ಆ್ಯಪ್ನಗರ

ಶ್ರೀಲಂಕಾ ಸ್ಛೋಟದ ಆಘಾತ: ಸಿಎಂ ಆಯುರ್ವೇದ ಚಿಕಿತ್ಸೆ ಮೊಟಕು

ಶ್ರೀಲಂಕಾ ಸ್ಛೋಟದಲ್ಲಿ ಆತ್ಮೀಯರು ಮರಣ ಹೊಂದಿರುವುದು ತೀವ್ರವಾಗಿ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ವೈದ್ಯರ ಜತೆ ಚರ್ಚಿಸಿ ಚಿಕಿತ್ಸೆ ಮೊಟಕಿಗೆ ನಿರ್ಧರಿಸಿದೆ. ಏ. 27ರ ನಂತರ ಉಡುಪಿಗೆ ಮತ್ತೆ ಬರುವಂತೆ ವೈದ್ಯರು ಸೂಚಿಸಿದ್ದಾರೆ. ಬೆಂಗಳೂರಿಗೆ ತೆರಳಿ ನನ್ನ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

Vijaya Karnataka Web 23 Apr 2019, 3:10 pm
ಉಡುಪಿ: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಛೋಟದ ಆಘಾತದಿಂದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎರಡು ದಿನಗಳಿಂದ ಪಡೆಯುತ್ತಿದ್ದ ಆಯುರ್ವೇದ ಚಿಕಿತ್ಸೆಯನ್ನು ಮಂಗಳವಾರ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ.
Vijaya Karnataka Web HD Kumaraswamy


ಚುನಾವಣಾ ಪ್ರಚಾರದ ಒತ್ತಡದ ಹಿನ್ನೆಲೆಯಲ್ಲಿ ಆರೋಗ್ಯ ಸುಧಾರಣೆಗಾಗಿ ಭಾನುವಾರ ರಾತ್ರಿ ಮೂಳೂರಿನ ಖಾಸಗಿ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಐದು ದಿನಗಳ ಚಿಕಿತ್ಸೆಗಾಗಿ ಸದ್ದಿಲ್ಲದೆ ದಾಖಲಾಗಿದ್ದರು.

ಶ್ರೀಲಂಕಾ ಸ್ಛೋಟದಲ್ಲಿ ಆತ್ಮೀಯರು ಮರಣ ಹೊಂದಿರುವುದು ತೀವ್ರವಾಗಿ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ವೈದ್ಯರ ಜತೆ ಚರ್ಚಿಸಿ ಚಿಕಿತ್ಸೆ ಮೊಟಕಿಗೆ ನಿರ್ಧರಿಸಿದೆ. ಏ. 27ರ ನಂತರ ಉಡುಪಿಗೆ ಮತ್ತೆ ಬರುವಂತೆ ವೈದ್ಯರು ಸೂಚಿಸಿದ್ದಾರೆ. ಬೆಂಗಳೂರಿಗೆ ತೆರಳಿ ನನ್ನ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

290ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಶ್ರೀಲಂಕಾ ಸರಣಿ ಬಾಂಬ್ ಸ್ಛೋಟ ಪೈಶಾಚಿಕ ಘಟನೆ. ದೇಶ, ರಾಜ್ಯದ ಹಲವರು ಸಾವನ್ನಪ್ಪಿದ್ದು ನೊಂದ ಕುಟುಂಬಗಳಿಗೆ ನೋವು ಭರಿಸುವ ಭಕ್ತಿಯನ್ನು ಭಗವಂತ ನೀಡಲಿ ಎಂದು ಸಿಎಂ ಈ ಸಂದರ್ಭ ಪ್ರಾರ್ಥಿಸಿದರು.

ಜೆಡಿಎಸ್‍ನ ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ನನಗೆ ಆತ್ಮೀಯರಾಗಿದ್ದರು. ಪಕ್ಷದ ಆಧಾರ ಸ್ಥಂಭವಾಗಿದ್ದರು. ಐವರ ನಿಧನ ಪಕ್ಷಕ್ಕೆ , ಕುಟುಂಬಕ್ಕೆ ಆಘಾತ ತಂದಿದೆ. ನೆಲಮಂಗಲದಲ್ಲಿ ಪಕ್ಷದ ಶಕ್ತಿ ಶೇ. 50 ಕುಂದಿದೆ. ಪ್ರಾಮಾಣಿಕವಾಗಿ ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ.

ಶ್ರೀಲಂಕಾ ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿದ್ದು ಮುಖ್ಯ ಕಾರ್ಯದರ್ಶಿಗೂ ಸೂಚನೆ ನೀಡಲಾಗಿದೆ. ಏಳು ಪಾರ್ಥಿವ ಶರೀರಗಳನ್ನು ಗುರುತಿಸಿದ್ದು ಮಂಜುನಾಥ್‍ಗೆ ಕರೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಮರಣೋತ್ತರ ಪ್ರಕ್ರಿಯೆ ಶೀಘ್ರ ಮುಗಿಸಲು ಮನವಿ ಮಾಡಲಾಗಿದೆ. ಖಾಸಗಿ ಏರ್ ಕಾರ್ ಕಾರ್ಗೋ ವ್ಯವಸ್ಥೆಗೂ ಸಿದ್ಧವಾಗಿದ್ದು ಬುಧವಾರ ಬೆಳಗ್ಗೆ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೃಷ್ಣಪ್ಪ , ಶ್ರೀನಿವಾಸ ಮೂರ್ತಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ