ಆ್ಯಪ್ನಗರ

ಬಿಜೆಪಿ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ: ಬೊಮ್ಮಾಯಿ

ಇನ್‍ಕ್ರೆಡಿಬಲ್ ಇಂಡಿಯಾವನ್ನು ಇನ್‍ಕ್ರೆಡಿಬಲ್ ಉಡುಪಿ ಮಾಡಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಕಾರ್ಯಪಡೆ ರಚಿಸಿ, ಹಂತ ಹಂತವಾಗಿ ಯೋಜನೆಯನ್ನು ಕೈಗೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಎಂದವರು ಹೇಳಿದರು.

Vijaya Karnataka 28 Sep 2019, 8:20 am

ಉಡುಪಿ: ಡಾ.ವಿ.ಎಸ್‌. ಆಚಾರ್ಯರಂತಹ ಆದರ್ಶ ರಾಜಕಾರಣಿಗಳ ತವರೂರಾದ ಉಡುಪಿ ಜಿಲ್ಲೆಯಲ್ಲಿಉಸ್ತುವಾರಿ ಸಚಿವ ಸ್ಥಾನ ಸಿಕ್ಕಿರುವುದು ನನ್ನ ಸೌಭಾಗ್ಯ. ಬಿಜೆಪಿ ಅಧಿಕಾರಕ್ಕಾಗಿ ರಾಜಕಾರಣ ಮಾಡದೆ ಜನರಿಗಾಗಿ, ದೇಶಕ್ಕಾಗಿ ರಾಜಕಾರಣ ಮಾಡಿ ರಾಷ್ಟ್ರಮಟ್ಟದಲ್ಲಿ ಬೆಳೆದಿದೆ ಎಂದು ರಾಜ್ಯ ಗೃಹಮಂತ್ರಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web Bommai.


ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಪರವಾಗಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಅಧಿಕಾರಕ್ಕಾಗಿ ರಾಜಕಾರಣ ಮಾಡಿದ್ದರಿಂದ ಕಾಂಗ್ರೆಸ್‌ ಅಧೋಗತಿಗೆ ತಲುಪಿದೆ. ಯಾವುದೇ ಪ್ರತಿಪಕ್ಷ ಇಲ್ಲದೆ ಇರುವ ಕಾರಣ ನೈತಿಕ ಜವಾಬ್ದಾರಿ ಹೆಚ್ಚಿದೆ. ಆದರ್ಶ ವಿಚಾರಧಾರೆಗಳನ್ನು ಅನುಷ್ಠಾನ ಮಾಡುವುದು ನಮ್ಮೆದುರಿರುವ ದೊಡ್ಡ ಸವಾಲು. ಪಕ್ಷದ ಕಾರ್ಯಕರ್ತರ ಹಿತರಕ್ಷಣೆಯೊಂದಿಗೆ ಕರಾವಳಿಯ ಅಭಿವೃದ್ಗೆ ಉಡುಪಿಯ ಸಾಮಾನ್ಯ ನಾಗರಿಕನಾಗಿ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭ ಉಡುಪಿ ಶಾಸಕ ಕೆ. ರಘುಪತಿ ಭಟ್‌, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಕಾಪು ಶಾಸಕ ಲಾಲಾಜಿ ಮೆಂಡನ್‌, ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉದಯಕುಮಾರ್‌ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್‌, ಪ್ರಭಾಕರ ಪೂಜಾರಿ, ಕುತ್ಯಾರು ನವೀನ್‌ ಶೆಟ್ಟಿ, ಸಂಧ್ಯಾ ರಮೇಶ್‌ , ಕಾರ್ಯಕರ್ತರು ಉಪಸ್ಥಿತರಿದ್ದರು. ಯಶ್‌ಪಾಲ್‌ ಸುವರ್ಣ ಸ್ವಾಗತಿಸಿದರು. ಸುರೇಶ್‌ ನಾಯಕ್‌ ನಿರೂಪಿಸಿದರು.

ಇನ್‌ಕೆಡ್ರಿಬಲ್ ಇಂಡಿಯಾವನ್ನು ಇನ್‌ಕ್ರೆಡಿಬಲ್ ಉಡುಪಿ ಮಾಡಬೇಕು

ಜನರಿಗೆ ಪೊಲೀಸರ ಮೇಲೆ ಕೊನೆಯ ನಂಬಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ