ಭಕ್ತರ ಸಂಕಷ್ಟದ ಹೊರೆ ಹೊತ್ತು ದೇವರಿಂದ ರಕ್ಷಣೆ: ಪಲಿಮಾರು ಶ್ರೀ
ದೇವರಿಗೆ ಹೊರೆ ಕಾಣಿಕೆ ಸಮರ್ಪಿಸಿದರೆ ದೇವರು ನಮ್ಮ ಸಂಕಷ್ಟಗಳ ಹೊರೆ ಹೊತ್ತು, ರಕ್ಷಣೆ ನೀಡುತ್ತಾರೆ ಎಂದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka 8 Mar 2019, 5:00 am
ಉಡುಪಿ: ದೇವರಿಗೆ ಹೊರೆ ಕಾಣಿಕೆ ಸಮರ್ಪಿಸಿದರೆ ದೇವರು ನಮ್ಮ ಸಂಕಷ್ಟಗಳ ಹೊರೆ ಹೊತ್ತು, ರಕ್ಷಣೆ ನೀಡುತ್ತಾರೆ ಎಂದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಅವರು ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಾ. 13 ರ ತನಕ ನಡೆಯುವ ನವೀಕರಣ ಕಾರ್ಯ ಸಮರ್ಪಣೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಉಡುಪಿ ಜಿಲ್ಲೆಯ ಭಕ್ತಾಭಿಮಾನಿಗಳ ಹೊರೆಕಾಣಿಕೆ ಸಂಗ್ರಹಣೆ ಕೇಂದ್ರವನ್ನು ರಾಜಾಂಗಣದ ಪಕ್ಕದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅನ್ನಬ್ರಹ್ಮನ ಕ್ಷೇತ್ರ ಉಡುಪಿ ಯಾವುದಕ್ಕೂ ಕೊರತೆ ಮಾಡಿಲ್ಲ. ಪೊಳಲಿ ಅಮ್ಮನಿಗೆ ನೀಡುವ ಹೊರೆಕಾಣಿಕೆಯಲ್ಲೂ ಭಕ್ತರು ತಮ್ಮ ಕರ್ತವ್ಯ ಮೆರೆಯಬೇಕು. ತಾಯಿಗೆ ಕೊಟ್ಟ ಕಾಣಿಕೆ ಇಡೀ ಜಗತ್ತಿಗೆ ತುಂಬಿಕೊಳ್ಳುತ್ತದೆ. ನಾವೆಲ್ಲ ದಿನನಿತ್ಯ ಬಳಸುವ ಆಹಾರದ ಒಂದಂಶ ತೆಗೆದಿಟ್ಟು ತಾಯಿಗೆ ಅರ್ಪಣೆ ಮಾಡೋಣ ಎಂದರು.
ಪ್ರಮುಖರಾದ ವಾಸುದೇವ್ ಭಟ್ ಪೆರಂಪಳ್ಳಿ ಮಾತನಾಡಿ, ಜಿಲ್ಲೆಯ 70 ದೇವಸ್ಥಾನಗಳಲ್ಲಿ ಹೊರೆಕಾಣಿಕೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮನೆಯಿಂದ 2 ತೆಂಗಿನಕಾಯಿ (ಸಿಪ್ಪೆ ಸಹಿತ) ಸಮರ್ಪಿಸೋಣ. ಮಾ.10ರಂದು ಬೆಳಗ್ಗೆ 9 ಗಂಟೆಗೆ ಒಟ್ಟು ಸೇರಿ ಪೊಳಲಿ ಅಮ್ಮನ ಮಡಿಲಿಗೆ ಭಕ್ತಿಯ ಉಡಿ ತುಂಬೋಣ ಎಂದರು.
ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಕೊಡವೂರು, ಕಾರ್ಯದರ್ಶಿ ಮನೋಹರ್ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಮಹಾಬಲ ಕುಂದರ್, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಗಿರೀಶ್, ಆರ್.ಕೆ. ರಾಧಾಕೃಷ್ಣ ಮೆಂಡನ್, ಉದಯ ಕುಮಾರ್ ಶೆಟ್ಟಿ ಬನ್ನಂಜೆ ಉಪಸ್ಥಿತರಿದ್ದರು.
ಅವರು ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಾ. 13 ರ ತನಕ ನಡೆಯುವ ನವೀಕರಣ ಕಾರ್ಯ ಸಮರ್ಪಣೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಉಡುಪಿ ಜಿಲ್ಲೆಯ ಭಕ್ತಾಭಿಮಾನಿಗಳ ಹೊರೆಕಾಣಿಕೆ ಸಂಗ್ರಹಣೆ ಕೇಂದ್ರವನ್ನು ರಾಜಾಂಗಣದ ಪಕ್ಕದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅನ್ನಬ್ರಹ್ಮನ ಕ್ಷೇತ್ರ ಉಡುಪಿ ಯಾವುದಕ್ಕೂ ಕೊರತೆ ಮಾಡಿಲ್ಲ. ಪೊಳಲಿ ಅಮ್ಮನಿಗೆ ನೀಡುವ ಹೊರೆಕಾಣಿಕೆಯಲ್ಲೂ ಭಕ್ತರು ತಮ್ಮ ಕರ್ತವ್ಯ ಮೆರೆಯಬೇಕು. ತಾಯಿಗೆ ಕೊಟ್ಟ ಕಾಣಿಕೆ ಇಡೀ ಜಗತ್ತಿಗೆ ತುಂಬಿಕೊಳ್ಳುತ್ತದೆ. ನಾವೆಲ್ಲ ದಿನನಿತ್ಯ ಬಳಸುವ ಆಹಾರದ ಒಂದಂಶ ತೆಗೆದಿಟ್ಟು ತಾಯಿಗೆ ಅರ್ಪಣೆ ಮಾಡೋಣ ಎಂದರು.
ಪ್ರಮುಖರಾದ ವಾಸುದೇವ್ ಭಟ್ ಪೆರಂಪಳ್ಳಿ ಮಾತನಾಡಿ, ಜಿಲ್ಲೆಯ 70 ದೇವಸ್ಥಾನಗಳಲ್ಲಿ ಹೊರೆಕಾಣಿಕೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮನೆಯಿಂದ 2 ತೆಂಗಿನಕಾಯಿ (ಸಿಪ್ಪೆ ಸಹಿತ) ಸಮರ್ಪಿಸೋಣ. ಮಾ.10ರಂದು ಬೆಳಗ್ಗೆ 9 ಗಂಟೆಗೆ ಒಟ್ಟು ಸೇರಿ ಪೊಳಲಿ ಅಮ್ಮನ ಮಡಿಲಿಗೆ ಭಕ್ತಿಯ ಉಡಿ ತುಂಬೋಣ ಎಂದರು.
ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಕೊಡವೂರು, ಕಾರ್ಯದರ್ಶಿ ಮನೋಹರ್ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಮಹಾಬಲ ಕುಂದರ್, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಗಿರೀಶ್, ಆರ್.ಕೆ. ರಾಧಾಕೃಷ್ಣ ಮೆಂಡನ್, ಉದಯ ಕುಮಾರ್ ಶೆಟ್ಟಿ ಬನ್ನಂಜೆ ಉಪಸ್ಥಿತರಿದ್ದರು.