ಆ್ಯಪ್ನಗರ

ಜೈಲಿಗೆ ಹೋಗಿ ಬಂದರೂ ಬಿಎಸ್‌ವೈಗೆ ಬುದ್ಧಿ ಬಂದಿಲ್ಲ: ಸೊರಕೆ

ಅಧಿಕಾರದ ಆಸೆಗಾಗಿ ಆಪರೇಶನ್‌ ಕಮಲದ ಹೆಸರಿನಲ್ಲಿ ಸಂವಿಧಾನ ವ್ಯವಸ್ಥೆ ಶಿಥಿಲಗೊಳಿಸುವ ಹುನ್ನಾರ ರೂಪಿಸುತ್ತಿರುವ ಮಾಜಿ ಸಿಎಂ ಬಿಎಸ್‌ವೈ ಭ್ರಷ್ಟಚಾರ ನಡೆಸಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಬಂದಿಲ್ಲ. ಈ ಕುದುರೆ ವ್ಯಾಪಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಕೈವಾಡವಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ.

Vijaya Karnataka 18 Jan 2019, 5:00 am
ಉಡುಪಿ: ಅಧಿಕಾರದ ಆಸೆಗಾಗಿ ಆಪರೇಶನ್‌ ಕಮಲದ ಹೆಸರಿನಲ್ಲಿ ಸಂವಿಧಾನ ವ್ಯವಸ್ಥೆ ಶಿಥಿಲಗೊಳಿಸುವ ಹುನ್ನಾರ ರೂಪಿಸುತ್ತಿರುವ ಮಾಜಿ ಸಿಎಂ ಬಿಎಸ್‌ವೈ ಭ್ರಷ್ಟಚಾರ ನಡೆಸಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಬಂದಿಲ್ಲ. ಈ ಕುದುರೆ ವ್ಯಾಪಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಕೈವಾಡವಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ.
Vijaya Karnataka Web 17aa CONGRESS


ಕರ್ನಾಟಕ ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಪ್ರಧಾನಿ ಮೋದಿ ಅಮಿತ್‌ ಶಾ ನೇತೃತ್ವದ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಜ್ಜರಕಾಡು ಹುತಾತ್ಮ ಸ್ಮಾರಕ ಮುಂಭಾಗ ಗುರುವಾರ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.

ಬಿಜೆಪಿಅಧಿಕಾರದ ಆಸೆಗಾಗಿ ಅಡ್ಡ ದಾರಿ ಹಿಡಿದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವ ತರಾತುರಿಯಲ್ಲಿದೆ. ಗೋವಾ, ಅರುಣಾಚಲ, ಮಣಿಪುರ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಕುದುರೆ ವ್ಯಾಪಾರದ ಮೂಲಕ ಬಿಜೆಪಿ ಸರಕಾರ ರಚಿಸಿದೆ. ಕರ್ನಾಟಕದಲ್ಲೂ ಈ ಯತ್ನಕ್ಕೆ ಮುಂದಾಗಿದ್ದು, ಸಮ್ಮಿಶ್ರ ಸರಕಾರ ಕೆಳಗಿಸುವ ಪ್ರಯತ್ನದಲ್ಲಿದೆ ಎಂದರು.

ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಮಾತನಾಡಿ, ಪ್ರಧಾನಿ ಮೋದಿ ಸುಳ್ಳು ಭರವಸೆ ಕೊಟ್ಟು ಹಣದ ಪ್ರಭಾವದಿಂದ ಅಧಿಕಾರ ನಡೆಯುತ್ತಿದ್ದು, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಇದು ದೇಶದ ಸೌಹಾರ್ದತೆಗೆ ಅಪಾಯ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಪ್ರಮುಖರಾದ ಹರೀಶ್‌ ಕಿಣಿ, ನೀರೆಕೃಷ್ಣ ಶೆಟ್ಟಿ, ಎಂ.ಎ. ಗಫೂರ್‌, ಬಿ. ನರಸಿಂಹ ಮೂರ್ತಿ, ಭಾಸ್ಕರ್‌ ರಾವ್‌ ಕಿದಿಯೂರು, ಸರಸು ಬಂಗೇರ, ಅಮೃತ್‌ ಶೆಣೈ, ವೆರನಿಕಾ ಕರ್ನೇಲಿಯೋ, ಸತೀಶ್‌ ಅಮೀನ್‌ ಪಡುಕರೆ, ವಿಘ್ನೇಶ್‌ ಕಿಣಿ, ವಿಶ್ವಾಸ್‌ ಅಮೀನ್‌, ಜ್ಯೋತಿ ಹೆಬ್ಬಾರ್‌, ಚಂದ್ರಿಕಾ ಶೆಟ್ಟಿ, ವಿಲ್ಸನ್‌ ರೋಡ್ರಿಗಸ್‌, ರೋಶನಿ ಒಲಿವೆರಾ, ಪ್ರಖ್ಯಾತ್‌ ಶೆಟ್ಟಿ, ಶಬ್ಬೀರ್‌ ಉಡುಪಿ, ಲೂವಿಸ್‌ ಲೋಬೊ, ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು.

ನೋವಿಗಿಲ್ಲ ಸ್ಪಂದನೆ, ರೆಸಾರ್ಟ್‌ನಲ್ಲಿ ಮೋಜು, ಮಸ್ತಿ : ಪ್ರಸ್ತುತ ರಾಜ್ಯದಲ್ಲಿ ಬರಗಾಲವಿದ್ದು, ಕ್ಷೇತ್ರದಲ್ಲಿದ್ದು ಕೆಲಸ ಮಾಡಬೇಕಿದ್ದ ಶಾಸಕರು ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಕರಾವಳಿಯಲ್ಲಿ 7 ಮೀನುಗಾರರು ನಾಪತ್ತೆಯಾಗಿ ತಿಂಗಳೇ ಕಳೆದಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕಿದ್ದ ಕರಾವಳಿಯ ಶಾಸಕರು, ಸಂಸದರು ಹರಿಯಾಣದ ರೆಸಾರ್ಟ್‌ನಲ್ಲಿ ಮೋಜು ಮಸ್ತಿಯಲ್ಲಿದ್ದಾರೆ. ಕಳೆದ 3,4 ದಿನಗಳ ಬಾಡಿಗೆಯೇ 4 ಕೋಟಿ ದಾಟಿದೆ. ಇದು ಬಿಜೆಪಿ ಶಾಸಕರು ಅಭಿವೃದ್ಧಿಗೆ ನೀಡುವ ಮನ್ನಣೆ ಎಂದು ಲೇವಡಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ