ಆ್ಯಪ್ನಗರ

ಹದಗೆಟ್ಟ ರಸ್ತೆಯಲ್ಲಿ ಪ್ರಯಾಣ: ಪೇಜಾವರ ಶ್ರೀಗೆ ಬೆನ್ನು ನೋವು

ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪೇಜಾವರ ಶ್ರೀಗಳು ಶುಕ್ರವಾರ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಆಗ ಹದಗೆಟ್ಟ ರಸ್ತೆಯಲ್ಲಿ ಅಕಸ್ಮಾತ್ತಾಗಿ ಕಾರ್‌ಗೆ ಬ್ರೇಕ್ ಹಾಕಿದ್ದರಿಂದಾಗಿ ಪೇಜಾವರ ಶ್ರೀಗಳ ಬೆನ್ನು ಹುರಿ ನೋವು ಉಲ್ಬಣಿಸಿದೆ.

Vijaya Karnataka Web 20 Jan 2018, 12:54 pm
ಉಡುಪಿ: ಪರ್ಯಾಯ ಸಂಭ್ರಮದ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪೇಜಾವರ ಶ್ರೀಗಳು ಶುಕ್ರವಾರ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಆಗ ಹದಗೆಟ್ಟ ರಸ್ತೆಯಲ್ಲಿ ಅಕಸ್ಮಾತ್ತಾಗಿ ಕಾರ್‌ಗೆ ಬ್ರೇಕ್ ಹಾಕಿದ್ದರಿಂದಾಗಿ ಪೇಜಾವರ ಶ್ರೀಗಳ ಬೆನ್ನು ಹುರಿ ನೋವು ಉಲ್ಬಣಿಸಿದೆ.
Vijaya Karnataka Web back pain to pejawar sri
ಹದಗೆಟ್ಟ ರಸ್ತೆಯಲ್ಲಿ ಪ್ರಯಾಣ: ಪೇಜಾವರ ಶ್ರೀಗೆ ಬೆನ್ನು ನೋವು


ಶ್ರೀಗಳು ಹೈದರಾಬಾದ್‌ನಿಂದ ವಿಮಾನದಲ್ಲಿ ಮಂಗಳೂರು -ಉಡುಪಿಗೆ ಬಂದು ಶನಿವಾರ ಕಾರ್ಕಳದ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು. ರಾತ್ರಿ 9.30ಕ್ಕೆ ಕಾರಿನಲ್ಲಿ ಶ್ರೀಗಳು ಮಲಗಿದ್ದಾಗ ಬ್ರೇಕ್‌ ಹಾಕಿದ ಕಾರಣ ಬೆನ್ನುಹುರಿ ನೋವು ಹೆಚ್ಚಿದ್ದು, ಕರ್ನೂಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಒಂದು ವಾರದ ವಿಶ್ರಾಂತಿ ಸೂಚಿಸಿದ್ದಾರೆ. ಭಕ್ತರ ಮನೆಯಲ್ಲಿ ವಿಶ್ರಾಂತಿ ಪಡೆದ ಶ್ರೀ ಶನಿವಾರ ಹೈದರಾಬಾದ್‌ನಿಂದ ವಿಮಾನ ಮೂಲಕ ಮಂಗಳೂರು- ಉಡುಪಿಗೆ ಮರಳಿ ವಿಜಯಧ್ವಜದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಪಟ್ಟದ ದೇವರು ರಾಮ ವಿಠ್ಠಲ ಪೂಜೆಯನ್ನು ಕಿರಿಯ ಯತಿ ನೆರವೇರಿಸಿದ್ದು ಮಹಾಪೂಜೆ ಆರತಿಯನ್ನು ವಿಶ್ವೇಶತೀರ್ಥರು ಮಾಡಿದರು. ಕಾರ್ಕಳದ ಕಾರ್ಯಕ್ರಮಕ್ಕೆ ತೆರಳಲಾಗದ ಶ್ರೀಪಾದರು ಮಂಗಳೂರು ಕಾರ್ಯಕ್ರಮಕ್ಕೆ ಕಿರಿಯ ಶ್ರೀಗಳನ್ನು ಕಳಿಸಿದ್ದಾರೆ. ವಿಶ್ರಾಂತಿ ಆಗತ್ಯ ಇಇರುವ ಕಾರಣ ಮಾಧ್ಯಮ ಮತ್ತು ಭಕ್ತರಿಗೆ ಸ್ವಾಮೀಜಿಯನ್ನು ಭೇಟಿಯಾಗಲು ಒಂದು ವಾರ ಅವಕಾಶ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ