ಆ್ಯಪ್ನಗರ

ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳ ಅಗತ್ಯವಿದೆ: ಯಡಿಯೂರಪ್ಪ

ಸ್ವಚ್ಛತೆಯ ಹೊಸ ಕಲ್ಪನೆಗೆ ಮಾದರಿಯಾದ ರೀತಿಯಲ್ಲಿ‌ ಸ್ನಾನ, ಶೌಚ‌ಗೃಹಗಳ‌ ಸಂಕೀರ್ಣ ಸ್ವಚ್ಛಾಂಗಣ ನಿರ್ಮಾಣವಾಗಿದ್ದು ದೊಡ್ಡ ಪ್ರಮಾಣದಲ್ಲಿ‌ ಬರುವ ಯಾತ್ರಾರ್ಥಿಗಳಿಗೆ ಅಗತ್ಯ ಮತ್ತು ಅನುಕೂಲಕರವಾಗಿದೆ ಎಂದರು.

Vijaya Karnataka Web 25 Dec 2019, 4:42 pm
ಉಡುಪಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಪೇಜಾವರಶ್ರೀಗಳ ಅಗತ್ಯವಿದೆ, ಆವರ ಆರೋಗ್ಯ ಸುಧಾರಿಸಲಿ, ಚೇತರಿಕೆಯಾಗಲಿ. ಇದಕ್ಕೆ ಶ್ರೀಕೃಷ್ಣ ಅನುಗ್ರಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ


ಶ್ರೀ ಕೃಷ್ಣಮಠದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಎಂಆರ್ ಪಿಎಲ್ ನೆರವಿನಿಂದ ನಿರ್ಮಿಸಿದ ಸ್ವಚ್ಛಾಂಗಣ (ಶೌಚ ಮತ್ತು ಸ್ನಾನ ಗೃಹ ಸಂಕೀರ್ಣ) ಉದ್ಘಾಟಿಸಿ ಮಾತನಾಡಿದರು.

ಪೇಜಾವರ ಶ್ರೀ ದಾಖಲಾದ ಆಸ್ಪತ್ರೆಗೆ ಮತ್ತೆ ಮತ್ತೆ ಭೇಟಿ ನೀಡಿ ತೊಂದರೆ ಕೊಡೋದಿಲ್ಲ. ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ತನಿಖೆ ಬಳಿಕ ಪರಿಹಾರ ವಿತರಣೆ ನಿರ್ಧಾರ


ಅಪರಾಧಿಗಳ ಪತ್ತೆಗೆ ತನಿಖೆಯಾಗಬೇಕು. ತನಿಖೆಗೆ ಮೊದಲೇ ಆರೋಪಿ ಪಟ್ಟಿಯಲ್ಲಿರುವ ಸತ್ತವರಿಬ್ಬರ‌ ಕುಟುಂಬಕ್ಕೆ ಪರಿಹಾರ ಕೊಡೋದು ಸರಿಯಲ್ಲ. ಅವರು (ಕಾಂಗ್ರೆಸ್) ಕೊಟ್ಟಿದ್ದಕ್ಕೆ ಅಭ್ಯಂತರವಿಲ್ಲ. ತನಿಖೆ ಬಳಿಕ ಪರಿಹಾರದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಪ್ರಧಾನಿ ಮೋದಿ ರೂಪಿಸಿದ ಸ್ವಚ್ಛ ಭಾರತ ಅಭಿಯಾನದ‌ ಮೂಲಕ ಸ್ವಚ್ಛತೆಗೆ ಆದ್ಯತೆ ದೊರೆತಿದ್ದು ಕುಂತಲ್ಲಿ ನಿಂತಲ್ಲಿ ಸ್ವಚ್ಛತೆಯ‌ ಅರಿವು ಮೂಡಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಮಾಜಿ‌‌‌ ಸಿಎಂ ಎಚ್ಡಿಕೆ ನೀಡಿದ ಎಡ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದು ಬಿಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ