ಆ್ಯಪ್ನಗರ

ಮೊಬೈಲ್‍ಗಾಗಿ ಮನೆಬಿಟ್ಟಿದ್ದ 15 ಹರೆಯದ ಬಾಲಕನ ರಕ್ಷಣೆ

ಮೊಬೈಲ್ ವಿಚಾರಕ್ಕೆ ಹಠ ಮಾಡುತ್ತಿದ್ದ ಅತುಲ್‍ಗೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವಂತೆ ಮನೆಯವರು ಗದರಿಸಿದ್ದರು. ಮೊಬೈಲ್ ಸಿಗದೇ ಮನೆಯವರ ಮಾತಿಗೆ ಕೋಪಗೊಂಡಿದ್ದ ಈತ ಮಾ. 29 ರಂದು ಮನೆ ಬಿಟ್ಟು ಬಂದಿದ್ದ.

Vijaya Karnataka Web 2 Apr 2019, 11:52 am
ಉಡುಪಿ: ಮೊಬೈಲ್ ತೆಗೆಸಿಕೊಟ್ಟಿಲ್ಲ ಎಂದು ಮನೆಬಿಟ್ಟಿದ್ದ 15 ಹರೆಯದ ಭಟ್ಕಳ ಮೂಲದ ವಿದ್ಯಾರ್ಥಿಯನ್ನು ಉಡುಪಿ ಇಂದ್ರಾಳಿ ರೈಲ್ಪೇ ನಿಲ್ದಾಣದಲ್ಲಿ ರೈಲ್ಪೆ ಪೊಲೀಸರು ರಕ್ಷಣೆ ಮಾಡಿ ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದಾರೆ.
Vijaya Karnataka Web Mobile


ಭಟ್ಕಳ ಸೋನಾರ್ಕೇರಿ ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಅತುಲ್ ರಾಮನಾಥ್ ಪೈ (15) ರೈಲ್ಪೆ ಪೊಲೀಸರಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಮೊಬೈಲ್ ವಿಚಾರಕ್ಕೆ ಹಠ ಮಾಡುತ್ತಿದ್ದ ಅತುಲ್‍ಗೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವಂತೆ ಮನೆಯವರು ಗದರಿಸಿದ್ದರು. ಮೊಬೈಲ್ ಸಿಗದೇ ಮನೆಯವರ ಮಾತಿಗೆ ಕೋಪಗೊಂಡಿದ್ದ ಈತ ಮಾ. 29 ರಂದು ಮನೆ ಬಿಟ್ಟು ಬಂದಿದ್ದ.

ಮಾ. 30 ರಂದು ಉಡುಪಿ ಇಂದ್ರಾಳಿ ರೈಲ್ಪೆ ನಿಲ್ದಾಣದಲ್ಲಿ ರೈಲ್ಪೆ ರಕ್ಷಣಾ ದಳದ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್ ಮತ್ತು ಹೆಡ್ ಕಾನ್‍ಸ್ಟೆಬಲ್ ವೇಣು ಸಿ.ಎಚ್. ಅವರು ತಪಾಸಣೆ ಮಾಡುತ್ತಿದ್ದ ವೇಳೆ ಫ್ಲಾಟ್‍ಫಾರಂನಲ್ಲಿ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಬಾಲಕನ್ನು ವಿಚಾರಿಸಿದ್ದ ವೇಳೆ ಆಸ್ಪತ್ರೆಯಲ್ಲಿರುವ ಸ್ನೇಹಿತ ನೋಡಲು ಬಂದಿದ್ದೇನೆ ಎಂದು ಉತ್ತರ ಕೊಟ್ಟಿದ್ದ. ಬಾಲಕ ಉತ್ತರ ಹಾಗೂ ನಡವಳಿಕೆಯಿಂದ ಅನುಮಾನಗೊಂಡಿರುವ ಸಿಬ್ಬಂದಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಮೊಬೈಲ್ ವಿಚಾರ ಬಾಯಿಬಿಟ್ಟಿದ್ದ.

ಈ ಬಗ್ಗೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ ತಾಯಿಗೆ ಮಾಹಿತಿ ರವಾನಿಸಿದ್ದು, ಮಾ. 31 ರಂದು ಅತುಲ್ ತಾಯಿ ಲತಾ ಪೈ ಉಡುಪಿಗೆ ಆಗಮಿಸಿ, ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ರೈಲ್ಪೆ ಪ್ರಾದೇಶಿಕ ಪ್ರಬಂಧಕ ವಿನಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾಕೃಷ್ಣಮೂರ್ತಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ