ಆ್ಯಪ್ನಗರ

ಕೊರೊನಾ ಸಂಜೀವಿನಿಗೆ ಉಡುಪಿಯಲ್ಲಿ ಜಾಗಟೆ ನಾದದ ಸ್ವಾಗತ!

ಉಡುಪಿಗೆ ಕೊರೊನಾ ಸಂಜೀವಿನಿ ಆಗಮಿಸಿದ್ದು, ಜಾಗಟೆ ನಾದದ ಸ್ವಾಗತ ನೀಡಲಾಯಿತು. ಮೊದಲ ಹಂತದಲ್ಲಿ ನೋಂದಾಯಿತ 22,300 ಆರೋಗ್ಯ ಕಾರ್ಯಕರ್ತರಿಗೆ ಜ.16ರಿಂದ ಆರು ಕೇಂದ್ರಗಳ ಮೂಲಕ ಲಸಿಕೆ ಡೋಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Vijaya Karnataka Web 14 Jan 2021, 1:21 pm
ಉಡುಪಿ: ಕೊರೊನಾ ಮಹಾಮಾರಿ‌ ವಿರುದ್ಧದ ಲಸಿಕೆ ಕೋವಿಶೀಲ್ಡ್ 12,000 ಡೋಸ್ ಹೊತ್ತ ವಾಹನ ಉಡುಪಿ ಜಿಲ್ಲೆಗೆ ಗುರುವಾರ ಮಂಗಳೂರಿನಿಂದ ಆಗಮಿಸಿದ್ದು ಜಾಗಟೆ ನಾದದ ಸ್ವಾಗತ ನೀಡಲಾಯಿತು.
Vijaya Karnataka Web ಉಡುಪಿಗೆ ಕೊರೊನಾ ಲಸಿಕೆ ಆಗಮನ


ಮೊದಲ ಹಂತದಲ್ಲಿ ನೋಂದಾಯಿತ 22,300 ಆರೋಗ್ಯ ಕಾರ್ಯಕರ್ತರಿಗೆ ಜ.16ರಿಂದ ಆರು ಕೇಂದ್ರಗಳ ಮೂಲಕ ಲಸಿಕೆ ಡೋಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋಲ್ಡ್ ಸ್ಟೋರೇಜ್ ನಲ್ಲಿ ಲಸಿಕೆ ವ್ಯವಸ್ಥಿತವಾಗಿ ದಾಸ್ತಾನಿಡಲಾಗಿದ್ದು ಲಸಿಕೆ ವಿತರಣೆಗೆ 94 ಸೆಂಟರ್ ಗಳನ್ನು ಗುರುತಿಸಲಾಗಿದೆ. ಇದರಲ್ಲಿ ‌74 ಸರಕಾರಿ, 20ಖಾಸಗಿ ಕೇಂದ್ರಗಳಾಗಿದ್ದು ಲಸಿಕೆ ನೀಡಲು 240ಅವಧಿ(ಸೆಷನ್) ನಿಗದಿಪಡಿಸಲಾಗಿದೆ.
ಕುಂದಾನಗರಿ ಬೆಳಗಾವಿಗೆ ಬಂತು ಕೊರೊನಾ ಸಂಜೀವಿನಿ; ಪೂಜೆ ಮಾಡಿ, ಮಂತ್ರ ಹೇಳಿ ಲಸಿಕೆ ಸಂಗ್ರಹ!

ಮೊದಲ ಹಂತದ‌ ಲಸಿಕೆ ಪಡೆದವರಿಗೆ 28ನೇ ದಿನ ಎರಡನೇ ಡೋಸ್ ನೀಡಲಿದ್ದು, ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಲಸಿಕೆಯನ್ನು ಗ್ರೂಪ್ ಡಿಯಿಂದ ವೈದ್ಯರ ತನಕ ನೀಡಲಾಗುವುದು.

ಪೂನಾದ ಸೀರಮ್ ಇನ್ಸ್ಟಿಟ್ಯೂಟ್ ನಿಂದ ಪೂರೈಕೆಯಾದ ಲಸಿಕೆ ಹಾಕುವ ನಿಟ್ಟಿನಲ್ಲಿ 29,400ಅಟೋ ಡಿಸ್ಪೋಸೇಬಲ್ ಸಿರಿಂಜ್ ಒದಗಿಸಲಾಗಿದೆ‌.ಒಂದು ವಯಲ್ 5ಎಂ.ಎಲ್.ಔಷಧ ಹೊಂದಿದ್ದು ಒಬ್ಬರಿಗೆ ನೀಡುವ ಒಂದು ಡೋಸ್ ನಲ್ಲಿ 0.50ಎಂ.ಎಲ್.ಪ್ರಮಾಣವಿದೆ.
ಕೋವಿಡ್ ಲಸಿಕೆ ಸುರಕ್ಷಿತ, ಆತಂಕ ಬೇಡ ಎಂದ ಕೆ. ಸುಧಾಕರ್

ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಉಡುಪಿಯ ಡಾ.ಟಿ.ಎಂ.ಎ.ಪೈ‌ ಆಸ್ಪತ್ರೆ, ಕುಂದಾಪುರ ಸರಕಾರಿ ಆಸ್ಪತ್ರೆ, ಕಾರ್ಕಳ ಸರಕಾರಿ ಆಸ್ಪತ್ರೆ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಿಕೆ ಜ.16ರಿಂದ ನೀಡಲಾಗುವುದು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿ.ಪಂ.ಸಿಇಒ ಡಾ.ನವೀನ್ ಭಟ್ ವೈ.ಉಪಸ್ಥಿತರಿದ್ದರು.
ಕೊನೆಗೂ ಬಂದೇ ಬಿಡ್ತು ಸಂಜೀವಿನಿ: ಬೆಂಗಳೂರು ತಲುಪಿದ ಕೋವಿಶೀಲ್ಡ್‌ ಕೊರೊನಾ ಲಸಿಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ