ಆ್ಯಪ್ನಗರ

ಉಡುಪಿ: ಗುಜರಾತಿನಿಂದ ಕೇರಳಕ್ಕೆ ಸಂಚಾರ ಆರಂಭಿಸಿದ 2 ಸರಕು ಸಾಗಣೆ ರೈಲು

ಗುಜರಾತ್ ನಿಂದ ಕೇರಳಕ್ಕೆ ಎರಡು ಸರಕು ಸಾಗಣೆ ರೈಲು ಆರಂಭವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಔಷಧಿ, ವೈದ್ಯಕೀಯ ಪರಿಕರ, ತರಕಾರಿ, ಮಾವು ಸಹಿತ ಹಣ್ಣು ಹಂಪಲುಗಳನ್ನು ಇದು ಸಾಗಿಸಲಿದೆ.

Vijaya Karnataka Web 20 Apr 2020, 6:26 pm
ಉಡುಪಿ: ಕೊರೊನಾ ವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಔಷಧಿ, ವೈದ್ಯಕೀಯ ಪರಿಕರ, ತರಕಾರಿ, ಮಾವು ಸಹಿತ ಹಣ್ಣು ಹಂಪಲುಗಳ ಸರಕು ಸಾಗಣೆ ರೈಲು ಗುಜರಾತ್‌ನಿಂದ ಕೇರಳಕ್ಕೆ ಆರಂಭವಾಗಿದೆ. ಈ ರೈಲು ಉಡುಪಿ ಮೂಲಕ ಹಾದುಹೋಗಲಿದೆ.
Vijaya Karnataka Web goods


00933 ಸರಕು ಸಾಗಣೆ ರೈಲು ಗುಜರಾತಿನ ಓಖಾದಿಂದ ಏ.20 ಮಧ್ಯಾಹ್ನ 1.10ಕ್ಕೆ ಹೊರಟಿದ್ದು ಏ.21 ಬೆಳಗ್ಗೆ 11.10ಕ್ಕೆ ರತ್ನಗಿರಿ, ಮಧ್ಯಾಹ್ನ 1.40ಕ್ಕೆ ಕಂಕವಲಿ, 4.50ಕ್ಕೆ ಮಡಗಾಂವ್‌ ಜಂಕ್ಷನ್‌, ರಾತ್ರಿ 8.10ಕ್ಕೆ ಉಡುಪಿ, ಏ. 22 ಮಧ್ಯಾಹ್ನ 12ಕ್ಕೆ ಕೇರಳದ ತಿರುವನಂತಪುರಂ ಸೆಂಟ್ರಲ್‌ ತಲುಪಲಿದೆ.

00934 ರೈಲು ಏ. 22, ರಾತ್ರಿ 11ಗಂಟೆಗೆ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡಲಿದ್ದು ಏ. 23, ಮಧ್ಯಾಹ್ನ 1.20ಕ್ಕೆ ಉಡುಪಿ, ಸಂಜೆ 6.10ಕ್ಕೆ ಮಡಗಾಂವ್‌ ಜಂಕ್ಷನ್‌, ರಾತ್ರಿ 8.50ಕ್ಕೆ ಕಂಕವಲಿ, ರಾತ್ರಿ 11.10ಕ್ಕೆ ರತ್ನಗಿರಿ ಹಾಗೂ ಏ. 24, ರಾತ್ರಿ 9.40ಕ್ಕೆ ಓಖಾ ತಲುಪಲಿದೆ.

ಉಡುಪಿ ಸದ್ಯದಲ್ಲೇ ಗ್ರೀನ್‌ ಝೋನ್‌ ಗೆ ಬರಲಿದೆ, ಜಿಲ್ಲಾಧಿಕಾರಿ ಜಗದೀಶ್‌ ಭರವಸೆ

05ವ್ಯಾಗನ್‌ ಹೊಂದಿದ ರೈಲಿಗೆ ಜಾಮ್‌ ನಗರ್‌, ರಾಜ್‌ಕೋಟ್‌, ಸುರೇಂದ್ರನಗರ್‌, ಅಹ್ಮದಾಬಾದ್‌, ಆನಂದ್‌, ವಡೋದರಾ, ಭರೂಚ್‌, ಸೂರತ್‌, ವಸಾಯಿ ರೋಡ್‌, ಪನ್ವೆಲ್‌, ರೋಹಾ, ರತ್ನಗಿರಿ, ಕಂಕವಲಿ, ಮಡಗಾಂವ್‌, ಉಡುಪಿ, ಮಂಗಳೂರು ಜಂಕ್ಷನ್‌, ಕಣ್ಣೂರು, ಕ್ಯಾಲಿಕಟ್‌, ಶೊರನೂರ್‌, ತ್ರಿಶ್ಶೂರ್‌, ಎರ್ನಾಕುಲಂ ಟೌನ್‌,ಕೊಟ್ಟಾಯಂ ಮತ್ತು ಕೊಲ್ಲಂ ಜಂಕ್ಷನ್‌ನಲ್ಲಿ ನಿಲುಗಡೆಯಿದೆ.

ಕೊರೊನಾ ಲೈವ್ ಅಪ್ಡೇಟ್ಸ್: 24ಗಂಟೆಯಲ್ಲಿ 1553 ಪಾಸಿಟಿವ್ ಕೇಸ್, 36 ಸಾವು

ಗ್ರಾಹಕರು ತಮ್ಮ ಸರಕು ಸಾಗಣೆಗೆ ಕೊಂಕಣ ರೈಲ್ವೆಯ ರತ್ನಗಿರಿ, ಕಂಕವಲಿ, ಮಡಗಾಂವ್‌ ಮತ್ತು ಉಡುಪಿ ಸ್ಟೇಶನ್‌ಗಳನ್ನು ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ