ಕುಂದಾಪುರ : ಇಲ್ಲಿಗೆ ಸಮೀಪದ ಹೇರಿಕುದ್ರು ಸೇತುವೆ ಬಳಿ ಸರಕಾರಿ ಬಸ್ನೊಳಗೆ ಪ್ರಯಾಣಿಕರು ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಬೈಂದೂರಿನಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಸರಕಾರಿ ಬಸ್ ಎದುರುಗಡೆ ಹೋಗುತ್ತಿದ್ದ ಆಟೋರಿಕ್ಷಾ ಮತ್ತು ಬೈಕ್ನ್ನು ನೋಡಿ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಒಳಗಡೆ ನಾಗಮ್ಮ, ಲಲಿತಾ, ಐಶ್ವರ್ಯ, ಆರಾಧ್ಯ ಎಂಬವರು ಹತೋಟಿ ತಪ್ಪಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಿನೊಳಗೆ ಬಿದ್ದು ನಾಲ್ವರಿಗೆ ಗಾಯ
ಕುಂದಾಪುರ ಸಮೀಪದ ಹೇರಿಕುದ್ರು ಸೇತುವೆ ಬಳಿ ಸರಕಾರಿ ಬಸ್ನೊಳಗೆ ಪ್ರಯಾಣಿಕರು ಬಿದ್ದು ಗಾಯಗೊಂಡ ಘಟನೆ ನಡೆದಿದೆ.
Vijaya Karnataka 2 Aug 2019, 5:00 am