ಆ್ಯಪ್ನಗರ

26, 27ರಂದು ಮಣಿಪಾಲ ಮಂಗಳೂರಿನಲ್ಲಿ ಕ್ರಿಕೆಟ್‌ ಪ್ರತಿಭಾ ಶೋಧ

ನವದೆಹಲಿಯ ಮ್ಯಾಗ್‌ಪಿ ಪ್ರತಿಭಾ ಶೋಧ ಸಂಸ್ಥೆಯು ದೇಶದಾದ್ಯಂತ ಕ್ರಿಕೆಟ್‌ ಪ್ರತಿಭೆಗಳನ್ನು ಗುರುತಿಸುವ ಮಹಾನ್‌ ಕಾರ್ಯಕ್ರಮವನÜು್ನ ಹಮ್ಮಿಕೊಂಡಿದ್ದು, ಡಿ.26 ರಂದು ಮಣಿಪಾಲದ ಎಂಐಟಿ ಮೈದಾನ ಹಾಗೂ ಡಿ.27ರಂದು ಮಂಗಳೂರಿನ ಸೈಂಟ್‌ ಅಲೋಸಿಯಸ್‌ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Vijaya Karnataka 25 Dec 2018, 5:00 am
ಉಡುಪಿ: ನವದೆಹಲಿಯ ಮ್ಯಾಗ್‌ಪಿ ಪ್ರತಿಭಾ ಶೋಧ ಸಂಸ್ಥೆಯು ದೇಶದಾದ್ಯಂತ ಕ್ರಿಕೆಟ್‌ ಪ್ರತಿಭೆಗಳನ್ನು ಗುರುತಿಸುವ ಮಹಾನ್‌ ಕಾರ್ಯಕ್ರಮವನÜು್ನ ಹಮ್ಮಿಕೊಂಡಿದ್ದು, ಡಿ.26 ರಂದು ಮಣಿಪಾಲದ ಎಂಐಟಿ ಮೈದಾನ ಹಾಗೂ ಡಿ.27ರಂದು ಮಂಗಳೂರಿನ ಸೈಂಟ್‌ ಅಲೋಸಿಯಸ್‌ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
Vijaya Karnataka Web cricket talent at manipal mangalore on 26th 27th
26, 27ರಂದು ಮಣಿಪಾಲ ಮಂಗಳೂರಿನಲ್ಲಿ ಕ್ರಿಕೆಟ್‌ ಪ್ರತಿಭಾ ಶೋಧ


ಈ ಕಾರ್ಯಕ್ರಮದಲ್ಲಿ 12ರಿಂದ 25 ವರ್ಷದವರೆಗಿನ ಕ್ರಿಕೆಟ್‌ ಆಟಗಾರರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ. ಆಯ್ಕೆದಾರರಾಗಿ ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಅಭಿಜಿತ್‌ ವಸಂತ್‌ ಕಾಳೆ ಭಾಗವಹಿಸಲಿರುವರು. ಆಟಗಾರರು ಬೆಳಗ್ಗೆ 8 ಗಂಟೆಗೆ ಮೈದಾನದಲ್ಲಿ ಉಪಸ್ಥಿತರಿರಬೇಕು.

ಇಲ್ಲಿ ಆಯ್ಕೆಯಾದ ಆಟಗಾರರು ಚಂಡೀಘಡದಲ್ಲಿ ಜರುಗಲಿರುವ ಐದು ದಿನಗಳ ಅವಧಿಯ ರಾಷ್ಟ್ರೀಯ ಪ್ರತಿಭಾ ಶೋಧ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌, ಅಲ್ಬಿ ಮಾರ್ಕೆಲ್‌ ಇಂಗ್ಲೆಂಡಿನ ಮ್ಯಾಥ್ಯೂ ಹೋಂ ಗಾರ್ಡ್‌, ಓವಯಿಸ್‌ ಶಾ, ನ್ಯೂಝಿಲೇಂಡಿನ ಮಿಲ್ಸ್‌ ಮತ್ತಿತರ ಆಟಗಾರರ ಎದುರು ತಮ್ಮ ಪ್ರತಿಭೆ ಪ್ರದರ್ಶಿಸಬೇಕಾಗಿದ್ದು, ಅಲ್ಲಿ 48 ಆಟಗಾರರನ್ನು ಆಯ್ಕೆ ಮಾಡಿ ಮೂರು ತಂಡಗಳನ್ನಾಗಿ ವಿಭಾಗಿಸಿ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್‌ಗಳಿಗೆ ತರಬೇತಿ ಪ್ರವಾಸಕ್ಕೆ ಕಳುಹಿಸಲಾಗುವುದು. ಈ ಪ್ರವಾಸದ ಖರ್ಚನ್ನು ಸಂಸ್ಥೆಯು ಭರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ