ಆ್ಯಪ್ನಗರ

ಕೊರೊನಾ ಎಫೆಕ್ಟ್: ಉಡುಪಿಯಲ್ಲಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ದಂಪತಿಯ ರಕ್ಷಣೆ

ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದ ದಂಪತಿಯನ್ನು ರಕ್ಷಣೆ ಮಾಡಿ ಅವರ ಊರಿಗೆ ಕಳುಹಿಸಿಕೊಟ್ಟ ಘಟನೆ ಉಡುಪಿಯಿಂದ ವರದಿಯಾಗಿದೆ.

Vijaya Karnataka Web 1 Jun 2020, 6:36 am
ಉಡುಪಿ: ಲಾಕ್‌ಡೌನ್‌ ನಿಂದಾಗಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಅಸಹಾಯಕ ದಂಪತಿಯನ್ನು ರಕ್ಷಿಸಿ, ಅವರ ಊರಾದ ಧರ್ಮಸ್ಥಳಕ್ಕೆ ವಿಶು ಶೆಟ್ಟಿ ಬಾಡಿಗೆ ಕಾರಿನ ಮುಖಾಂತರ ಕಳುಹಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಸಂತೋಷ-ಭವಾನಿ ದಂಪತಿ ಉಡುಪಿಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂಲತಃ ಧರ್ಮಸ್ಥಳ ಗ್ರಾಮದವರೆಂದು ತಿಳಿದು ಬಂದಿದೆ. ಕಳೆದೆರಡು ದಿನಗಳಿಂದ ಕರಾವಳಿ ಬೈಪಾಸ್‌ ಬಳಿ ಬಸ್‌ಸ್ಟ್ಯಾಂಡ್‌ನಲ್ಲಿ ಬಳಲಿ ಕುಳಿತುಕೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ವಿಶು ಶೆಟ್ಟಿ, ದಂಪತಿಗೆ ಆಹಾರ ನೀಡಿ, ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಪುನರ್ವಸತಿ ಹಾಗೂ ಸರಕಾರಿ ಕ್ವಾರಂಟೈನ್‌ ಲಭ್ಯವಿಲ್ಲದ ಕಾರಣ ಪೊಲೀಸ್‌ ವಿಚಾರಣೆಗೆ ಒಳಪಡಿಸಿ, ಸೂಕ್ತ ದಾಖಲೆ ಖಚಿತ ಪಡಿಸಿಕೊಂಡ ಬಳಿಕ ವಿಶು ಶೆಟ್ಟಿ ಬಾಡಿಗೆ ಕಾರಿನ ಮೂಲಕ ದಂಪತಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿಶು ಶೆಟ್ಟಿ ಅವರ ಸ್ನೇಹಿತ ಕರುಣಾಕರ ಪೂಜಾರಿ ನೊಂದವರಿಗೆ 1000 ರೂ. ನೀಡಿದ್ದಾರೆ.

ಮಹಿಳೆಯೊಬ್ಬಳು ಬೀದಿಯಲ್ಲಿ ಅಸಹಾಯಕರಾಗಿ ಕಣ್ಣೀರು ಹಾಕುವುದು ಸಮಾಜಕ್ಕೆ ಶಾಪ. ಕೊರೊನಾದಿಂದ ಇಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿಇನ್ನಷ್ಟು ಹೆಚ್ಚಳವಾಗುವ ಸಂಭವವಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಹಾಗೂ ರಕ್ಷಣೆಯ ಬಗ್ಗೆ ಕಾರ್ಯಪ್ರವೃತ್ತರಾಗಬೇಕಾಗಿದೆ. ಎಲ್ಲ ಸಮಸ್ಯೆಗಳಿಗೆ ಪೊಲೀಸರೇ ಹೊಣೆಯಲ್ಲ ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ