ಆ್ಯಪ್ನಗರ

ಉಡುಪಿಯ ಆಶೀಶ್‌ ನಾಯಕ್‌ ರಾಜ್ಯ ತಂಡಕ್ಕೆ ಆಯ್ಕೆ

ರಾಜ್ಯ ಕ್ರಿಕೆಟ್‌ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿದ 14 ವರ್ಷ ಕೆಳ ಹರೆಯದವರ ಅಂತರ್‌ ವಲಯ ಪಂದ್ಯಾಟದಲ್ಲಿ ಮಂಗಳೂರು ವಲಯ ತಂಡವನ್ನು ಪ್ರತಿನಿಧಿಸಿದ ಆಶೀಶ್‌ ನಾಯಕ್‌ 26 ಮಂದಿಯನ್ನೊಳಗೊಂಡ ರಾಜ್ಯ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Vijaya Karnataka 20 Dec 2018, 5:00 am
ಉಡುಪಿ: ರಾಜ್ಯ ಕ್ರಿಕೆಟ್‌ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿದ 14 ವರ್ಷ ಕೆಳ ಹರೆಯದವರ ಅಂತರ್‌ ವಲಯ ಪಂದ್ಯಾಟದಲ್ಲಿ ಮಂಗಳೂರು ವಲಯ ತಂಡವನ್ನು ಪ್ರತಿನಿಧಿಸಿದ ಆಶೀಶ್‌ ನಾಯಕ್‌ 26 ಮಂದಿಯನ್ನೊಳಗೊಂಡ ರಾಜ್ಯ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Vijaya Karnataka Web ashish


ಈತ ಅಂತರ್‌ ವಲಯ ಪಂದ್ಯಾಟದಲ್ಲಿ ಬೌಲಿಂಗಿನಲ್ಲಿ 108-44-183-17 ವಿಕೇಟು ಪಡೆದಿದ್ದು, ಬ್ಯಾಟಿಂಗಿನಲ್ಲಿ 30.31ರ ಸ್ಟ್ರೆಕಿಂಗ್‌ ರೇಟಿನೊಂದಿಗೆ 154 ರನ್‌ ಗಳಿಸಿ ಉತ್ತಮ ಸಾಧನೆ ತೋರಿ ಮಂಗಳೂರು ವಲಯದಿಂದ ಸ್ಥಾನ ಪಡೆದಿರುವ ಏಕೈಕ ಆಟಗಾರನಾಗಿದ್ದಾರೆ.

ಆಶೀಶ್‌ ಉಡುಪಿಯ ವಳಕಾಡು ಸರಕಾರಿ ಶಾಲೆ ವಿದ್ಯಾರ್ಥಿಯಾಗಿದ್ದು, ಪರ್ಕಳ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ ಸದಸ್ಯರಾಗಿ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯು ಮಾಹೆ ಮಣಿಪಾಲದ ಸಹಕಾರದೊಂದಿಗೆ ಮಣಿಪಾಲದಲ್ಲಿ ನಡೆಸುತ್ತಿರುವ ಕ್ರಿಕೆಟ್‌ ತರಬೇತಿ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಪರ್ಕಳದ ರಮೇಶ್‌ ನಾಯಕ್‌ ಮತ್ತು ಶಕುಂತಲ ದಂಪತಿ ಪುತ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ