ಉಡುಪಿ: ಮೂಲತಃ ಉಡುಪಿ ಪೆರಂಪಳ್ಳಿಯ ಪುಷ್ಕರಣಿ ಪಿ. ಪೂಜಾರಿ, ಪ್ರಸ್ತುತ ಬೆಳಗಾವಿ ನಿವಾಸಿಯಾಗಿದ್ದು ಬೆಳಗಾವಿಯ ಕೆಎಲ್ಇ ಬಿ. ಎಸ್. ಜೀರಗೆ ಸಭಾಭವನದಲ್ಲಿ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ನೂಪುರ ಕಲಾವಿದ ಹಾಗೂ ಮೈಸೂರಿನ ಸಾಂಸ್ಕೃತಿಕ ಟ್ರಸ್ಟ್ ನಿರ್ದೇಶಕ ಪ್ರೊ. ಕೆ. ರಾಮಮೂರ್ತಿ ರಾವ್ ಮುಖ್ಯ ಅತಿಥಿಯಾಗಿದ್ದರು. ಗೌರವ ಅತಿಥಿಯಾಗಿ ಸೈಂಟ್ ಮೇರೀಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪಿ. ಪಿ. ಆಳ್ವಾರಿಸ್, ರೋಟರಿ ಕ್ಲಬ್ ಮಾಜಿ ಗವರ್ನರ್ ಅವಿನಾಶ್ ಪೋತದಾರ್, ಡೆಕ್ಕನ್ ಮೆಡಿಕಲ್ ಸೆಂಟರ್ನ ಡಾ. ರಮೇಶ್ ದೊಡ್ಡಣ್ಣವರ್, ಹೋಟೆಲ್ ಉದ್ಯಮಿಗಳಾದ ವಿಠಲ ಹೆಗಡೆ, ವಿಜಯ ಸಾಲಿಯಾನ್ ಉಪಸ್ಥಿತರಿದ್ದರು.
ವಿದ್ವಾನ್ ರೋಹಿತ್ ಭಟ್ ಉಪ್ಪೂರು(ಗಾಯನ), ವಿದ್ವಾನ್ ವಿ. ಆರ್. ಚಂದ್ರಶೇಖರ್(ಮೃದಂಗ), ವಿದ್ವಾನ್ ಜಯರಾಮ್ ಕಿಕ್ಕೇರಿ(ಕೊಳಲು), ವಿದ್ವಾನ್ ಅನಿರುದ್ಧ ನಾಡಿಗ್(ವಯಲಿನ್), ವಿದ್ವಾನ್ ಟಿ. ರವೀಂದ್ರ ಶರ್ಮಾ, ವಿದುಷಿ ಧನ್ಯಶ್ರೀ ಚಕ್ರಪಾಡಿ(ನಟುವಾಂಗ) ಪಕ್ಕ ವಾದ್ಯಗಳಲ್ಲಿ ಸಹಕರಿಸಿದರು.
ವಿದ್ವಾನ್ ಪಾಶ್ರ್ವನಾಥ್ ಎಸ್. ಉಪಾದ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಆರ್. ವಂದಿಸಿದರು.
ಪ್ರಕಾಶ್ ಕೆ. ಪೂಜಾರಿ, ಮಲ್ಲಿಕಾ ಪ್ರಕಾಶ್ ದಂಪತಿಯ ಪುತ್ರಿಯಾದ ಇವರು ನಾಟ್ಯ ವಿದ್ವಾನ್ ಟಿ. ರವೀಂದ್ರ ಶರ್ಮಾ, ವಿದುಷಿ ಧನ್ಯಶ್ರೀ ಚಕ್ರಪಾಣಿ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯ ಜೂನಿಯರ್, ಸೀನಿಯರ್ ಗ್ರೇಡ್ ಪರೀಕ್ಷೆ ಹಾಗೂ ಮುಂಬೈಯ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ವಿಶಾರದ ಪ್ರಥಮ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆದಿದ್ದಾರೆ. ಚಿತ್ರಕಲೆಯಲ್ಲಿ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನೂಪುರ ಕಲಾವಿದ ಹಾಗೂ ಮೈಸೂರಿನ ಸಾಂಸ್ಕೃತಿಕ ಟ್ರಸ್ಟ್ ನಿರ್ದೇಶಕ ಪ್ರೊ. ಕೆ. ರಾಮಮೂರ್ತಿ ರಾವ್ ಮುಖ್ಯ ಅತಿಥಿಯಾಗಿದ್ದರು. ಗೌರವ ಅತಿಥಿಯಾಗಿ ಸೈಂಟ್ ಮೇರೀಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪಿ. ಪಿ. ಆಳ್ವಾರಿಸ್, ರೋಟರಿ ಕ್ಲಬ್ ಮಾಜಿ ಗವರ್ನರ್ ಅವಿನಾಶ್ ಪೋತದಾರ್, ಡೆಕ್ಕನ್ ಮೆಡಿಕಲ್ ಸೆಂಟರ್ನ ಡಾ. ರಮೇಶ್ ದೊಡ್ಡಣ್ಣವರ್, ಹೋಟೆಲ್ ಉದ್ಯಮಿಗಳಾದ ವಿಠಲ ಹೆಗಡೆ, ವಿಜಯ ಸಾಲಿಯಾನ್ ಉಪಸ್ಥಿತರಿದ್ದರು.
ವಿದ್ವಾನ್ ರೋಹಿತ್ ಭಟ್ ಉಪ್ಪೂರು(ಗಾಯನ), ವಿದ್ವಾನ್ ವಿ. ಆರ್. ಚಂದ್ರಶೇಖರ್(ಮೃದಂಗ), ವಿದ್ವಾನ್ ಜಯರಾಮ್ ಕಿಕ್ಕೇರಿ(ಕೊಳಲು), ವಿದ್ವಾನ್ ಅನಿರುದ್ಧ ನಾಡಿಗ್(ವಯಲಿನ್), ವಿದ್ವಾನ್ ಟಿ. ರವೀಂದ್ರ ಶರ್ಮಾ, ವಿದುಷಿ ಧನ್ಯಶ್ರೀ ಚಕ್ರಪಾಡಿ(ನಟುವಾಂಗ) ಪಕ್ಕ ವಾದ್ಯಗಳಲ್ಲಿ ಸಹಕರಿಸಿದರು.
ವಿದ್ವಾನ್ ಪಾಶ್ರ್ವನಾಥ್ ಎಸ್. ಉಪಾದ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಆರ್. ವಂದಿಸಿದರು.
ಪ್ರಕಾಶ್ ಕೆ. ಪೂಜಾರಿ, ಮಲ್ಲಿಕಾ ಪ್ರಕಾಶ್ ದಂಪತಿಯ ಪುತ್ರಿಯಾದ ಇವರು ನಾಟ್ಯ ವಿದ್ವಾನ್ ಟಿ. ರವೀಂದ್ರ ಶರ್ಮಾ, ವಿದುಷಿ ಧನ್ಯಶ್ರೀ ಚಕ್ರಪಾಣಿ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯ ಜೂನಿಯರ್, ಸೀನಿಯರ್ ಗ್ರೇಡ್ ಪರೀಕ್ಷೆ ಹಾಗೂ ಮುಂಬೈಯ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ವಿಶಾರದ ಪ್ರಥಮ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆದಿದ್ದಾರೆ. ಚಿತ್ರಕಲೆಯಲ್ಲಿ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.