ಆ್ಯಪ್ನಗರ

ಸಾರ್ವಜನಿಕರ ಸಹಕಾರದಲ್ಲಿ ಚಾಂತಾರು ಮದಗದ ಪುನಚ್ಛೇತನ

ಪುರಾಣ ಪ್ರಸಿದ್ದ ಚಾಂತಾರು ಮದಗವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ಹೂಳೆತ್ತಲಾಯಿತು.

Vijaya Karnataka 3 Jun 2019, 5:00 am
ಬ್ರಹ್ಮಾವರ : ಪುರಾಣ ಪ್ರಸಿದ್ದ ಚಾಂತಾರು ಮದಗವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ಹೂಳೆತ್ತಲಾಯಿತು.
Vijaya Karnataka Web madaga


ಸುಮಾರು 10 ಎಧಿಕಧಿರೆ ವಿಸ್ತಿರ್ಣ ಹೊಂದಿರುವ ಈ ಮದಗವು ಹೂಳು ತುಂಬಿ ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ಹೂಳೆತ್ತುವ ಕಾರ್ಯಕ್ಕೆ ಭಾನುವಾರ ಸಂಕಲ್ಪಿಸಲಾಗಿತ್ತು.

ಸಂಸದೆ ಶೋಭಾ ಕರಂದ್ಲಾಜೆ ಮದಗದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಭಾನುವಾರ ಬೆಳಗ್ಗೆ ನೀಡಿದರು. ಸುಮಾರು 100ಕ್ಕೂ ಅಧಿಕ ಸ್ವಯಂಸೇವಕರು ಆಗಮಿಸಿ ಹೂಳೆತ್ತುವ ಕಾರ್ಯಕ್ಕೆ ಸಹಕರಿಸಿದ್ದರು. ಅಲ್ಲದೆ ಸ್ಥಳೀಯ ಟಿಪ್ಪರ್‌ ಮತ್ತು ಜೆಸಿಬಿಗಳ ಮಾಲೀಕರು ಉಚಿತವಾಗಿ ಜೆಸಿಬಿಯನ್ನು ಈ ಕಾರ್ಯಕ್ಕೆ ನೀಡಿದ್ದು, 100ಕ್ಕೂ ಅಧಿಕ ಲೋಡ್‌ಗಳಷ್ಟು ಹೂಳನ್ನು ತೆಗೆದು ವಿಲೇವಾರಿ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಆರೂರು ಗ್ರಾಪಂ ಅಧ್ಯಕ್ಷ ರಾಜೀವ್‌ ಕುಲಾಲ್‌ ಮತ್ತು ನೂರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ