ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಹೇಳಿಕೊಂಡು ಆಸ್ಕರ್ ಫರ್ನಾಂಡಿಸ್ ಅವರ ಜತೆ ಬಂದಿದ್ದರು ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಆರೆಸ್ಸೆಸ್ ಅಥವಾ ಸಂಘ ಪರಿವಾದರ ಜನ ಅಲ್ಲ. ಅವರು ಜೆಡಿಎಸ್ನಲ್ಲಿ ಇದ್ದವರು. ಅವರ ತಂದೆ ಕೂಡ ಜೆಡಿಎಸ್ನಲ್ಲಿ ನಾಯಕರಾಗಿದ್ದವರು. ಈ ಹಿಂದೆ ಎಂ.ಪಿ ಪ್ರಕಾಶ್ ಅವರೆಲ್ಲಾ ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ, ಬೊಮ್ಮಾಯಿ ಕೂಡ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿ ಬಂದಿದ್ದರು ಎಂದು ಸೊರಕೆ ಹೇಳಿದ್ದಾರೆ.
ಬೊಮ್ಮಾಯಿ ಅವರು ಜಾತ್ಯಾತೀತವಾದಿಗಳು. ಅಂಥವರನ್ನು ಬಿಜೆಪಿಯವರು ಸಹಿಸುತ್ತಾರಾ. ಅವರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ನಂಥವರು ಬೇಕು. ಹಾಗಾಗಿ ಬೊಮ್ಮಾಯಿ ಅವರು ಎಷ್ಟು ಸಮಯ ಇರುತ್ತಾರೆ ಎಂದು ಕಾದು ನೋಡಬೇಕು ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಇದೇ ವೇಳೆ ಪ್ರತಿಯೊಂದಕ್ಕೂ ಬಿಜೆಪಿಯವರು ಕಾಂಗ್ರೆಸ್ ಮೇಲೆ ಅಪವಾದ ಹೊರೆಸುತ್ತಾರೆ ಎಂದು ಕಿಡಿ ಕಾರಿರುರುವ ಅವರು, 'ಸೂರ್ಯ ಹುಟ್ಟಿದರೂ ಕಾಂಗ್ರೆಸ್ ಕಾರಣ. ಸೂರ್ಯ ಅಸ್ತಮಿಸಿದರೂ ಕಾಂಗ್ರೆಸ್ ಕಾರಣ ಎಂದು ಬಿಜೆಪಿಯವರು ಸಬೂಬು ಹೇಳುತ್ತಾರೆ. ಕಾಂಗ್ರೆಸ್ನವರನ್ನು ಕದ್ದುಕೊಂಡು ಹೋಗಿ ಸರ್ಕಾರ ಮಾಡುವುದು. ಕೊನೆಗೆ ಕಾಂಗ್ರೆಸ್ನವರನ್ನೇ ಬೈಯುವುದು' ಎಂದು ಹೇಳಿದ್ದಾರೆ.
ಇನ್ನು ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 'ಯಡಿಯೂರಪ್ಪ ಕಣ್ಣೀರಿಡುತ್ತಲೇ ರಾಜೀನಾಮೆ ನೀಡಿದ್ರು. ಇದು ಅವರಿಗೆ ಬೇಸರ ಉಂಟು ಮಾಡಿರಬಹುದು. ಈಗ ಅವರನ್ನು ರಾಜೀನಾಮೆ ಕೊಡಿಸಿ ಅವರ ತಲೆ ಮೇಲೆ ಇನ್ನೊಬ್ಬರನ್ನು ಕೂರಿಸಿದರೇ ಸಹಜವಾಗಿಯೇ ಬೇಸರ ಉಂಟಾಗುತ್ತದೆ. ಯಡಿಯೂರಪ್ಪ 45 ವರ್ಷ ಪಕ್ಷ ಸಂಘಟಿಸಿದವರು. ಅವರೇ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಅವರನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ಅವರನ್ನು ನಡೆಸಿಕೊಂಡ ರೀತಿ ನೋಡಿದರೆ ಹಲವು ಮಂದಿ ಬಿಜೆಪಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಸರ್ಕಾರದ ಪರಿಸ್ಥಿತಿ ಐಸಿಯೂನಲ್ಲಿ ಇದ್ದ ಹಾಗೆ ಇದೆ' ಎಂದು ವ್ಯಂಗ್ಯವಾಡಿದರು.
ದೇವಸ್ಥಾನ ತೆರವು ಬಗ್ಗೆ ಪ್ರತಿಕ್ರಿಯಿಸಿರುವ ಅವರು,' ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದೇ ಧರ್ಮ, ದೇವರ ಹೆಸರಿನಲ್ಲಿ. ಅಧಿಕಾರದ ಕುರ್ಚಿಯಲ್ಲಿ ಕುಳಿತದ್ದೂ ಕೂಡ ದೇವರ ಹೆಸರಿನಲ್ಲಿ. ಈಗ ದೇವಸ್ಥಾನ ಒಡೆದಿದ್ದಕ್ಕೆ ಭಜರಂಗದಳ, ಹಿಂದೂ ಸೇನೆ ಮುಂತಾದ ಅವರ ಸಂಘ ಸಂಸ್ಥೆಗಳೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೇ ಧರ್ಮ ದೇಗುಲದ ಬಗ್ಗೆ ಪಾಠ ಮಾಡುವ ಅವರು, ದೇಗುಲ ಒಡೆಯಬೇಕಾದರೆ ಪಾಲಿಸಬೇಕಾದ ನಿಬಂಧನೆಗಳನ್ನು ಯಾಕೆ ಪಾಲಿಸಿಲ್ಲ? ಜೆಸಿಬಿ ತಂದು ಒಡೆದುಹಾಕುವ ದರ್ದು ಏನಿತ್ತು? ಮಾಡುವುದೆಲ್ಲಾ ಮಾಡಿ ಈಗ ಮುಖ್ಯ ಕಾರ್ಯದರ್ಶಿಗಳನ್ನು ಹೊಣೆ ಮಾಡುತ್ತಿದ್ದಾರೆ. ಇಲ್ಲಿ ಮುಖ್ಯ ಕಾರ್ಯದರ್ಶಿಗಳ ಸರ್ಕಾರ ಇರುವುದಾ? ಬಿಜೆಪಿ ಸರ್ಕಾದಿಂದಲೇ ಇವತ್ತು ದೇವಸ್ಥಾನ ಒಡೆಯುವ ಕೆಲಸ ಆಗಿದೆ' ಎಂದು ಕಿಡಿ ಕಾರಿದರು.
ಬೊಮ್ಮಾಯಿ ಅವರು ಜಾತ್ಯಾತೀತವಾದಿಗಳು. ಅಂಥವರನ್ನು ಬಿಜೆಪಿಯವರು ಸಹಿಸುತ್ತಾರಾ. ಅವರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ನಂಥವರು ಬೇಕು. ಹಾಗಾಗಿ ಬೊಮ್ಮಾಯಿ ಅವರು ಎಷ್ಟು ಸಮಯ ಇರುತ್ತಾರೆ ಎಂದು ಕಾದು ನೋಡಬೇಕು ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಇದೇ ವೇಳೆ ಪ್ರತಿಯೊಂದಕ್ಕೂ ಬಿಜೆಪಿಯವರು ಕಾಂಗ್ರೆಸ್ ಮೇಲೆ ಅಪವಾದ ಹೊರೆಸುತ್ತಾರೆ ಎಂದು ಕಿಡಿ ಕಾರಿರುರುವ ಅವರು, 'ಸೂರ್ಯ ಹುಟ್ಟಿದರೂ ಕಾಂಗ್ರೆಸ್ ಕಾರಣ. ಸೂರ್ಯ ಅಸ್ತಮಿಸಿದರೂ ಕಾಂಗ್ರೆಸ್ ಕಾರಣ ಎಂದು ಬಿಜೆಪಿಯವರು ಸಬೂಬು ಹೇಳುತ್ತಾರೆ. ಕಾಂಗ್ರೆಸ್ನವರನ್ನು ಕದ್ದುಕೊಂಡು ಹೋಗಿ ಸರ್ಕಾರ ಮಾಡುವುದು. ಕೊನೆಗೆ ಕಾಂಗ್ರೆಸ್ನವರನ್ನೇ ಬೈಯುವುದು' ಎಂದು ಹೇಳಿದ್ದಾರೆ.
ಇನ್ನು ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 'ಯಡಿಯೂರಪ್ಪ ಕಣ್ಣೀರಿಡುತ್ತಲೇ ರಾಜೀನಾಮೆ ನೀಡಿದ್ರು. ಇದು ಅವರಿಗೆ ಬೇಸರ ಉಂಟು ಮಾಡಿರಬಹುದು. ಈಗ ಅವರನ್ನು ರಾಜೀನಾಮೆ ಕೊಡಿಸಿ ಅವರ ತಲೆ ಮೇಲೆ ಇನ್ನೊಬ್ಬರನ್ನು ಕೂರಿಸಿದರೇ ಸಹಜವಾಗಿಯೇ ಬೇಸರ ಉಂಟಾಗುತ್ತದೆ. ಯಡಿಯೂರಪ್ಪ 45 ವರ್ಷ ಪಕ್ಷ ಸಂಘಟಿಸಿದವರು. ಅವರೇ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಅವರನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ಅವರನ್ನು ನಡೆಸಿಕೊಂಡ ರೀತಿ ನೋಡಿದರೆ ಹಲವು ಮಂದಿ ಬಿಜೆಪಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಸರ್ಕಾರದ ಪರಿಸ್ಥಿತಿ ಐಸಿಯೂನಲ್ಲಿ ಇದ್ದ ಹಾಗೆ ಇದೆ' ಎಂದು ವ್ಯಂಗ್ಯವಾಡಿದರು.
ದೇವಸ್ಥಾನ ತೆರವು ಬಗ್ಗೆ ಪ್ರತಿಕ್ರಿಯಿಸಿರುವ ಅವರು,' ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದೇ ಧರ್ಮ, ದೇವರ ಹೆಸರಿನಲ್ಲಿ. ಅಧಿಕಾರದ ಕುರ್ಚಿಯಲ್ಲಿ ಕುಳಿತದ್ದೂ ಕೂಡ ದೇವರ ಹೆಸರಿನಲ್ಲಿ. ಈಗ ದೇವಸ್ಥಾನ ಒಡೆದಿದ್ದಕ್ಕೆ ಭಜರಂಗದಳ, ಹಿಂದೂ ಸೇನೆ ಮುಂತಾದ ಅವರ ಸಂಘ ಸಂಸ್ಥೆಗಳೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೇ ಧರ್ಮ ದೇಗುಲದ ಬಗ್ಗೆ ಪಾಠ ಮಾಡುವ ಅವರು, ದೇಗುಲ ಒಡೆಯಬೇಕಾದರೆ ಪಾಲಿಸಬೇಕಾದ ನಿಬಂಧನೆಗಳನ್ನು ಯಾಕೆ ಪಾಲಿಸಿಲ್ಲ? ಜೆಸಿಬಿ ತಂದು ಒಡೆದುಹಾಕುವ ದರ್ದು ಏನಿತ್ತು? ಮಾಡುವುದೆಲ್ಲಾ ಮಾಡಿ ಈಗ ಮುಖ್ಯ ಕಾರ್ಯದರ್ಶಿಗಳನ್ನು ಹೊಣೆ ಮಾಡುತ್ತಿದ್ದಾರೆ. ಇಲ್ಲಿ ಮುಖ್ಯ ಕಾರ್ಯದರ್ಶಿಗಳ ಸರ್ಕಾರ ಇರುವುದಾ? ಬಿಜೆಪಿ ಸರ್ಕಾದಿಂದಲೇ ಇವತ್ತು ದೇವಸ್ಥಾನ ಒಡೆಯುವ ಕೆಲಸ ಆಗಿದೆ' ಎಂದು ಕಿಡಿ ಕಾರಿದರು.