ಆ್ಯಪ್ನಗರ

ಬಾಲಕಾರ್ಮಿಕತನ ಸಹಿತ ಪಿಡುಗು ನಿವಾರಣೆ ನಮ್ಮ ಜವಾಬ್ದಾರಿ

ನಾನಾ ಪಿಡುಗುಗಳ ಸಹಿತ ಸಮಾಜದಲ್ಲಿರುವ ಬಾಲಕಾರ್ಮಿಕತನ ಮುಕ್ತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ. ಜೋಷಿ ಹೇಳಿದ್ದಾರೆ.

Vijaya Karnataka 13 Jun 2019, 5:00 am
ಉಡುಪಿ: ನಾನಾ ಪಿಡುಗುಗಳ ಸಹಿತ ಸಮಾಜದಲ್ಲಿರುವ ಬಾಲಕಾರ್ಮಿಕತನ ಮುಕ್ತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ. ಜೋಷಿ ಹೇಳಿದ್ದಾರೆ.
Vijaya Karnataka Web bala


ಮಣಿಪಾಲ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಬಾಲಕಾರ್ಮಿಕರಾಗದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು, ಸಮಾಜಮುಖಿ ಕೆಲಸವಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕವೇ ಸಂದರೂ ನಾನಾ ಪಿಡುಗುಗಳು ಇನ್ನೂ ನಿವಾರಣೆಯಾಗಿಲ್ಲ. ಕಾನೂನು ರೂಪಿಸಿ ಕೈತೊಳೆದುಕೊಂಡರಾಗದು. ಸಮಾಜ ಸುಭಿಕ್ಷೆ, ಸಮೃದ್ಧಿ ನಿಟ್ಟಿನಲ್ಲಿ ಕಾನೂನಿಗೆ ಹೊಸ ಶಕ್ತಿ ತುಂಬಬೇಕು. ಬಾಲಕಾರ್ಮಿಕತನ ಸಹಿತ ಸಾಮಾಜಿಕ ಪಿಡುಗಿನ ಪ್ರಕರಣಗಳು ಕಂಡುಬಂದರೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವಂತಾದರೆ ಕಾನೂನಿಗೆ ಗೌರವ ಬರಲು ಸಾಧ್ಯ ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶೆ ಕಾವೇರಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ನಾಗರಿಕ ಸಮಾಜದಲ್ಲಿರುವ ನಾವೆಲ್ಲ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿ ಬಾಲ್ಯ/ಬದುಕನ್ನೇ ಕಸಿಯುವ ಪ್ರವೃತ್ತಿ ಸಲ್ಲದು. ಮಕ್ಕಳಿಗೆ ಶಿಕ್ಷಣದ ಹಂತದಲ್ಲೇ ಅರಿವು ನೀಡಿ ಬಾಲಕಾರ್ಮಿಕತನ ನಿರ್ಮೂಲನೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ. ಮಕ್ಕಳ ಆರೋಗ್ಯ, ಬದುಕಿನ ಮೇಲಾಗುವ ಪರಿಣಾಮ ಅರಿಯಬೇಕು ಎಂದರು.

ಬಾಲಕಾರ್ಮಿಕತನದಿಂದ ಹೊರಬಂದು ಶೈಕ್ಷಣಿಕ ಸಾಧನೆ ಮಾಡಿದ ರಾಜು ಅವರನ್ನು ಸನ್ಮಾನಿಸಲಾಯಿತು. ಎಎಸ್‌ಪಿ ಕುಮಾರಚಂದ್ರ, ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್‌ ಬಿ. ಫುರ್ಟಾಡೊ, ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್‌ ಜಗದೀಶ ಉಪಸ್ಥಿತರಿದ್ದರು. ಕಾರ್ಮಿಕ ನಿರೀಕ್ಷಕ ಪ್ರವೀಣ್‌ ಕುಮಾರ್‌ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ