ಆ್ಯಪ್ನಗರ

ಮಟ್ಕಾ ದಂಧೆ: ಓರ್ವನ ಗಡಿಪಾರಿಗೆ ಜಿಲ್ಲಾಧಿಕಾರಿ ಆದೇಶ

ಪದೇ ಪದೇ ಮಟ್ಕಾ ವ್ಯವಹಾರದಲ್ಲಿ ತೊಡಗಿಕೊಂಡು ಸಮಾಜದ ನೆಮ್ಮದಿ ಹಾಳು ಮಾಡುತ್ತಿದ್ದ 10 ದಂಧೆಯನ್ನು ಮಟ್ಟ ಹಾಕಲು ನಿಟ್ಟಿನಲ್ಲಿ 10 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿದ್ದು, ಓರ್ವನಿಗೆ ಗಡಿಪಾರು ಹಾಗೂ 9 ಅರ್ಜಿ ತನಿಖೆ ಹಂತದಲ್ಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.

Vijaya Karnataka 19 Jan 2019, 7:48 pm
ಉಡುಪಿ: ಪದೇ ಪದೇ ಮಟ್ಕಾ ವ್ಯವಹಾರದಲ್ಲಿ ತೊಡಗಿಕೊಂಡು ಸಮಾಜದ ನೆಮ್ಮದಿ ಹಾಳು ಮಾಡುತ್ತಿದ್ದ 10 ದಂಧೆಯನ್ನು ಮಟ್ಟ ಹಾಕಲು ನಿಟ್ಟಿನಲ್ಲಿ 10 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿದ್ದು, ಓರ್ವನಿಗೆ ಗಡಿಪಾರು ಹಾಗೂ 9 ಅರ್ಜಿ ತನಿಖೆ ಹಂತದಲ್ಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.
Vijaya Karnataka Web UDP-18AA SP


ಅವರು ಬನ್ನಂಜೆ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ ಇನ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡು ಬಂಧನಕ್ಕೊಳಗಾಗುತ್ತಿದ್ದ 10 ದಂಧೆಕೋರರ ಪಟ್ಟಿಯನ್ನು ಸಿದ್ಧಪಡಿಸಿ ಗಡಿಪಾರಿಗೆ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಗಡಿಪಾರು ಆದೇಶ ನೀಡಿದ್ದು, ಅದರಂತೆ 3 ತಿಂಗಳ ಕಾಲ ಗಡಿಪಾರು ಮಾಡಲಾಗುವುದೆಂದು ಮಾಹಿತಿ ನೀಡಿದರು.

ಮಟ್ಕಾ ದಂಧೆಗೆ ಸಂಬಂಧಿಸಿ ಕಳೆದ ಫೆಬ್ರವರಿ, ಮಾರ್ಚ್‌ನಲ್ಲಿ 11 ಮಂದಿಯನ್ನು ಗಡಿಪಾರು ಮಾಡಲಾಗಿತ್ತು. ಅವರು 3 ತಿಂಗಳ ಈ ಶಿಕ್ಷೆಯನ್ನು ಅನುಭವಿಸಿ ಮರಳಿ ಬಂದಿದ್ದರು. ಜಿಲ್ಲಾಡಳಿತದಲ್ಲಿ 9 ಮಂದಿ ತನಿಖೆ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದರು.

*ಡಿ. 21 ರಿಂದ ದಾಖಲಾದ ಪ್ರಕರಣ

ಅಪರಾಧ ದಾಖಲಾದ ಕೇಸು ಬಂಧನ

ಮಟ್ಕಾ 10 11

ಇಸ್ಟೀಟ್‌ 01 03

ಅಕ್ರಮ ಮಧ್ಯ 1

ಎನ್‌ಡಿಪಿಎಸ್‌ 1

ಕೊಟ್ಪಾ 66

ಕುಡಿದು ವಾಹನ ಚಲಾವಣೆ 15

ಕರ್ಕಶ ಹಾರ್ನ್‌ 182

ಮೊಬೈಲ್‌ ಬಳಕೆ 88

ಹೆಲ್ಮೆಟ್‌ ರಹಿತ 2825

ಅತೀಯಾದ ವೇಗ 104

ಇತರೆ 4595.

ಪಾರ್ಕಿಂಗ್‌ ಸಮಸ್ಯೆ ಸರಿದೂಗಿಸಿ: ಸಾರ್ವಜನಿಕರೊಬ್ಬರೂ ಕರೆ ಮಾಡಿ ನಗರ ಸಹಿತ ವಿವಿಧೆಡೆ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಟ್ರಾಫಿಕ್‌ ಸಮಸ್ಯೆ ಕಿರಿಕಿರಿ ಉಂಟು ಮಾಡುತ್ತಿದೆ. ಹಿರಿಯ ನಾಗರಿಕರು, ಮಹಿಳೆಯರ ಓಡಾಟವೇ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ನಗರ ಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಸಹಿತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆದು ಪಾರ್ಕಿಂಗ್‌ ಜಾಗದಲ್ಲಿ ವಾಣಿಜ್ಯ ಮಳಿಗೆಯನ್ನು ಕಟ್ಟಿರುವ ಮಾಲೀಕರಿಗೆ ಸಂಬಂಧಿಸಿ ನೋಟಿಸ್‌ ಜಾರಿ ಮಾಡಲಿ. ಈ ಬಗ್ಗೆ ನಗರಸಭೆಗೆ ಯಾವ ರೀತಿ ಬೆಂಬಲ ಬೇಕಾದರೂ ಕೊಡುತ್ತೇವೆ. ರಕ್ಷಣೆಗೆ ನಾವು ಇದ್ದೇವೆ ಎಂದರು.

ಹಂದಿ ಮಾಂಸ ತನಿಖೆಗೆ ತಂಡ ರಚನೆ: ಬೈಂದೂರು ಸಮೀಪದ ನಾಗೂರು ಮಸೀದಿ ಆವರಣದಲ್ಲಿ ಕಿಡಿಗೇಡಿಗಳು ಬೈಕ್‌ನಲ್ಲಿ ಬಂದು ಹಂದಿ ಮಾಂಸವಿಟ್ಟಿದ್ದು, ತನಿಖೆಗಾಗಿ ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ. ಬೈಕ್‌ನಲ್ಲಿ ಇಬ್ಬರು ಯುವಕರು ಬಂದು ಹಂದಿ ಮಾಂಸವನ್ನು ಇಟ್ಟು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಿ ತನಿಖೆ ನಡೆಸಲಾಗುತ್ತಿದೆ. ಪರಿಸರದ ಶಾಂತಿ ಕದಡುವ ಉದ್ದೇಶವೂ ಇರಬಹುದೆಂದು ಎಸ್ಪಿ ತಿಳಿಸಿದ್ದಾರೆ.

ಬೈಕ್‌ನಲ್ಲಿ 3 ಜನ, ಹೆಲ್ಮೆಟ್‌ ಹಾಕಲ್ಲ: ಮಲ್ಪೆ ಪರಿಸರದಲ್ಲಿ ಬೈಕ್‌ನಲ್ಲಿ 3,4 ಜನ ಹೋಗುತ್ತಿದ್ದು, ಯಾರೊಬ್ಬರೂ ಹೆಲ್ಮೆಟ್‌ ಹಾಕಲ್ಲ. 14, 15 ವರ್ಷದ ಮಕ್ಕಳು ಕೂಡಾ ಬೈಕ್‌ ಚಲಿಸುತ್ತಿದ್ದು, ಈ ರಸ್ತೆಯಲ್ಲಿ ಓಡಾಟವೇ ಭಯ ತಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಮಲ್ಪೆ ಠಾಣಾಧಿಕಾರಿ ಅವರಿಗೆ ಮಾಹಿತಿ ನೀಡಿ, ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು.

ಕಲರ್‌ ಕೋಡಿಂಗ್‌: ಆರ್‌ಟಿಓ ಅಧಿಕಾರಿಗಳು ವಲಯ 1 (ನಗರಸಭೆ) ಹಾಗೂ ವಲಯ 2 (ನಗರದ ಹೊರ ವಲಯ) ಎಂದು ಕಲರ್‌ ಕೋಡಿಂಗ್‌ ಮಾಡಿದ್ದು, ಈಗಾಗಲೇ 50 ರಷ್ಟು ರಿಕ್ಷಾಗಳಿಗೆ ಕಲರ್‌ ಕೊಡಲಾಗಿದೆ. ದಿನಕ್ಕೆ 20 ರಂತೆ ಆರ್‌ಟಿಓ ಅಧಿಕಾರಿಗಳು ವಿಂಗvಣೆ ಮಾಡುತ್ತಿದ್ದಾರೆ. ವಲಯ 1 ರಲ್ಲಿ ಬರುವ ಆಟೋ ರಿಕ್ಷಾ ಯಾವ ನಿಲ್ದಾಣದಲ್ಲೂ ನಿಂತು ಬಾಡಿಗೆ ಮಾಡಬಹುದಾಗಿದೆ ಎಂದು ಎಸ್ಪಿ ಮಾಹಿತಿ ಕೊಟ್ಟರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರಿಯ ನಾಗರಿಕರಿಗೆ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಮತ್ತು ನಗರ ಪ್ರದೇಶದಲ್ಲಿ ಬಸ್‌ನ್ನು ಅಪರಿಮಿತ ವೇಗದಲ್ಲಿ ಚಲಾಯಿಸುತ್ತಿದ್ದು, ವೇಗ ಮಿತಿ ನಿಗದಿಗೊಳಿಸುವಂತೆ ಹಿರಿಯ ನಾಗರಿಕರೊಬ್ಬರು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕರಾವಳಿಯಿಂದ ಪರ್ಕಳವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಅವರೇ ಸಿಗ್ನಲ್‌ ಆಳವಡಿಕೆ ಮಾಡುತ್ತಾರೆ ಎಂದರು.

ಮನ ಪರಿವರ್ತನೆಯೊಂದೆ ದಾರಿ: ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿ ಮಂಗಳಮುಖಿಯರ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದು ಜಿಲ್ಲೆಯ ಮರ್ಯಾದೆ ಪ್ರಶ್ನೆ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರು ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಇದು ಕಾನೂನಿನಲ್ಲಿ ಅಪರಾಧವಲ್ಲ. ಆದರೆ ಅವರನ್ನು ಮನಪರಿವರ್ತನೆ ಮಾಡಿ ಶಾಶ್ವತ ನೆಲೆ ಕಲ್ಪಿಸಬೇಕಿದೆ. ಅನಿವಾರ್ಯತೆಗಾಗಿ ಈ ದಂಧೆ ಮಾಡುವವರನ್ನು ಬಿಡಿಸಬಹುದು. ಆದರೆ ಹಣಕ್ಕಾಗಿ ಈ ದಂಧೆ ಮಾಡುವವರನ್ನು ಬಿಡಿಸುವುದು ಕಷ್ಟ. ಆದರೂ ನಮ್ಮ ಮಟ್ಟದಲ್ಲಿ ಆಗುವ ಪ್ರಯತ್ನ ಮಾಡುವುದಾಗಿ ಎಸ್ಪಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ