ಉಡುಪಿ: ಆರು ದಶಕಗಳ ಪರಂಪರೆಯನ್ನು ಧಿಕ್ಕರಿಸಿ ಲಾಭದಲ್ಲಿ ನಡೆಯುತ್ತಿದ್ದ ಟೆಲಿಕಾಂ ಸಂಸ್ಥೆಯನ್ನು ಬಿಎಸ್ಸೆನ್ನೆಲ್ ಆಗಿ ಪರಿವರ್ತಿಸಿ ಸಾಲದ ಕೂಪಕ್ಕೆ ತಳ್ಳಿ ಖಾಸಗೀಕರಣದ ಹುನ್ನಾರ ನಡೆದಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಪಿ. ವಿಶ್ವನಾಥ ರೈ ಆರೋಪಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಬಿಎಸ್ಸೆನ್ನೆಲ್ ದೂರವಾಣಿ ವಿನಿಮಯ ಕೇಂದ್ರದ ಎದುರು ಬಿಎಸ್ಸೆನ್ನೆಲ್ ಖಾಸಗೀಕರಣ ಮಾಡದಂತೆ ಆಗ್ರಹಿಸಿ ನಾನಾ ಬೇಡಿಕೆಗಳನ್ನು ಮುಂದಿಟ್ಟು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬೇಡಿಕೆಗಳೇನು?: 4ಜಿ ಸೇವೆ ಕೂಡಲೇ ಒದಗಿಸಿ, ಬಿಎಸ್ಸೆನ್ನೆಲ್ಗೆ ಆರ್ಥಿಕ ಬೆಂಬಲ ಕೊಡಿ, ಖಾಸಗೀಕರಣ ಬೇಡ. ಗುತ್ತಿಗೆ ಕಾರ್ಮಿಕರ ಬಾಕಿ ಸಂಬಳ ಕೂಡಲೇ ಪಾವತಿಸಿ. ಗುತ್ತಿಗೆ ಕಾರ್ಮಿಕರ ಕಡಿತ ನಿಲ್ಲಿಸಿ, ಕೇಂದ್ರ ಸರಕಾರ ಕಾರ್ಮಿಕ, ಜನ ಮತ್ತು ರೈತ ವಿರೋಧಿ ನೀತಿ ಕೈಬಿಡಬೇಕು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಿಎಸ್ಸೆನ್ನೆಲ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಮೋಹನ್, ಉಮೇಶ್ ಕುಂದರ್, ದಯಾನಂದ ಕೋಟ್ಯಾನ್, ಶೇಖರ ಬಂಗೇರ ಉಪಸ್ಥಿತರಿದ್ದರು.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಬಿಎಸ್ಸೆನ್ನೆಲ್ ದೂರವಾಣಿ ವಿನಿಮಯ ಕೇಂದ್ರದ ಎದುರು ಬಿಎಸ್ಸೆನ್ನೆಲ್ ಖಾಸಗೀಕರಣ ಮಾಡದಂತೆ ಆಗ್ರಹಿಸಿ ನಾನಾ ಬೇಡಿಕೆಗಳನ್ನು ಮುಂದಿಟ್ಟು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬೇಡಿಕೆಗಳೇನು?: 4ಜಿ ಸೇವೆ ಕೂಡಲೇ ಒದಗಿಸಿ, ಬಿಎಸ್ಸೆನ್ನೆಲ್ಗೆ ಆರ್ಥಿಕ ಬೆಂಬಲ ಕೊಡಿ, ಖಾಸಗೀಕರಣ ಬೇಡ. ಗುತ್ತಿಗೆ ಕಾರ್ಮಿಕರ ಬಾಕಿ ಸಂಬಳ ಕೂಡಲೇ ಪಾವತಿಸಿ. ಗುತ್ತಿಗೆ ಕಾರ್ಮಿಕರ ಕಡಿತ ನಿಲ್ಲಿಸಿ, ಕೇಂದ್ರ ಸರಕಾರ ಕಾರ್ಮಿಕ, ಜನ ಮತ್ತು ರೈತ ವಿರೋಧಿ ನೀತಿ ಕೈಬಿಡಬೇಕು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಿಎಸ್ಸೆನ್ನೆಲ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಮೋಹನ್, ಉಮೇಶ್ ಕುಂದರ್, ದಯಾನಂದ ಕೋಟ್ಯಾನ್, ಶೇಖರ ಬಂಗೇರ ಉಪಸ್ಥಿತರಿದ್ದರು.