ಆ್ಯಪ್ನಗರ

ಪೇಜಾವರ ಶ್ರೀ ಆರೋಗ್ಯ ಸುಧಾರಣೆಗೆ ಮಠಾಧೀಶರ ವಿಶೇಷ ಪ್ರಾರ್ಥನೆ: ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಶನಿವಾರ ಭೇಟಿ ನೀಡಿ ಐಸಿಯುನಲ್ಲಿರುವ‌ ಪೇಜಾವರ ಶ್ರೀಗಳ ಆರೋಗ್ಯ‌ ವಿಚಾರಿಸಿದರು. ವಿವಿಧ ಮಠಗಳ ಮಠಾಧೀಶರು ಶ್ರೀಗಳ ಆರೋಗ್ಯ ಸುಧಾರಣೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Vijaya Karnataka Web 21 Dec 2019, 3:05 pm
ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶನಿವಾರ ಭೇಟಿ ನೀಡಿ ಐಸಿಯುನಲ್ಲಿರುವ‌ ಪೇಜಾವರ ಶ್ರೀಗಳ ಆರೋಗ್ಯ‌ ವಿಚಾರಿಸಿದರು. ವೈದ್ಯರ ಪ್ರಕಾರ ಶ್ರೀಗಳ ವಯೋಮಾನದ ಹಿನ್ನೆಲೆಯಲ್ಲಿ ನಿಧಾನ ಚೇತರಿಕೆ ಕಾಣುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ಕಾಯಿಲೆಗಳಿಲ್ಲದ ಯತಿಗಳ ಆರೋಗ್ಯಕ್ಕಾಗಿ ಇಡೀ ರಾಷ್ಟ್ರದ ಜನತೆ ಪ್ರಾರ್ಥಿಸುತ್ತಿದ್ದು ನಿರಂತರ ಮಾರ್ಗದರ್ಶನ ನೀಡಲಿ. ಭಗವಂತನ ಸಾನ್ನಿಧ್ಯದಲ್ಲಿ ನಿತ್ಯ ಪೂಜೆ ಮಾಡುವ ಯತಿಗಳಿಂದ ಜನರಿಗೆ ದೇವರ ಅನುಗ್ರಹ ದೊರಕಲಿ. ಜನತೆ ಸುಳ್ಳಿಗೆ‌ ಕಿವಿಗೊಡದೆ ಸತ್ಯಾಸತ್ಯತೆ ಅರಿಯುವಂತೆ ಮನವಿ ಮಾಡಿದರು.
Vijaya Karnataka Web veerendra heggade


ಆರೋಗ್ಯ ಸುಧಾರಣೆಗೆ ವಿವಿಧೆಡೆ ವಿಶೇಷ ಪ್ರಾರ್ಥನೆ
ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಆದಿಚುಂಚನಗಿರಿ ನಿರ್ಮಲಾನಂದನಾಥಶ್ರೀ. ಪೇಜಾವರ ಶ್ರೀಗಳ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ದೂರವಾಣಿ ಮಾತುಕತೆಯಲ್ಲಿ ತಿಳಿಸಿದ್ದಾರೆ.

ಪೇಜಾವರಶ್ರೀಗಳ ಆರೋಗ್ಯ ಚೈತನ್ಯಕ್ಕಾಗಿ ಪ್ರಾರ್ಥಿಸಿ ಕಂಚಿ ಕಾಮಕೋಟಿ ಶ್ರೀ ಶಂಕರಾಚಾರ್ಯ ಪೀಠದ ಶ್ರೀ ವಿಜಯೇಂದ್ರ ಶ್ರೀಪಾದರು ಕಂಚಿ ಮಠದ ದೇಶದ ಎಲ್ಲ ಶಾಖೆಗಳಲ್ಲಿ ವಿಶೇಷ ವೇದ ಪಾರಾಯಣ ಸಹಿತ ಪ್ರಾರ್ಥನೆಗೆ ಸೂಚಿಸಿದ್ದಾರೆ.

ಶಿರಸಿ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪೇಜಾವರ ಶ್ರೀಗಳ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ಹವನ ವ್ಯವಸ್ಥೆ ಮಾಡಿದ್ದಾರೆ.

ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಉಡುಪಿ ಕೃಷ್ಣ ಮಠ , ಶ್ರೀ ಅನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನ ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ, ಮುಚ್ಲುಕೋಡು ಸುಬ್ರಹ್ಮಣ್ಯ , ಕರಂಬಳ್ಳಿ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತಿದೆ

ಧನ್ವಂತರಿ ಹೋಮ
ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ಕಟಪಾಡಿ ಮಟ್ಟು ದೇವಳದಲ್ಲಿ ವಿದ್ವಾನ್ ಪ್ರವೀಣ ತಂತ್ರಿಗಳ ನೇತ್ರತ್ವದಲ್ಲಿ ಹಲವು ಪುರೋಹಿತರೊಂದಿಗೆ ಧನ್ವಂತರಿ ಹೋಮ ಶನಿವಾರ ಜರುಗಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್, ಅರ್ಚಕ ಶ್ರೀಕಾಂತ ಅಚಾರ್ಯ, ಕೃಷ್ಣ ರಾವ್ , ಪ್ರವೀಣ ಸೇರಿಗಾರ್ ಉಪಸಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ