ಆ್ಯಪ್ನಗರ

ಮೂಡುಗಿಳಿಯಾರು: ಚಿರತೆ ದಾಳಿಗೆ ದನ ಬಲಿ

ಕೋಟ ಮೂಡು ಗಿಳಿಯಾರು ಬಡಾಮನೆ ತಿಮ್ಮಪ್ಪ ಶೆಟ್ಟಿ ಅವರ ಮನೆಯ ದನವನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ.

Vijaya Karnataka Web 29 Dec 2018, 5:00 am
ಕೋಟ: ಇಲ್ಲಿನ ಮೂಡು ಗಿಳಿಯಾರು ಬಡಾಮನೆ ತಿಮ್ಮಪ್ಪ ಶೆಟ್ಟಿ ಅವರ ಮನೆಯ ದನವನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ.
Vijaya Karnataka Web news/udupi/cheetha
ಮೂಡುಗಿಳಿಯಾರು: ಚಿರತೆ ದಾಳಿಗೆ ದನ ಬಲಿ


ತಿಮ್ಮಪ್ಪ ಶೆಟ್ಟಿ ಅವರು ದನದ ಕೊಟ್ಟಿಗೆ ರಿಪೇರಿಯ ಪ್ರಯುಕ್ತ ದನವನ್ನು ಮನೆಯ ಸಮೀಪದ ಹಿತ್ತಲಿನಲ್ಲಿ ಕಟ್ಟಿದ್ದರು. ಚಿರತೆ ದನದ ಮೇಲೆ ದಾಳಿ ಮಾಡಿ ದನದ ಹೊಟ್ಟೆಯ ಮೇಲ್ಭಾಗ ಬೆನ್ನುಮೂಳೆಯ ಕೆಳಭಾಗ ದೊಡ್ಡ ಗಾತ್ರದ ಗಾಯ ಮಾಡಿ ಅರೆಬರೆ ಮಾಂಸವನ್ನು ತಿಂದು ಅಲ್ಲಿಂದ ಕಾಲ್ಕಿತ್ತಿದೆ ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆ ರಾತ್ರಿ ಹೊತ್ತು ಈ ಪರಿಸರದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹಿಂದೆ ಹಲವು ಬಾರಿ ಚಿರತೆಯ ಓಡಾಟವನ್ನು ಈ ಪರಿಸರದಲ್ಲಿ ಕಂಡ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರಿಂದ ಇಲಾಖೆ ಬೋನನ್ನು ತಂದಿಟ್ಟರೂ ಯಾವುದೇ ಪ್ರಯೊಜನವಾಗಿಲ್ಲ.

ಘಟನಾ ಸ್ಥಳಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೋ, ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ, ಅರಣ್ಯ ರಕ್ಷ ಕ ಶಿವಪ್ಪ ನಾಯ್ಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ದನದ ಮಾಲೀಕರಿಗೆ ಪರಿಹಾರ ದೊರೆಯಲು ಪ್ರಯತ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ