ಆ್ಯಪ್ನಗರ

ಕ್ಯಾನ್ಸರ್‌ ಚಿಕಿತ್ಸೆಗೆಂದು ಉಡುಪಿಗೆ ಬಂದಿದ್ದ ಚಿತ್ರದುರ್ಗದ ಬಾಲಕಿಗೆ ಕೊರೊನಾ ಸೋಂಕು!

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ 17ರ ಹರೆಯದ ಬಾಲಕಿಯಲ್ಲಿ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿದೆ.

Vijaya Karnataka Web 20 May 2020, 9:39 am
ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ 17ರ ಹರೆಯದ ಬಾಲಕಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
Vijaya Karnataka Web Coronavirus


ಕ್ಯಾನ್ಸರ್‌ ಚಿಕಿತ್ಸೆಗಾಗಿ ಈಕೆ ಮೇ 16 ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಜಾಗೃತಾ ಕ್ರಮಕ್ಕಾಗಿ ಆಕೆಯ ಗಂಟಲಿನ ಸ್ರಾವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಮಂಗಳವಾರ ವರದಿ ಪಾಸಿಟಿವ್‌ ಬಂದಿದೆ.

ಸದ್ಯ ಜಿಲ್ಲೆಯಲ್ಲೇ ಇರುವುದರಿಂದ ಈಕೆಯನ್ನು ಟಿಎಂಎ ಪೈ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಉಡುಪಿಯಿಂದ ವಿಶೇಷ ರೈಲಲ್ಲಿ ತವರಿಗೆ ಹೊರಟ 1460 ಮಂದಿ ಯುಪ...

ಚಿತ್ರದುರ್ಗದ 17 ರ ಹರೆಯದ ಬಾಲಕಿ ಕ್ಯಾನ್ಸರ್‌ ಚಿಕಿತ್ಸೆಗೆ ಬಂದಿದ್ದು, ಕೊರೊನಾದ ಯಾವುದೇ ಲಕ್ಷಣ ಇರಲಿಲ್ಲ. ಆದರೆ ವೈದ್ಯರು ಮುಂಜಾಗೃತಾ ಕ್ರಮಕ್ಕಾಗಿ ಆಕೆಯ ಗಂಟಲಿನ ಸ್ರಾವ ಪರೀಕ್ಷೆ ಮಾಡಿದ್ದು, ವೈರಸ್‌ ಇರುವುದು ಪತ್ತೆಯಾಗಿದೆ. ಆಕೆಯನ್ನು ಪರೀಕ್ಷಿಸುವಾಗ ಆಸ್ಪತ್ರೆಯ ವೈದ್ಯರು ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿರುವುದರಿಂದ ಕ್ವಾರಂಟೈನ್‌ನಲ್ಲಿಡುವ ಅಗತ್ಯವಿಲ್ಲಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ವಿಪರೀತ ಏರಿಕೆ ಕಂಡ ಕೋಳಿ ಮಾಂಸ ದರ

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿಆಸ್ಪತ್ರೆಗೆ ಯಾವುದೇ ಕೇಸ್‌ ಬಂದರೂ ಕೋವಿಡ್‌ ಪರೀಕ್ಷೆ ಮಾಡುವುದು ನಮ್ಮ ಪದ್ಧತಿ. ಆ ಬಾಲಕಿಯನ್ನು ಪಾಸಿಟಿವ್‌ ಇರುವುದು ಕಂಡು ಬಂದಿದ್ದು, ಆಕೆಗೆ ಕ್ಯಾನ್ಸರ್‌ಗೆ ಚಿಕಿತ್ಸೆ ಮಾಡಬೇಕಾಗಿದೆ. ನಮ್ಮ ಜಿಲ್ಲೆಯ ತಜ್ಞರ ಸಮಿತಿ ಕರೆದಿದ್ದು, ಯಾವ ರೀತಿಯಲ್ಲಿಚಿಕಿತ್ಸೆ ಮಾಡಬೇಕೆಂಬ ಬಗ್ಗೆ ಚರ್ಚಿಸಿದ್ದೇವೆ. ಆಕೆಯ ಹಿಸ್ಟರಿ ಅಧ್ಯಯನಕ್ಕಾಗಿ ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ