ಆ್ಯಪ್ನಗರ

‘ದಲಿತರು, ಮುಸ್ಲಿಮರು, ಕ್ರೈಸ್ತರ ವಿರುದ್ಧ ಮನುವಾದಿಗಳ ಪಿತೂರಿ’

ದೇಶ ಲೂಟಿ ಮಾಡಿರುವ ಕೋಮುವಾದಿ ಮನಸ್ಥಿತಿಯ ಮನುವಾದಿಗಳು ದಲಿತರು, ಮುಸ್ಲಿಮರು ಹಾಗೂ ಕ್ರೈಸ್ತರು ಒಂದಾಗಬಾರದೆಂಬ ಮನೋಭಾವನೆಯಿಂದ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಆರೋಪಿಸಿದ್ದಾರೆ.

Vijaya Karnataka 16 Jun 2019, 8:02 pm
ಉಡುಪಿ: ದೇಶ ಲೂಟಿ ಮಾಡಿರುವ ಕೋಮುವಾದಿ ಮನಸ್ಥಿತಿಯ ಮನುವಾದಿಗಳು ದಲಿತರು, ಮುಸ್ಲಿಮರು ಹಾಗೂ ಕ್ರೈಸ್ತರು ಒಂದಾಗಬಾರದೆಂಬ ಮನೋಭಾವನೆಯಿಂದ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಆರೋಪಿಸಿದ್ದಾರೆ.
Vijaya Karnataka Web dliata


ದಲಿತ ಸಂಘಟನೆಗಳ ಒಕ್ಕೂಟ ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಗುಂಡ್ಲುಪೇಟೆ ಬೆತ್ತಲೆ ಮೆರವಣಿಗೆ ಖಂಡಿಸಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಶನಿವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.

ದಲಿತರಿಗೆ ಈ ದೇಶದಲ್ಲಿ ಶೇ.18ರಷ್ಟು ಮೀಸಲಾತಿಯಿದ್ದು, ಶೇ.32ರಷ್ಟು ಮೀಸಲಾತಿ ಹಿಂದುಳಿದ ವರ್ಗಗಳು ಪಡೆದುಕೊಂಡಿವೆ. ಆದರೂ ದಲಿತರನ್ನು ಆಸ್ಪ ೃಶ್ಯತೆ, ಮೀಸಲಾತಿ ಅಡಿಯಲ್ಲಿ ಬಂದವರೆಂದು ಎತ್ತಿಕಟ್ಟುವ ಕೆಲಸವಾಗುತ್ತಿದೆ. ಮುಸ್ಲಿಮರನ್ನು ಭಯೋತ್ಪಾದಕರಂತೆ ಹಾಗೂ ಕ್ರೈಸ್ತರನ್ನು ಮತಾಂತರ ಮಾಡುವವರೆನ್ನುವಂತೆ ಬಿಂಬಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಇದು ಅಘಾತಕಾರಿ ಬೆಳವಣಿಗೆ. ಈ ಬಗ್ಗೆ ವಿದ್ಯಾವಂತ ನಾಗರಿಕರು ಗಮನ ಹರಿಸುವ ಅಗತ್ಯವಿದೆ ಎಂದರು.

ಹಿರಿಯ ಚಿಂತಕ ಜಿ. ರಾಜಶೇಖರ್‌ ಮಾತನಾಡಿ, ಗುಂಡ್ಲುಪೇಟೆಯಲ್ಲಿ ನಡೆದಿರುವುದು ಬೆತ್ತಲೆ ಮೆರವಣಿಗೆಯಲ್ಲ. ಆತನನ್ನು ಹಿಂಸಿಸಿ, ಬೆತ್ತಲೆ ಮಾಡಿ ಪ್ರಾಣಿಯಂತೆ ಎಳೆದುಕೊಂಡು ಹೋಗಿದ್ದಾರೆ. ಈ ಕೃತ್ಯದ ಹಿಂದೆ ಕೇವಲ ಪುರೋಹಿತ ವರ್ಗದ ಕೈವಾಡ ಮಾತ್ರವಲ್ಲದೆ ಪೊಲೀಸ್‌ ಇಲಾಖೆ, ಆಡಳಿತ ವ್ಯವಸ್ಥೆಯ ಬೆಂಬಲ ಇರುವುದು ಗೋಚರವಾಗುತ್ತದೆ. ಮಾನಸಿಕ ಅಸ್ವಸ್ಥ ಎನ್ನುವಂತೆ ಬಿಂಬಿಸಲಾಗುತ್ತಿದ್ದು, ಮಾನಸಿಕ ಅಸ್ವಸ್ಥ ಬೈಕ್‌ ಓಡಿಸಲು ಸಾಧ್ಯವೇ?, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವುದು ಸುಳ್ಳೇ ಎಂದು ಪ್ರಶ್ನಿಸಿದರು.

ದಸಂಸ ಮುಖಂಡ ಶೇಖರ್‌ ಹೆಜಮಾಡಿ , ವಿಲಿಯಂ ಮಾರ್ಟಿಸ್‌, ಬಾಲಕೃಷ್ಣ ಶೆಟ್ಟಿ, ಶ್ಯಾಮ್‌ರಾಜ್‌ ಬಿರ್ತಿ, ಎಸ್‌. ನಾರಾಯಣ, ವಾಸು ನೇಜಾರು, ಹುಸೇನ್‌ ಕೋಡಿ ಬೆಂಗ್ರೆ, ಲೂವಿಸ್‌ ಲೋಬೊ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ