅತಿ ಹೆಚ್ಚಿನ ಯುವಶಕ್ತಿ ಹೊಂದಿರುವ ಸದೃಢ ದೇಶವಾಗಿದ್ದು, ಮಾದಕ ವ್ಯಸನಗಳಿಂದ ದೇಶವನ್ನೇ ಬುಡಮೇಲು ಮಾಡಿ ಅಶಕ್ತರನ್ನು ಸೃಷ್ಟಿಸಬೇಡಿ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿಕಾಂತೇ ಗೌಡ ತಿಳಿಸಿದ್ದಾರೆ.
Vijaya Karnataka Web maralu


ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರೆಸ್‌ ಕ್ಲಬ… ಸಹಯೋಗದಲ್ಲಿ ಮಾದಕ ವ್ಯಸನ ವಿರುದ್ಧ ಮಾಸಾಚರಣೆ ಅಂಗವಾಗಿ ಮಲ್ಪೆ ಕಡಲ ಕಿನಾರೆಯಲ್ಲಿ ಭಾನುವಾರ ನಡೆದ ಕಾರ್ಟೂನ್‌, ಮರಳ ಶಿಲ್ಪ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಬ್ಬ ವ್ಯಕ್ತಿ ಮಾದಕ ವಸ್ತುವಿನ ಚಟ ಹತ್ತಿಸಿಕೊಂಡು ತಾನು ಹಾಳಾಗುವುದರ ಜತೆಗೆ ತನ್ನ ಇಡೀ ಕುಟುಂಬದ ಅವನತಿಗೆ ಕಾರಣವಾಗುತ್ತಾನೆ. ಈ ವ್ಯಸನ ವಿರುದ್ಧ ಪೊಲೀಸರು ಮಾತ್ರವಲ್ಲ, ಪ್ರತಿ ನಾಗರಿಕರೂ ಕೈ ಜೋಡಿಸಿ ಹೋರಾಟ ನಡೆಸಬೇಕೆಂದರು. ವ್ಯಂಗ್ಯಚಿತ್ರಕಾರ ಜೇಮ್ಸ… ವಾಜ್‌ ಚಿತ್ರ ಬರೆಯವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್‌ ಮಾತನಾಡಿದರು. ಫೋಟೊಗ್ರಾಫರ್ಸ್‌ ಆಸೋಸಿಯೇಶನ್‌ ಅಧ್ಯಕ್ಷ ಜನಾರ್ದನ ಕೊಡವೂರು, ಮಲ್ಪೆ ಅಭಿವೃದ್ಧಿ ಸಮಿತಿ ಸಂಯೋಜಕ ಸುದೇಶ್‌ ಶೆಟ್ಟಿ, ಪತ್ರಕರ್ತರ ಸಂಘದ ಸಹಕಾರ್ಯದರ್ಶಿ ಮೈಕೆಲ್‌ ರಾಡ್ರಿಗಸ್‌ ಉಪಸ್ಥಿತರಿದ್ದರು. ಪತ್ರಕರ್ತರಾದ ನಾಗರಾಜ್‌ ರಾವ್‌ ವರ್ಕಾಡಿ ಸ್ವಾಗತಿಸಿ, ವಂದಿಸಿದರು. ಇರ್ಷಾದ್‌ ಕಿನ್ನಿಗೋಳಿ ನಿರೂಪಿಸಿದರು.

ಜೇಮ್ಸ… ವಾಜ…, ಜೀವನ್‌ ಶೆಟ್ಟಿ, ತ್ರಿವರ್ಣ ವಿ.ಎಂ. ಮಾದಕ ವಸ್ತು ವಿರುದ್ಧ ಜಾಗೃತಿ ಕಾರ್ಟೂನು ಬಿಡಿಸಿದರು. ಹರೀಶ್‌ ಸಾಗಾ, ಸುನಿಲ್‌ ಓಂತಿಬೆಟ್ಟು ಮತ್ತು ಜಗದೀಶ್‌ ಆಚಾರ್ಯ ಮತ್ತು ತಂಡ ಮರಳ ಶಿಲ್ಪಗಳನ್ನು ರಚಿಸಿ, ಸಾರ್ವಜನಿಕರ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ