ಆ್ಯಪ್ನಗರ

ಕಾರವಾರ: ಸಿಬ್ಬಂದಿಗೆ ಕೊರೋನಾ ವೈರಸ್ ತಗುಲಿರುವ ಹಿನ್ನೆಲೆ, ಸಮುದ್ರದಲ್ಲೇ ಹಡಗಿಗೆ ದಿಗ್ಭಂಧನ!

3,700 ಮಂದಿ ನಾವಿಕರಿರುವ ಜಪಾನಿನ ಯುಕೋಹಾಮದ ಡೈಮಂಡ್ ಪ್ರಿನ್ಸಸ್ ಕ್ರೂಸ್ ರ ಹಡಗಿನಲ್ಲಿ ಒಟ್ಟು 61 ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಕಾರವಾರದ ಯುವಕನೊಬ್ಬ ಸಿಲುಕಿರುವ ಆತಂಕಕಾರಿ ವಿದ್ಯಮಾನ ನಡೆದಿದೆ.

Vijaya Karnataka Web 8 Feb 2020, 11:14 am
ಕಾರವಾರ : 3,700 ಮಂದಿ ನಾವಿಕರಿರುವ ಜಪಾನಿನ ಯುಕೋಹಾಮದ ಡೈಮಂಡ್ ಪ್ರಿನ್ಸಸ್ ಕ್ರೂಸ್ ರ ಹಡಗಿನಲ್ಲಿ ಒಟ್ಟು 61 ಮಂದಿಗೆ ಕೊರೊನಾ ವೈರಸ್ತ ತಗುಲಿರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಡಗನ್ನು ಸಮುದ್ರದಲ್ಲೇ ದಿಗ್ಭಂಧನದಲ್ಲಿ ಇರಿಸಲಾಗಿದೆ. ಈ ಹಡಗಿನಲ್ಲಿ ಕಾರವಾರದ ಯುವಕನೊಬ್ಬ ಸಿಲುಕಿರುವ ಆತಂಕಕಾರಿ ವಿದ್ಯಮಾನ ನಡೆದಿದೆ.
Vijaya Karnataka Web abhishek


ಹಡಗಿನ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರವಾರದ ಪದ್ಮನಾಭನಗರದ ಅಭಿಷೇಕ್ ಸಂಕಷ್ಟಕ್ಕೀಡಾಗಿದ್ದಾನೆ. ಯುವಕನ ಪೋಷಕರು ಈಗ ತಮ್ಮ ಮಗನ ರಕ್ಷಣೆಗಾಗಿ ಉತ್ತರ ಕನ್ನಡ ಡಿಸಿ ಮೊರೆ ಹೋಗಿದ್ದಾರೆ.
ಅಭಿಷೇಕ್ ಕಳೆದ ಮೂರು ತಿಂಗಳಿನಿಂದ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈ ಹಡಗಿನಲ್ಲಿದ್ದ ಚೀನಾ ಮೂಲದ ವ್ಯಕ್ತಿಯೊಬ್ಬನಿಗೆ ಕೊರೋನಾ ವೈರಸ್ ತಗುಲಿದ ಹಿನ್ನೆಲೆಯಲ್ಲಿ ಹಡಗನ್ನು ಜಪಾನಿನ ಯುಕೋ ಹಾಮದಲ್ಲಿ ತಡೆ ಹಿಡಿಯಲಾಗಿದೆ.‌ ಚೀನಾದಿಂದ ಜಪಾನಿಗೆ ಹೋಗಿ ಈ ಹಡಗು ವಾಪಸ್ ಆಗುತ್ತಿತ್ತು ಎನ್ನಲಾಗಿದೆ.

ಕ್ರೂಸ್ನಲ್ಲಿ ಇನ್ನಷ್ಟು ಮಂದಿಗೆ ರೋಗ ಹರಡುವ ಭೀತಿಯಿಂದಾಗಿ ಹಡಗನ್ನು ತಡೆಹಿಡಿದಿದ್ದು, ಇದರಿಂದ ಕಾರವಾರದ ಯುವಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದೀಗ ಮಗನನ್ನು ರಕ್ಷಿಸಿ ಕರೆತರುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಅಭಿಷೇಕ ತಂದೆ ಬಾಲಕೃಷ್ಣ ಹಾಗೂ ತಾಯಿ ರೂಪಾಲಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ