ಆ್ಯಪ್ನಗರ

ದನದ ವ್ಯಾಪಾರಿ ಸಾವು: ಮೂವರು ಪೊಲೀಸ್‌ ವಶಕ್ಕೆ

ಪೆರ್ಡೂರು ಗ್ರಾಮದ ಸೀನಬೆಟ್ಟು ಬಳಿ ಮೇ 30ರಂದು ಬಜರಂಗ ದಳ ಕಾರ್ಯಕರ್ತರ ದಾಳಿ ವೇಳೆ ಮಂಗಳೂರಿನ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಸಂಶಯಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮೂವರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Vijaya Karnataka 2 Jun 2018, 7:28 am
ಉಡುಪಿ: ಪೆರ್ಡೂರು ಗ್ರಾಮದ ಸೀನಬೆಟ್ಟು ಬಳಿ ಮೇ 30ರಂದು ಬಜರಂಗ ದಳ ಕಾರ್ಯಕರ್ತರ ದಾಳಿ ವೇಳೆ ಮಂಗಳೂರಿನ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಸಂಶಯಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮೂವರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Vijaya Karnataka Web Arrest


ಉಡುಪಿ ಜಿಲ್ಲಾ ಪೊಲೀಸರು ಪೆರ್ಡೂರು ಬಜರಂಗದಳ ಮುಖಂಡ ಸುರೇಶ್‌ ಮೆಂಡನ್‌ ಯಾನೆ ಸೂರಿ, ಎಚ್‌. ಪ್ರಸಾದ್‌, ದೀಪಕ್‌ ಶೆಟ್ಟಿ ಎಂಬವರನ್ನು ಬಳ್ಳಾರಿ ಪೊಲೀಸರ ನೆರವಿನಿಂದ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಬಳ್ಳಾರಿಯಿಂದ ಉಡುಪಿಗೆ ಕರೆತರಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಪೆರ್ಡೂರು ಸೀನಬೆಟ್ಟು ಎಂಬಲ್ಲಿ ಮೇ 30ರ ಬೆಳಗ್ಗಿನ ಜಾವ 5 ಗಂಟೆಗೆ ಜಾನುವಾರು ಸಾಗಿಸುತ್ತಿದ್ದಾಗ ವಾಹನದಲ್ಲಿ ಬಂದ ಬಜರಂಗ ದಳ ಕಾರ್ಯಕರ್ತರ ಗುಂಪು ಅಡ್ಡಗಟ್ಟಿದ್ದು, ಈ ವೇಳೆ ಹುಸೈನಬ್ಬ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿದೆ.

ಸ್ಕಾರ್ಪಿಯೋ ವಾಹನದಲ್ಲಿದ್ದ ಉಳಿದಿಬ್ಬರು ಓಡಿ ಹೋಗಿದ್ದು, ಆರೋಪಿಗಳು ಸ್ಕಾರ್ಪಿಯೋ ವಾಹನವನ್ನು ಸಂಪೂರ್ಣ ಜಖಂ ಮಾಡಿದ್ದಾರೆ. ಹುಸೈನಬ್ಬ ಅವರು ಸೂರ್ಯ ಯಾನೆ ಸೂರಿ ಹಾಗೂ ಬಜರಂಗ ದಳದ ಕಾರ್ಯಕರ್ತರ ಗುಂಪು ನಡೆಸಿದ ಹಲ್ಲೆಯಿಂದ ಮೃತಪಟ್ಟಿದ್ದಾಗಿ ಮೃತರ ಸಹೋದರ ಮೊಹಮ್ಮದ್‌ ಇಸ್ಮಾಯಿಲ್‌ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪಿಎಸ್‌ಐ ಡಿ.ಎನ್‌. ಕುಮಾರ್‌ ಅವರನ್ನು ಅಮಾನತುಗೊಳಿಸಿದ್ದು, ಬ್ರಹ್ಮಾವರ ಠಾಣಾಧಿಕಾರಿ ರಫೀಕ್‌ ಅವರನ್ನು ಪ್ರಭಾರ ಪಿಎಸ್‌ಐ ಆಗಿ ನಿಯೋಜಿಸಲಾಗಿದೆ. ಅನಂತ ಪದ್ಮನಾಭ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ