ಆ್ಯಪ್ನಗರ

ಬಿಜೆಪಿ ಕೊಲೆಗಡುಕರನ್ನು ತಯಾರಿಸುತ್ತಿದೆ, ದೇಶಭಕ್ತರನ್ನಲ್ಲ: ಸಿದ್ದರಾಮಯ್ಯ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಕಲ್ಸಂಕ ರಾಯಲ್‌ ಗಾರ್ಡನ್‌ನಲ್ಲಿ ಪರಿವರ್ತನಾ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

Vijaya Karnataka 11 Mar 2019, 8:34 am
ಉಡುಪಿ: ಗೋಡ್ಸೆಯಿಂದ ತೊಡಗಿ ಕೊಲೆಗಡುಕರನ್ನು ಬಿಜೆಪಿ, ಸಂಘ ಪರಿವಾರ ತಯಾರು ಮಾಡುತ್ತಿದೆಯೇ ಹೊರತು ದೇಶಭಕ್ತರನ್ನಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Vijaya Karnataka Web Siddramaiah


ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಕಲ್ಸಂಕ ರಾಯಲ್‌ ಗಾರ್ಡನ್‌ನಲ್ಲಿ ಪರಿವರ್ತನಾ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಜಿಲ್ಲೆಗಳಲ್ಲಿ ಬೆಂಕಿ ಇಡುತ್ತಿರುವ ಬಿಜೆಪಿ ಮಂದಿ ಪಕ್ಷದೊಳಗಿನವರನ್ನು, ಅನ್ಯ ಪಕ್ಷದವರನ್ನು ಕೊಲೆ ಮಾಡುತ್ತಾರೆ, ಮಾಡಿಸುತ್ತಾರೆ. ಬಿಜೆಪಿಯಿಂದ ಉಳಿಸಲಾಗದ ಪ್ರಜಾಪ್ರಭುತ್ವ, ಸಂವಿಧಾನವನ್ನು ಕಾಂಗ್ರೆಸ್‌ನಿಂದ ಮಾತ್ರ ರಕ್ಷಿಸಲು ಸಾಧ್ಯ. ಈ ಬಾರಿ ಬಿಜೆಪಿಗೆ ಸೋಲು, ಕಾಂಗ್ರೆಸಿಗೆ ಗೆಲುವಿನೊಂದಿಗೆ ರಾಹುಲ್‌ ಗಾಂಧಿ ಪ್ರಧಾನಿಯಾಗುವುದು ನಿಶ್ಚಿತ ಎಂದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್‌ ಇತ್ಯಾದಿ ಭರವಸೆ ನೀಡಿ ಜನರನ್ನು ಭ್ರಮಾಲೋಕದಲ್ಲಿ ತೇಲಿಸಿದ ಪ್ರಧಾನಿ ಮೋದಿ ಈಗ ಪಕೋಡಾ ಮಾರಿ ಎನ್ನುತ್ತಿದ್ದಾರೆ. ನಿರುದ್ಯೋಗ ಪ್ರಮಾಣ 45ವರ್ಷಗಳಲ್ಲೇ ಶೇ.7.2ಕ್ಕೇರಿದೆ. 56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕಾಳಜಿಯೇ ಇಲ್ಲ. ಚೌಕಿದಾರ ಕಳ್ಳನಾಗಿದ್ದು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾನೆ. ಐದು ವರ್ಷಗಳಲ್ಲಿ ಕೇವಲ 27 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು ಸ್ವತಂತ್ರ ಭಾರತದಲ್ಲಿ ಮೋದಿಯಂತಹ ಸುಳ್ಳುಗಾರ ಪ್ರಧಾನಿಯನ್ನು ಕಂಡಿಲ್ಲ. ಅಚ್ಛೇ ದಿನ್‌ ಅಂಬಾನಿ, ಅದಾನಿ, ಮಲ್ಯ, ಚೋಕ್ಸಿಗಷ್ಟೇ ಬಂದಿದೆ. ಖಾತೆಗೆ 15 ಲಕ್ಷ ರೂ. ಹಾಕ್ತೀನಿ ಎಂದ ಮೋದಿ 15 ಪೈಸೆನಾದ್ರೂ ಹಾಕಿದ್ರಾ? ಎಂದು ಪ್ರಶ್ನಿಸಿದರು.

ರೈತರಿಗೆ, ಬಡವರಿಗೆ ಅಚ್ಛೇ ದಿನ್‌ ಬಂದಿಲ್ಲ. ಕಪ್ಪು ಹಣ ಇದ್ದೋರು ಯಾರಾದರೂ ನಿದ್ದೆಗೆಟ್ಟಿದ್ದಾರಾ? ಕಾಂಗ್ರೆಸಿನ 20 ಶಾಸಕರಿಗೆ ತಲಾ 25 ಕೋಟಿ ರೂ. ಆಫರ್‌ ಮಾಡಿದ್ದು ಚೌಕಿದಾರ್‌ ಕೊಟ್ಟ ಹಣವಿದು. ಅಟಾರ್ನಿ ಜನರಲ್‌ ಮೂಲಕವೇ ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿಸಿದ ಗಿರಾಕಿಗಳಿವರು. ಕಾಂಗ್ರೆಸ್‌ನಿಂದ ಜನರಿಗೆ ಕೊಟ್ಟ 165 ಭರವಸೆಗಳನ್ನೂ ಮುಖ್ಯಮಂತ್ರಿಯಾಗಿದ್ದಾಗ ಈಡೇರಿಸಿದ್ದೇನೆ. ಕಾರ್ಯಕರ್ತರೇ ಗೋ ಬ್ಯಾಕ್‌ ಶೋಭಾ ಎನ್ನಬೇಕಿದ್ದರೆ ಆಕೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸೊನ್ನೆ.

ಮೀನುಗಾರರ ಪತ್ತೆಗೆ ಯಾವುದೇ ಯತ್ನ ಮಾಡಿಲ್ಲ. ಸಾಲಮನ್ನಾ ಮಾಡಲು ನಮ್ಮಲ್ಲೇನು ನೋಟು ಪ್ರಿಂಟಿಂಗ್‌ ಮೆಷಿನ್‌ ಇದೆಯಾ ಎಂದಿದ್ದ ಮಿಸ್ಟರ್‌ ಯಡಿಯೂರಪ್ಪ ಹಸಿರು ಶಾಲು ಹಾಕಿ, ರೈತರಿಗೆ ಗೋಲಿಬಾರ್‌ ಮಾಡಿಸಿದ್ದು ಸಾಲಮನ್ನಾ ಕುರಿತು ಮಾತನಾಡಲು ನೈತಿಕತೆಯಿಲ್ಲ. 55 ವರ್ಷಗಳಲ್ಲಿ ಸಮಾಜ, ದೇಶ ಕಟ್ಟುವ ಕೆಲಸ ಕಾಂಗ್ರೆಸ್‌ ಮಾಡಿದೆಯೇ ಹೊರತು ಒಡೆವ ಕೆಲಸವಲ್ಲ. ಅಸೆಂಬ್ಲಿ/ಲೋಕಸಭೆಯಲ್ಲಿ ಮಹಿಳಾ ಮೀಸಲು, ರೈತರ ಸಾಲ ಮನ್ನಾ ಭರವಸೆಯನ್ನು ರಾಹುಲ್‌ ಗಾಂಧಿ ನೀಡಿದ್ದಾರೆ ಎಂದರು.

ಏ.18, 23ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಎಂದು ಸಿದ್ದರಾಮಯ್ಯ ಘೋಷಿಸಿದರು. ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಬೇಗ ಮುಗಿಸಲು ಮಾಹಿತಿಯನ್ನು ತಹಸೀಲ್ದಾರ್‌ ಮೂಲಕ ಸಂಘಟಕರಿಗೆ ನೀಡಲಾಯಿತು. ಜಿ. ಎ. ಬಾವಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ