ಆ್ಯಪ್ನಗರ

ಬೆಳ್ಮಣ್‌ ಟೋಲ್‌ ವಿರುದ್ಧ ಸಾರ್ವಜನಿಕರ ಸಮರ

ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್‌ನಲ್ಲಿ ರಾಜ್ಯ ಸರಕಾರದಿಂದ ಸುಂಕ ವಸೂಲಿ ಕೇಂದ್ರ ಆರಂಭಿಸಿರುತ್ತಿರುವುದನ್ನು ವಿರೋಧಿಸಿ, ಹೋರಾಟ ಸಮಿತಿ ಡಿ.20ರಂದು ಈ ಹೆದ್ದಾರಿಯನ್ನು ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

Vijaya Karnataka 19 Dec 2018, 5:00 am
ಉಡುಪಿ: ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್‌ನಲ್ಲಿ ರಾಜ್ಯ ಸರಕಾರದಿಂದ ಸುಂಕ ವಸೂಲಿ ಕೇಂದ್ರ ಆರಂಭಿಸಿರುತ್ತಿರುವುದನ್ನು ವಿರೋಧಿಸಿ, ಹೋರಾಟ ಸಮಿತಿ ಡಿ.20ರಂದು ಈ ಹೆದ್ದಾರಿಯನ್ನು ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
Vijaya Karnataka Web belman tol
ಬೆಳ್ಮಣ್‌ ಟೋಲ್‌ ವಿರುದ್ಧ ಸಾರ್ವಜನಿಕರ ಸಮರ


ಟೋಲ್‌ ಗೇಟ್‌ ಸುಂಕ ವಸೂಲಿ ಕೇಂದ್ರ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎನ್‌.ಸುಹಾಸ್‌ ಹೆಗ್ಡೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಸುಂಕ ವಸೂಲಿ ಕೇಂದ್ರವನ್ನು ವಿರೋಧಿಸಿ ಕಳೆದ ಅಕ್ಟೋಬರ್‌ನಲ್ಲಿ ಬೆಳ್ಮಣ್‌ನಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಪ್ರತಿಭಟನೆ ನಡೆಸಿ, ಯೋಜನೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಇದರಲ್ಲಿ ಸ್ಥಳೀಯ ಎಂಎಲ್‌ಎ, ಎಂಪಿಗಳು ಸೇರಿದ್ದಾರೆ. ಆದರೆ ಈ ಪ್ರತಿಭಟನೆಗೆ ಜಗ್ಗದ ರಾಜ್ಯ ಸರಕಾರ ಇದೀಗ ಪೊಲೀಸ್‌ ಬಲವನ್ನು ಬಳಸಿಕೊಂಡು ಟ್ರೋಲ್‌ ಗೇಟ್‌ ನಿರ್ಮಿಸಿ ಸಾರ್ವಜನಿಕರನ್ನು ಲೂಟಿ ಮಾಡಲು ಮುಂದಾಗಿದೆ ಎಂದು ದೂರಿದರು.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ, ಸುಮಾರು 40ಕ್ಕೂ ಅಧಿಕ ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯನ್ನೇ ಅವಲಂಬಿಸಿರುವ ಜನಸಾಮಾನ್ಯರಿಗೆ ಇದು ದೊಡ್ಡ ಹೊಡೆತ ನೀಡಲಿದೆ. ಅಲ್ಲದೆ, 26 ಕಿ.ಮೀ.ವ್ಯಾಪ್ತಿಯಲ್ಲಿ ಈಗಾಗಲೇ 3 ಟೋಲ್‌ಗೇಟ್‌ಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿರದ ಈ ಪ್ರಸ್ತಾವನೆ ಎಲ್ಲಿಂದ ಬಂತು ? ಎಂದು ಅವರು ಪ್ರಶ್ನಿಸಿದರು.

ಹೀಗಾಗಿ ಸರಕಾರದ ಕಣ್ತೆರೆಸಲು ಡಿ.20ರಂದು ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ಸಾರ್ವಜನಿಕರು ನಿರ್ಧರಿಸಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ಬೆಳ್ಮಣ್‌ ಬಸ್‌ ನಿಲ್ದಾಣದಲ್ಲಿ ಬೃಹತ್‌ ಪ್ರತಿಭಟನಾ ಸಭೆ ಹಾಗೂ ಮೆರವಣಿಗೆ ನಡೆಯಲಿದೆ. ಸರಕಾರ ತನ್ನ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು. ಜನರ ತಾಳ್ಮೆ ಪರೀಕ್ಷಿಸುವ ಕೆಲಸ ಮಾಡಬಾರದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಈ ಭಾಗದ ಎಲ್ಲ ಉದ್ಯಮಿಗಳು, ವರ್ತಕರು, ಸಂಘ ಸಂಸ್ಥೆಗಳು, ಬಸ್‌ ಮಾಲೀಕರು, ರಿಕ್ಷಾ -ಕಾರ್‌ ಚಾಲಕ ಮಾಲೀಕರು, ಕ್ರಷರ್‌ ಉದ್ಯಮಿಗಳು, ಕಲ್ಲು ಗಣಿಗಾರಿಕೆಯ ಉದ್ಯಮಿಗಳು, ಕೃಷಿಕರು ಬೆಂಬಲ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಶಶಿಧರ ಶೆಟ್ಟಿ, ಸರ್ವಜ್ಞ ತಂತ್ರಿ ಹಾಗೂ ಹರಿಪ್ರಸಾದ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ