ಆ್ಯಪ್ನಗರ

ಉಡುಪಿ: ಬೀಜಾಡಿ, ತೆಕ್ಕಟ್ಟೆಯ ಇಬ್ಬರಿಗೆ ಪಾಸಿಟಿವ್‌ 10 ಮನೆ, 1 ದಿನಸಿ ಅಂಗಡಿ ಸೀಲ್‌ಡೌನ್‌

ತೆಕ್ಕಟ್ಟೆ ಕೊಲ್ಲೂರು ಸೆಂಟರ್‌ನಲ್ಲಿ ಕ್ವಾರಂಟೈನ್‌ ಮುಗಿಸಿ ಹೋಂ ಕ್ವಾರಂಟೈನ್‌ಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿಕೊರೊನಾ ಪಾಸಿಟಿವ್‌ ಇರುವುದು ಬೆಳಕಿಗೆ ಬಂದಿದೆ.

Vijaya Karnataka Web 3 Jun 2020, 5:26 pm
ತೆಕ್ಕಟ್ಟೆ: ಕೊಲ್ಲೂರು ಸೆಂಟರ್‌ನಲ್ಲಿ ಕ್ವಾರಂಟೈನ್‌ ಮುಗಿಸಿ ಹೋಂ ಕ್ವಾರಂಟೈನ್‌ಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್‌ ಇರುವುದು ದೃಢಪಟ್ಟಿದ್ದು, ಆಯಾ ಪರಿಸರವನ್ನು ಇಲಾಖೆ ಕಂಟೋನ್ಮೆಂಟ್‌ ಝೋನ್‌ ಆಗಿ ಪರಿಗಣಿಸಿದೆ.
Vijaya Karnataka Web udupi
ಸೀಲ್ ಡೌನ್ ಮಾಡುತ್ತಿರುವ ಸಾಂಧರ್ಬಿಕ ಚಿತ್ರ


ಬೀಜಾಡಿ ಗ್ರಾಪಂ ವ್ಯಾಪ್ತಿಯ ಶಾಂತಿನಗರದಲ್ಲಿ ಮುಂಬಯಿಯಿಂದ ಬಂದ ಯುವಕನಿಗೆ ಸೋಂಕು ದೃಢಪಟ್ಟ ಕಾರಣ ಸೋಂಕಿತನ ಮನೆ ಹಾಗೂ ಸಮೀಪದಲ್ಲಿರುವ ಕೋಟೇಶ್ವರ ಗ್ರಾಪಂ ವ್ಯಾಪ್ತಿಯ 4 ಮನೆ, 1 ದಿನಸಿ ಅಂಗಡಿ ಹಾಗೂ ಮುಂಬಯಿಯಿಂದ ಆಗಮಿಸಿದ ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ತೋಟದಬೆಟ್ಟು ಪರಿಸರದ ಯುವಕನ ಮನೆಯ ಸಮೀಪದ 6 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಇಲಾಖೆ ಕ್ರಮ:
ಈಗಾಗಲೇ ಗ್ರಾಪಂ ಅಧಿಕಾರಿಗಳು, ಕಂದಾಯ, ಆರೋಗ್ಯ, ಆಶಾ ಕಾರ್ಯಕರ್ತೆಯರು, ಪೊಲೀಸ್‌ ಇಲಾಖೆಯ ಸಿಬ್ಬಂದಿ ಸೋಂಕು ದೃಢಪಟ್ಟ ವ್ಯಕ್ತಿಗಳ ಮನೆಗೆ ತೆರಳಿ ಆರೋಗ್ಯದ ಕುರಿತ ಎಚ್ಚರಿಕೆ ಸಂದೇಶಗಳು ಹಾಗೂ ಕುಟುಂಬಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ.

ಉಡುಪಿ: ಮೇ 15ರಂದು 3 ಪ್ರಕರಣ, ಜೂನ್‌ 2ಕ್ಕೆ 400ಕ್ಕೂ ಹೆಚ್ಚು, ಎರಡೇ ವಾರಕ್ಕೆ 400 ಕೊರೊನಾ ಪಾಸಿಟಿವ್‌

28 ದಿನ ಸೀಲ್‌ಡೌನ್‌: ಬೀಜಾಡಿ ಗ್ರಾಪಂ ವ್ಯಾಪ್ತಿಯ ಶಾಂತಿನಗರ ಹಾಗೂ ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ತೋಟದಬೆಟ್ಟು ಪರಿಸರದ ಒಟ್ಟು 10 ಮನೆ ಹಾಗೂ 1 ದಿನಸಿ ಅಂಗಡಿ ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದ್ದು, ಮನೆಯ ಸದಸ್ಯರಿಗೆ ಹೋಂ ಕ್ವಾರಂಟೈನ್‌ ವಿಧಿಸಲಾಗಿದೆ. ಇದರಂತೆ ಕುಟುಂಬಗಳಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಸ್ಥಳೀಯಾಡಳಿತ ಸಜ್ಜುಗೊಂಡಿದೆ.

'ಬೆಂಗಳೂರು ಏರ್‌ಪೋರ್ಟ್‌ ಮಾರ್ಗಸೂಚಿಗಳು ಮಂಗಳೂರಿಗೂ ಅನ್ವ...

ಅಧಿಕಾರಿಗಳ ಬೇಟಿ:
ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾ, ಬೀಜಾಡಿ ಪಿಡಿಒ ಗಣೇಶ್‌, ಆಶಾ ಕಾರ್ಯಕರ್ತೆ ಸೀತಾ, ರತ್ನಾ ಕುಂದರ್‌, ಸುಹಾಸಿನಿ ಶೆಟ್ಟಿ, ಬೀಜಾಡಿ ವಿಎ ಬಸವ, ಬೀಜಾಡಿ ಗ್ರಾಪಂ ಸದಸ್ಯ ವಾದಿರಾಜ್‌ ಹೆಬ್ಬಾರ್‌, ಪ್ರಕಾಶ್‌ ಪೂಜಾರಿ, ತೆಕ್ಕಟ್ಟೆ ಗ್ರಾಪಂ ಅಧ್ಯಕ್ಷ ಶೇಖರ ಕಾಂಚನ್‌ ಕೊಮೆ, ಕಾರ್ಯದರ್ಶಿ ಚಂದ್ರ, ತಾಪಂ ಮಾಜಿ ಸದಸ್ಯ ಲಕ್ಷತ್ರ್ಮಣ ಮೊಗವೀರ, ಕುಂದಾಪುರ ಮತ್ತು ಕೋಟ ಠಾಣೆ ಸಿಬ್ಬಂದಿ ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ