ಆ್ಯಪ್ನಗರ

ಉಡುಪಿ ಗೆಸ್ಟ್‌ಹೌಸ್‌ನಲ್ಲಿ ಸಿಎಂ ಕುಮಾರಸ್ವಾಮಿ ರೆಸ್ಟ್‌

ಮೂಳೂರಿನ ಸಾಯಿರಾಧಾ ಬೀಚ್‌ ಹೌಸ್‌ನಲ್ಲಿ ಮುಖ್ಯಮಂತ್ರಿ ಮೂರು ದಿನಗಳ ಕಾಲ ಪ್ರಾಕೃತಿಕ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ.

Vijaya Karnataka Web 22 Apr 2019, 4:11 pm
ಉಡುಪಿ: ಚುನಾವಣೆಯ ಬಿರುಸಿನ ಪ್ರಚಾರ ಕಾರ್ಯ ಮುಗಿಸಿದ ಬಳಿಕ ವಿಶ್ರಾಂತಿಗಾಗಿ ಸಿಎಂ ಕುಮಾರಸ್ವಾಮಿ ಉಡುಪಿಯ ಖಾಸಗಿ ಗೆಸ್ಟ್‌ ಹೌಸ್‌ಗೆ ಆಗಮಿಸಿದ್ದಾರೆ. ಉಡುಪಿಯ ಮೂಳೂರಿನ ಗೆಸ್ಟ್‌ಹೌಸ್‌ಗೆ ಕುಮಾರಸ್ವಾಮಿ ಭಾನುವಾರ ರಾತ್ರಿ ಆಗಮಿಸಿದ್ದು, ಮೂರು ದಿನ ಅಲ್ಲಿ ತಂಗಲಿದ್ದಾರೆ ಎನ್ನಲಾಗಿದೆ.
Vijaya Karnataka Web cm.


ಚುನಾವಣೆಯ ಒತ್ತಡ ಮತ್ತು ವಿಶ್ರಾಂತಿಗಾಗಿ ಗೆಸ್ಟ್‌ಹೌಸ್‌ಗೆ ಸಿಎಂ ಆಗಮಿಸಿದ್ದು, ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಕಾಪು ಪುರಸಭಾ ವ್ಯಾಪ್ತಿಯ ಮೂಳೂರಿನ ಸಾಯಿರಾಧಾ ಬೀಚ್‌ ಹೌಸ್‌ನಲ್ಲಿ ಮುಖ್ಯಮಂತ್ರಿ ಮೂರು ದಿನಗಳ ಕಾಲ ಪ್ರಾಕೃತಿಕ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ.

ಸಂಜೆ ಸುಮಾರು ಎಂಟು ಗಂಟೆಯ ವೇಳೆಗೆ ಗೆಸ್ಟ್‌ ಹೌಸ್‌ಗೆ ಆಗಮಿಸಿರುವ ಕುಮಾರಸ್ವಾಮಿ ಜತೆ ಸಾರಾ ಮಹೇಶ್‌, ಭೋಜೇಗೌಡ ಇದ್ದಾರೆ. ಸಚಿವ ಪುಟ್ಟರಾಜು ಶೀಘ್ರ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಮುಖ್ಯಮಂತ್ರಿ ತಂಗುವ ಗೆಸ್ಟ್‌ಹೌಸ್‌ ಸುತ್ತ ಬಿಗಿ ಪೋಲಿಸ್‌ ಬಂದೋಬಸ್ತ್‌ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ