ಆ್ಯಪ್ನಗರ

ಕುಂದಾಪುರ: ಮದುವೆಯಲ್ಲಿ ಕೊರೊನಾ ಜಾಗೃತಿ!

ಕೊರೊನಾ ಸೋಂಕಿನ ಬಗ್ಗೆ ಸರ್ಕಾರ, ಸಂಘ ಸಂಸ್ಥೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಮದುವೆ ಕಾರ್ಯಮದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

Vijaya Karnataka Web 16 Jun 2020, 11:27 am
ಕುಂದಾಪುರ: ಕೊರೊನಾ ಜಾಗತಿಕ ಮಹಾಮಾರಿಯಾಗಿ ಪರಿಣಮಿಸಿರುವ ಈ ಕಾಲ ಘಟ್ಟದಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಲೆ ಇದೆ. ಭಾನುವಾರ ಬೈಂದೂರು ತಾಲೂಕಿನ ಸೇನಾಪುರ ಗ್ರಾಮದ ಒಳಬೈಲು ಎಂಬಲ್ಲಿ ಕೋವಿಡ್‌-19 ನಿಯಮಾವಳಿ ಹಿನ್ನೆಲೆಯಲ್ಲಿ ಜರುಗಿದ ಸರಳ ಮದುವೆಯಲ್ಲಿ ಕೊರೊನಾ ಜಾಗೃತಿಯನ್ನು ವಿಭಿನ್ನವಾಗಿ ನಡೆಸಲಾಯಿತು. ಮದುವೆ ಸಮಾರಂಭದಲ್ಲಿ ಕೊರೊನಾ ವಿರುದ್ಧ ಜಯಿಸಲು 20 ಸೂತ್ರಗಳು ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಿ, ನೆರೆದವರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿದ್ದು ಗಮನ ಸೆಳೆಯಿತು.
Vijaya Karnataka Web jpg (27)


ಸೇನಾಪುರ ಗ್ರಾಮ ಒಳಬೈಲು ನಿವಾಸಿ ರಾಜಗುರು ಪಡುಕೋಣೆ ಮತ್ತು ಅಂಕದಕಟ್ಟೆ ಮೂಡ್‌ ಹಂಗಳೂರು ಸಹನಾರಾಣಿ ಅವರ ವಿವಾಹದ ವೇದಿಕೆಯಲ್ಲಿ ಡಾ.ಹೇಮಂತ್‌ ಕುಮಾರ್‌ ಸಾಸ್ತಾನ ಬರೆದಿರುವ 'ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು' ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭ ನಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೆಡಲ್‌ ಸ್ಯಾನಿಟೈಸರ್‌ ಮೆಷಿನ್‌ನನ್ನು ಕೊಡುಗೆಯಾಗಿ ನೀಡಲಾಯಿತು. ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಕಮರಿ ಕೊಡುಗೆಯನ್ನು ಸ್ವೀಕರಿಸಿದರು. ಕುಂದಾಪುರದ ಇಎಸ್‌ಐ ಆಸ್ಪತ್ರೆಗೂ ಪೆಡಲ್‌ ಸ್ಯಾನಿಟೈಸರ್‌ ಮೆಷಿನ್‌ನನ್ನು ಕೊಡುಗೆಯಾಗಿ ನೀಡಲಾಯಿತು. ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಗಾಣಿಗ ಕೊಲ್ಲೂರು, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಕರ್ಣಾಟಕ ಬ್ಯಾಂಕಿನ ನಿವೃತ್ತ ಮೆನೇಜರ್‌ ಫಿಲಿಪ್‌ ಡಿಸಿಲ್ವ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದರು. ಮದುವೆ ಹಾಲ್‌ ಪ್ರವೇಶಕ್ಕೆ ಮಾಸ್ಕ್‌ ಕಡ್ಡಾಯ: ಮದುವೆಗೆ ಬರುವವರಿಗೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿತ್ತು. ಥರ್ಮಲ್‌ ಸ್ಕ್ರೀನಿಂಗ್‌ ಮಾಡಿಸಿ ಒಳಬಿಡಲಾಗಿತ್ತು. ಸ್ಯಾನಿಟೈಸರ್‌ ಬಳಕೆ ಮಾಡಲಾಗಿತ್ತು.

ಕೋವಿಡ್ ನಿಯಂತ್ರಣಕ್ಕೆ ಧನ್ವಂತರಿ ಯಾಗ! ದೇವರ ಮೊರೆ ಹೋದ ಬಿಎಸ್‌ವೈ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ