ಆ್ಯಪ್ನಗರ

ಸೌಹಾರ್ದ ಸಮಿತಿ: ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ಪ್ರದಾನ

ಶಿಕ್ಷಣವನ್ನು ಹೃದಯಗಳನ್ನು ಬೆಸೆಯುವ ಸೇತುವೆ ನಿರ್ಮಿಸಲು ಬಳಸಿಕೊಳ್ಳದ ಹೊರತು ರಾಷ್ಟ್ರಸೇವೆ ಅಸಾಧ್ಯ ಎಂದು ಶಿಕ್ಷ ಣ ತಜ್ಞ ಹಾಗೂ ನಿವೃತ್ತ ಶಾಲಾ ನಿರೀಕ್ಷ ಕ ಅಡ್ವೆ ರವೀಂದ್ರ ಪೂಜಾರಿ ತಿಳಿಸಿದ್ದಾರೆ.

Vijaya Karnataka 17 Jun 2019, 5:00 am
ಉಡುಪ: ಶಿಕ್ಷಣವನ್ನು ಹೃದಯಗಳನ್ನು ಬೆಸೆಯುವ ಸೇತುವೆ ನಿರ್ಮಿಸಲು ಬಳಸಿಕೊಳ್ಳದ ಹೊರತು ರಾಷ್ಟ್ರಸೇವೆ ಅಸಾಧ್ಯ ಎಂದು ಶಿಕ್ಷ ಣ ತಜ್ಞ ಹಾಗೂ ನಿವೃತ್ತ ಶಾಲಾ ನಿರೀಕ್ಷ ಕ ಅಡ್ವೆ ರವೀಂದ್ರ ಪೂಜಾರಿ ತಿಳಿಸಿದ್ದಾರೆ.
Vijaya Karnataka Web news/udupi/award
ಸೌಹಾರ್ದ ಸಮಿತಿ: ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ಪ್ರದಾನ


ಅವರು ಸೌಹಾರ್ದ ಸಮಿತಿ ತೋನ್ಸೆ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಕ ಪ್ರಶಸ್ತಿಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂತ ತೆರೇಸಾ ಇಗರ್ಜಿ ಧರ್ಮ ಗುರು ವಿಕ್ಟರ್‌ ಡಿಸೋಜ, ವಿದ್ಯಾರ್ಥಿಗಳನ್ನು ಅಭಿನಂದಿಸಿ ಸೌಹಾರ್ದ ಸಮಿತಿಯ ಆಶಯವನ್ನು ಈಡೇರಿಸುವಂತೆ ಸಲಹೆ ನೀಡಿದರು.

ಬ್ರಹ್ಮಾವರ ಕ್ಷೇತ್ರ ಶಿಕ್ಷ ಣಾಧಿಕಾರಿ ಒ.ಆರ್‌. ಪ್ರಕಾಶ್‌ ಮಾತನಾಡಿ, ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಯ ಜನರು ಒಂದಾಗಿ ಬಾಳುತ್ತಿರುವುದೇ ನಮ್ಮ ದೇಶದ ಶಕ್ತಿ. ಸೌಹಾರ್ದ ಸಮಿತಿಯ ಪ್ರೋತ್ಸಾಹದಿಂದ ಪ್ರೇರಣೆಯನ್ನು ಪಡೆದು ನಮ್ಮ ವಿದ್ಯಾರ್ಥಿಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆಯುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ರಾಷ್ಟ್ರದ ಶಕ್ತಿಯಾಗಬೇಕೆಂದರು.

ಬಡಾನಿಡಿಯೂರು ಪಂಚಾಯಿತಿ ಅಧ್ಯಕ್ಷ ಉಮೇಶ್‌ ಪೂಜಾರಿ, ಪಡುತೋನ್ಸೆ ಪಂಚಾಯಿತಿ ಅಧ್ಯಕ್ಷೆ ಫೌಝಿಯಾ ಸಾದಿಕ್‌ ಮಾತನಾಡಿದರು. ಕೆಮ್ಮಣ್ಣು ಕ್ಯಾಥೊಲಿಕ್‌ ಸಭಾ ಅಧ್ಯಕ್ಷ ಅರುಣ್‌ ಫರ್ನಾಂಡಿಸ್‌, ಮೂಡುತೋನ್ಸೆ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್‌ ಉಪಸ್ಥಿತರಿದ್ದರು. ಪಡುತೋನ್ಸೆ, ಮೂಡುತೋನ್ಸೆ ಮತ್ತು ಬಡಾನಿಡಿಯೂರು ಪಂಚಾಯಿತಿ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 85 ಅಧಿಕ ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 60 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಿತಿ ಅಧ್ಯಕ್ಷ ಸತೀಶ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿ ಲೂವಿಸ್‌ ವಂದಿಸಿದರು. ಪ್ರಶಾಂತ್‌ ಶೆಟ್ಟಿ ಹಾವಂಜೆ, ವೆರೋನಿಕಾ ಕರ್ನೇಲಿಯೋ ಕಾರ‍್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ