ಆ್ಯಪ್ನಗರ

ಚಿರತೆಗಳ ಸಾವು ಇನ್ನೂ ನಿಗೂಢ

ಅಮಾಸೆಬೈಲು ಗ್ರಾಮದ ತೊಂಬಟ್ಟು ಹೊನ್ನಿನಜಡ್ಡು ಎಂಬಲ್ಲಿ ಜ.26ರಂದು ಪತ್ತೆಯಾದ ಎರಡು ಚಿರತೆಗಳ ಸಾವು ಪ್ರಕರಣ ಇನ್ನೂ ನಿಗೂಢವಾಗಿ ಉಳಿದಿದೆ. ಮೃತ ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಈವರೆಗೆ ವರದಿ ಕೈಸೇರಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 6 Feb 2019, 5:00 am
ಕುಂದಾಪುರ: ಅಮಾಸೆಬೈಲು ಗ್ರಾಮದ ತೊಂಬಟ್ಟು ಹೊನ್ನಿನಜಡ್ಡು ಎಂಬಲ್ಲಿ ಜ.26ರಂದು ಪತ್ತೆಯಾದ ಎರಡು ಚಿರತೆಗಳ ಸಾವು ಪ್ರಕರಣ ಇನ್ನೂ ನಿಗೂಢವಾಗಿ ಉಳಿದಿದೆ. ಮೃತ ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಈವರೆಗೆ ವರದಿ ಕೈಸೇರಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web cheetahs death is still mysterious
ಚಿರತೆಗಳ ಸಾವು ಇನ್ನೂ ನಿಗೂಢ


ಕಾಯಿಲೆಯಿಂದ ಸಾವು?: ಅರಣ್ಯದಂಚಿನಲ್ಲಿ ಒಂದೆಡೆ ಫ್ಲೇವಿ ವೈರಸ್‌ನಿಂದ ಮಂಗಗಳ ಸರಣಿ ಸಾವು ನಡೆಯುತ್ತಿರುವ ಬೆನ್ನಲ್ಲೇ ಚಿರತೆ ಸಾವು ಜನವಲಯದಲ್ಲಿ ಗಾಬರಿ ಮೂಡಿಸಿತ್ತು. ಮರಣೋತ್ತರ ಪರೀಕ್ಷೆಯ ಸಂದರ್ಭ ಚಿರತೆಗಳ ದೇಹದ ಒಳ, ಹೊರಗೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ. ದೇಹ ಹಸಿ ಹಸಿಯಾಗಿದ್ದವು. ಬೇಟೆಗಾರರ ಬಂದೂಕಿಗೆ ಮೃತಪಟ್ಟಿರಬಹುದು ಎಂಬ ಶಂಕೆ ಕೂಡ ದೂರವಾಗಿದೆ. ಮಂಗನಿಗೆ ಅಂಟಿರುವ ಪ್ಲೇವಿ ವೈರಸ್‌ ಚಿರತೆಗೂ ನಾಟಿದೆಯೇ ಎಂಬ ಬಗ್ಗೆಯೂ ದೃಢÜಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಚಿರತೆ ಯಾವುದೊ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂಬ ಸಂಶಯ ಹೊರಗೆಡಹಿದ್ದಾರೆ.

* ವರದಿ ಬಂದಿಲ್ಲ: ಮೃತ ಚಿರತೆಗಳು ಆರೋಗ್ಯವಾಗಿದ್ದವು. ಮಾನವರಿಂದ ಇತರೆ ಪ್ರಾಣಿಯಿಂದ ಅವುಗಳಿಗೆ ಹಾನಿಯಾಗಿರುವುದು ಪೋಸ್ಟ್‌ಮಾರ್ಟಂ ವೇಳೆ ಕಂಡುಬಂದಿಲ್ಲ. ಎರಡು ಚಿರತೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ವರದಿಯನ್ನು ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.

- ದಫೇದಾರ್‌ ಆರ್‌ಎಫ್‌ಓ ಅಮಾಸೆಬೈಲು ವನ್ಯಜೀವಿ ವಲಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ