ಉಡುಪಿ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿಘ್ನೇಶ್ 'ಮಿಸ್ಟರ್ ಮಂಗಳೂರು ಯುನಿವರ್ಸಿಟಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಂಗಳೂರು ವಿವಿ, ಅಜ್ಜರಕಾಡಿನ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಉಜ್ವಲ್ ಸಮೂಹ, ಲಯನ್ಸ್/ಲಯನೆಸ್ ಮತ್ತು ಲಿಯೋ ಕ್ಲಬ್ ಪರ್ಕಳ ವತಿಯಿಂದ ಅಜ್ಜರಕಾಡಿನ ಪುರಭವನದಲ್ಲಿ ಶನಿವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಬೆಸ್ಟ್ ಫಿಸಿಕ್ ಚಾಂಪಿಯನ್ಷಿಪ್ 2017-18 ನಡೆಯಿತು.
ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಉಡುಪಿ ಹಾಗೂ ಬೆಂಗಳೂರಿನಲ್ಲಿ ಅತ್ಯಾಧುನಿಕ ಜಿಮ್ ಆರಂಭವಾಗಲಿದ್ದು ತಲಾ 2ಕೋಟಿ ರೂ. ಅನುದಾನ ನೀಡಲಾಗುವುದು. ಕ್ರೀಡಾ ಇಲಾಖೆಗೆ ಬಜೆಟ್ನಲ್ಲಿ 2016-17ರಲ್ಲಿ ನೀಡಿದ ಅನುದಾನ 2017-18 ನೇ ಸಾಲಿನಲ್ಲಿ 257ರಿಂದ 459 ಕೋಟಿ ರೂ. ಗಳಿಗೇರಿದೆ. ಕ್ರೀಡಾ ಚಟುವಟಿಕೆಗೆ ಸರಕಾರ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು ಕ್ರೀಡಾಪಟಗಳ ಪ್ರತಿಭಾ ಶೋಧವಾಗಬೇಕು ಎಂದು ಹೇಳಿದರು.
ರಾಷ್ಟ್ರಮಟ್ಟದ ಕ್ರೀಡಾಕೂಟ, ಮೈಸೂರು ದಸರಾದಲ್ಲಿ 100, 200 ಮೀ. ಓಟದಲ್ಲಿ ದಾಖಲೆ ಮಾಡಿದ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಮನೀಶ್ಗೆ ಮಂಗಳೂರು ವಿವಿ ವತಿಯಿಂದ 1.50ಲಕ್ಷ ರೂ. ಪ್ರೋತ್ಸಾಹ ಧನವನ್ನು ಸಚಿವರು ಹಸ್ತಾಂತರಿಸಿದರು.
ಸಮಾರೋಪ: ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಿನ್ಸಿಪಾಲ್ ಪ್ರೊ. ಜಗದೀಶ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, 'ಮಿಸ್ಟರ್ ವರ್ಲ್ಡ್ ' ರೇಮಂಡ್ ಡಿಸೋಜ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ. ಕೆ., ವೇಣುಗೋಪಾಲ ನೋಂಡಾ, ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ ಎ. ಸುವರ್ಣ ಉಪಸ್ಥಿತರಿದ್ದರು.
ಫಲಿತಾಂಶ
60ಕೆ. ಜಿ. ವಿಭಾಗ: ಶರತ್ ಶೇರೆಗಾರ್, ಬಸ್ರೂರು ಶಾರದಾ ಕಾಲೇಜು(ಪ್ರ), ಗೌತಮ್, ಕಟಪಾಡಿ ಕೆವಿಎಸ್ಎಂ(ದ್ವಿ), ಸಂದೇಶ್ ಎನ್., ಮಣಿಪಾಲ ಎಂಪಿಎಂಸಿ(ತೃ), ಆದರ್ಶ್ ಬಿ., ಪುತ್ತೂರು ಸಂತ ಫಿಲೋಮಿನಾ(ಚ)
65ಕೆ. ಜಿ.: ವಿಘ್ನೇಶ್, ಮೂಡುಬಿದಿರೆ ಆಳ್ವಾಸ್ ಕಾಲೇಜು(ಪ್ರ), ರತನ್ ಕೆ. ಎಂ., ಸೋಮವಾರಪೇಟೆ ಸಂತ ಜೋಸೆಫ್ ಕಾಲೇಜು(ದ್ವಿ), ಪ್ರಜ್ವಲ್ ಗೋರಡ್ಕ, ಪುತ್ತೂರು ಸಂತ ಫಿಲೋಮಿನಾ ಕಾಲೇಜು(ತೃ), ಮಹಾದೇವ ಸ್ವಾಮಿ, ಮಂಗಳೂರು ವಿವಿ ಕ್ಯಾಂಪಸ್(ಚ).
70 ಕೆ. ಜಿ.: ಹರ್ಷಲ್ ಕುಮಾರ್, ಮೂಲ್ಕಿ ವಿಜಯ ಕಾಲೇಜು(ಪ್ರ), ಅಕ್ಷಯ್ ಕುಮಾರ್, ಮಣಿಪಾಲ ಎಂಪಿಎಂಸಿ(ದ್ವಿ), ಅಭಿಷೇಕ್ ಶೇರೆಗಾರ್, ಉಡುಪಿ ಪಿಪಿಸಿ(ತೃ), ರಿತೇಶ್ ಮೆಂಡನ್, ಮೂಲ್ಕಿ ವಿಜಯ ಕಾಲೇಜು(ಚ)
75 ಕೆ.ಜಿ. : ಆಶಿತ್ ಶೆಟ್ಟಿ, ಮೂಡುಬಿದಿರೆ ಆಳ್ವಾಸ್ ಕಾಲೇಜು(ಪ್ರ), ಗೌತಮ್ ಜಾಮ್ದಾರ್, ಉಡುಪಿ ಪಿಪಿಸಿ(ದ್ವಿ), ಆಶಿಶ್ ಕುಮಾರ್, ಮಂಗಳೂರು ಸಂತ ಅಲೋಶಿಯಸ್(ತೃ) , ನವೀದ್ ಅಂಜುಮ್, ಮೂಡುಬಿದಿರೆ ಆಳ್ವಾಸ್ ಕಾಲೇಜು(ಚ),
80 ಕೆ. ಜಿ.: ವಿರಾಜ್, ಸುರತ್ಕಲ್ ಗೋವಿಂದದಾಸ್ ಕಾಲೇಜು(ಪ್ರ), ನಿರಂಜನ್, ತೆಂಕನಿಡಿಯೂರು ಜಿಎಫ್ಜಿಸಿ(ದ್ವಿ), ಸುದರ್ಶನ್, ನಿಟ್ಟೆ ಡಾ. ಎನ್ಎಸ್ಎಎಂ ಎಫ್ಜಿಸಿ(ತೃ), ಗಣೇಶ್ ಪೈ, ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜು(ಚ)
90ಕೆ. ಜಿ. : ಸ್ವರೂಪ್ ಎಂ. ಬಂಗೇರ, ಮೂಡುಬಿದಿರೆ ಆಳ್ವಾಸ್ ಕಾಲೇಜು(ಪ್ರ), ಹೇಮನಾಥ್, ಮಣಿಪಾಲ ಎಂಪಿಎಂಸಿ(ದ್ವಿ), ಶ್ರೇಯಸ್ ಕಾಂಚನ್, ಕಾರ್ಕಳ ಶ್ರೀಭುವನೇಂದ್ರ ಕಾಲೇಜು(ತೃ)
ಸಮಗ್ರ ತಂಡ ಪ್ರಶಸ್ತಿ: ಮೂಡುಬಿದಿರೆ ಆಳ್ವಾಸ್ ಕಾಲೇಜು(22ಅಂಕ), ಮಣಿಪಾಲ ಎಂಪಿಎಂಸಿ(13ಅಂಕ), ಮೂಲ್ಕಿ ವಿಜಯ ಕಾಲೇಜು(8ಅಂಕ)