ಉಡುಪಿ: ನ್ಯುಮೋನಿಯಾದಿಂದ ಉಸಿರಾಟಕ್ಕೆ ಸಮಸ್ಯೆ ಎದುರಿಸುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದು ಡಿ. 21ರಂದು ಸಂಜೆ 4 ಗಂಟೆಗೆ ಆಸ್ಪತ್ರೆಗೆ ಬರಲಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆ.
ಮಂಗಳೂರಿಗೆ ಬರಲಿರುವ ಸಿಎಂ ಯಡಿಯೂರಪ್ಪ ಅವರು ಇಲ್ಲಿನ ಸಕ್ರ್ಯೂಟ್ಹೌಸ್ಗೆ ಭೇಟಿ ನೀಡಿ, ಸ್ಥಳೀಯ ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಮಂಗಳೂರಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, "ನಾಳೆ ನಾನು ಮತ್ತು ಬೊಮ್ಮಾಯಿ ಮಂಗಳೂರಿಗೆ ಹೊಗ್ತೇವೆ. ಮಂಗಳೂರಿನಲ್ಲಿ ಸಭೆ ನಡೆಸಿ ನಂತರ ಉಡುಪಿಗೆ ತೆರಳಿ ಪೇಜಾವರಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸ್ತೇವೆ," ಎಂದು ತಿಳಿಸಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಮಂಗಳೂರು ಗೋಲಿಬಾರ್ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸಿಎಂ, "ನಾಳೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ಮಾಡ್ತೇವೆ. ನಿನ್ನೆ ಗಲಾಟೆ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ಕೆಲವು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕೆಲವರ ಬಳಿ ಐಡಿ ಕಾರ್ಡ್ ಇರಲಿಲ್ಲ. ಹಾಗಾಗಿ ಅವರನ್ನು ವಿಚಾರಣೆ ನಡೆಸಿ ಬಳಿಕ ಕೇರಳ ಗಡಿವರೆಗೂ ಅವರನ್ನು ಪೊಲೀಸರು ಬಿಟ್ಟು ಬಂದ್ರು ," ಎಂದು ವಿವರ ನೀಡಿದ್ದಾರೆ.
'ಸರ್ಕಾರ ಹೇಳದೇ ಪೊಲೀಸರು ಫೈರಿಂಗ್ ಮಾಡಿದ್ರಾ' ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, "ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಅನುಭವ ಇರುವಂತವರು. ಗಲಾಟೆಗೆ ಕಾಂಗ್ರೆಸ್ನವರೇ ಪ್ರಚೋದನೆ ಕೊಟ್ಟಿದ್ದು, ನಾಳೆ ಮಂಗಳೂರಿಗೆ ಹೋಗಿ ಗೋಲಿಬಾರ್ ಬಗ್ಗೆ ವಾಸ್ತವಿಕ ಅಂಶ ತಿಳಿದುಕೊಳ್ತೇನೆ. ಮೃತರಾದವರ ಕುಟುಂಬಗಳಿಗೆ ಪರಿಹಾರ ವಿಚಾರವನ್ನೂ ನಾಳೆ ಅಲ್ಲಿಗೆ ಹೋಗಿ ತೀರ್ಮಾನ ತೆಗೆದುಕೊಳ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಪೌರತ್ವ ಪ್ರತಿಭಟನೆ: ಶಾಂತಿ ಕಾಪಾಡಲು ದೇವೇಗೌಡರ ಮನವಿ
ಶಾಸಕ ರಘುಪತಿ ಭಟ್ ಮನವಿ
ಪೇಜಾವರ ಶ್ರೀಗಳು ಶೀಘ್ರ ಗುಣರಾಗುವಂತೆ ಸಮಸ್ತ ದೇಶ ಬಾಂಧವರು ಪ್ರಾರ್ಥಿಸುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದ್ದಾರೆ.
ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುತ್ತಾ ಅಸ್ಪೃಶ್ಯತೆ ನಿವಾರಣೆಯ ಹೆಜ್ಜೆಯಿಟ್ಟಿದ್ದ ಶ್ರೀಗಳ ತಪಃಶಕ್ತಿಯಿಂದ ಗುಣಮುಖರಾಗಿ ಸಮಾಜದ ಸತ್ಕಾರ್ಯಕ್ಕೆ ಮತ್ತೆ ಧುಮುಕಲಿ. ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಭವ್ಯ ರಾಮಮಂದಿರದ ನೇತೃತ್ವ ವಹಿಸಲಿ ಎಂದು ಹಾರೈಸಿದ್ದಾರೆ.
ಮಂಗಳೂರಿಗೆ ಬರಲಿರುವ ಸಿಎಂ ಯಡಿಯೂರಪ್ಪ ಅವರು ಇಲ್ಲಿನ ಸಕ್ರ್ಯೂಟ್ಹೌಸ್ಗೆ ಭೇಟಿ ನೀಡಿ, ಸ್ಥಳೀಯ ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಮಂಗಳೂರಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, "ನಾಳೆ ನಾನು ಮತ್ತು ಬೊಮ್ಮಾಯಿ ಮಂಗಳೂರಿಗೆ ಹೊಗ್ತೇವೆ. ಮಂಗಳೂರಿನಲ್ಲಿ ಸಭೆ ನಡೆಸಿ ನಂತರ ಉಡುಪಿಗೆ ತೆರಳಿ ಪೇಜಾವರಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸ್ತೇವೆ," ಎಂದು ತಿಳಿಸಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಮಂಗಳೂರು ಗೋಲಿಬಾರ್ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸಿಎಂ, "ನಾಳೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ಮಾಡ್ತೇವೆ. ನಿನ್ನೆ ಗಲಾಟೆ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ಕೆಲವು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕೆಲವರ ಬಳಿ ಐಡಿ ಕಾರ್ಡ್ ಇರಲಿಲ್ಲ. ಹಾಗಾಗಿ ಅವರನ್ನು ವಿಚಾರಣೆ ನಡೆಸಿ ಬಳಿಕ ಕೇರಳ ಗಡಿವರೆಗೂ ಅವರನ್ನು ಪೊಲೀಸರು ಬಿಟ್ಟು ಬಂದ್ರು ," ಎಂದು ವಿವರ ನೀಡಿದ್ದಾರೆ.
'ಸರ್ಕಾರ ಹೇಳದೇ ಪೊಲೀಸರು ಫೈರಿಂಗ್ ಮಾಡಿದ್ರಾ' ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, "ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಅನುಭವ ಇರುವಂತವರು. ಗಲಾಟೆಗೆ ಕಾಂಗ್ರೆಸ್ನವರೇ ಪ್ರಚೋದನೆ ಕೊಟ್ಟಿದ್ದು, ನಾಳೆ ಮಂಗಳೂರಿಗೆ ಹೋಗಿ ಗೋಲಿಬಾರ್ ಬಗ್ಗೆ ವಾಸ್ತವಿಕ ಅಂಶ ತಿಳಿದುಕೊಳ್ತೇನೆ. ಮೃತರಾದವರ ಕುಟುಂಬಗಳಿಗೆ ಪರಿಹಾರ ವಿಚಾರವನ್ನೂ ನಾಳೆ ಅಲ್ಲಿಗೆ ಹೋಗಿ ತೀರ್ಮಾನ ತೆಗೆದುಕೊಳ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಪೌರತ್ವ ಪ್ರತಿಭಟನೆ: ಶಾಂತಿ ಕಾಪಾಡಲು ದೇವೇಗೌಡರ ಮನವಿ
ಶಾಸಕ ರಘುಪತಿ ಭಟ್ ಮನವಿ
ಪೇಜಾವರ ಶ್ರೀಗಳು ಶೀಘ್ರ ಗುಣರಾಗುವಂತೆ ಸಮಸ್ತ ದೇಶ ಬಾಂಧವರು ಪ್ರಾರ್ಥಿಸುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದ್ದಾರೆ.
ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುತ್ತಾ ಅಸ್ಪೃಶ್ಯತೆ ನಿವಾರಣೆಯ ಹೆಜ್ಜೆಯಿಟ್ಟಿದ್ದ ಶ್ರೀಗಳ ತಪಃಶಕ್ತಿಯಿಂದ ಗುಣಮುಖರಾಗಿ ಸಮಾಜದ ಸತ್ಕಾರ್ಯಕ್ಕೆ ಮತ್ತೆ ಧುಮುಕಲಿ. ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಭವ್ಯ ರಾಮಮಂದಿರದ ನೇತೃತ್ವ ವಹಿಸಲಿ ಎಂದು ಹಾರೈಸಿದ್ದಾರೆ.