ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ಶತರುದ್ರ ಪಾರಾಯಣ ಸಹಿತ ರುದ್ರಯಾಗ ಎಲ್ಲವೂ ಭಗವಂತನ ಧಯೆಯಿಂದಲೇ ನಡೆಯಲಿದೆ: ಎಡನೀರು ಶ್ರೀ
ಭಗವಂತನ ದಯೆ ಇಲ್ಲದೇ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ. ಭಗವಂತನ ಪ್ರೇರಣೆ, ದಯೆ ಇದ್ದರೆ ಮಾತ್ರ ಯಾವುದೇ ಕಾರ್ಯ ನಿರ್ವಿಘ್ನವಾಗಿ ನಡೆಯಲಿದೆ. ನಾನು ಎಂಬುವುದು ಇಲ್ಲಿ ಶೂನ್ಯ. ಭಗವಂತನು ನನ್ನಿಂದ ಎಲ್ಲವನ್ನು ಮಾಡಿಸುತ್ತಿದ್ದಾನೆ ಎಂದು ಭಾವಿಸಿದಾಗ ಮಾತ್ರ ಅನುಗ್ರಹಿಸುತ್ತಾನೆ ಎಂದು ಎಡನೀರು ಮಠದ ತೋಟಾಕಾಚಾರ್ಯ ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka 10 Jan 2019, 5:00 am
ಉಡುಪಿ : ಭಗವಂತನ ದಯೆ ಇಲ್ಲದೇ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ. ಭಗವಂತನ ಪ್ರೇರಣೆ, ದಯೆ ಇದ್ದರೆ ಮಾತ್ರ ಯಾವುದೇ ಕಾರ್ಯ ನಿರ್ವಿಘ್ನವಾಗಿ ನಡೆಯಲಿದೆ. ನಾನು ಎಂಬುವುದು ಇಲ್ಲಿ ಶೂನ್ಯ. ಭಗವಂತನು ನನ್ನಿಂದ ಎಲ್ಲವನ್ನು ಮಾಡಿಸುತ್ತಿದ್ದಾನೆ ಎಂದು ಭಾವಿಸಿದಾಗ ಮಾತ್ರ ಅನುಗ್ರಹಿಸುತ್ತಾನೆ ಎಂದು ಎಡನೀರು ಮಠದ ತೋಟಾಕಾಚಾರ್ಯ ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ತಿಳಿಸಿದ್ದಾರೆ.
ಅವರು ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಬುಧವಾರ ಸಂಪನ್ನಗೊಂಡ ಶತರುದ್ರ ಪಾರಾಯಣ ಸಹಿತ ರುದ್ರಯಾಗ, ಮಹಾ ಅನ್ನಸಂತರ್ಪಣೆಯ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲಕಾಲಕ್ಕೆ ಮಳೆ, ಬೆಳೆಯನ್ನು ಭಗವಂತನೇ ಅನುಗ್ರಹಿಸಬೇಕೆ ವಿನಃ ಮನುಷ್ಯನಿಂದ ಸಾಧ್ಯವಿಲ್ಲ. ಆದುದರಿಂದ ಎಲ್ಲವನ್ನೂ ದಯಪಾಲಿಸುವ ದೇವರಿಗೆ ಸಂಪ್ರೀತಿಯಾದ ಯಜ್ಞ, ಯಾಗದಲ್ಲಿ ಭಾಗವಹಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯವೂ ಹೌದು ಎಂದರು.
ಧಾರ್ಮಿಕ ಪರಿಷತ್ ಸದಸ್ಯ ಕೆ.ಪಂಜ ಭಾಸ್ಕರ ಭಟ್ ಮಾತನಾಡಿ, ರುದ್ರ ಮಂತ್ರ ಅನುಷ್ಠಾನದಿಂದ ಹುಟ್ಟಿನಿಂದಲೇ ನಮ್ಮೊಂದಿಗಿರುವ ದೇವ, ಪಿತೃ, ಋುಷಿ ಋುಣದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ತಂತ್ರಿ ವೇ.ಮೂ. ಕೃಷ್ಣಮೂರ್ತಿ ಆಚಾರ್ಯ, ಜನಪದ ಸಾಹಿತಿ ಕೆ.ಎಲ್. ಕುಂಡಂತಾಯ ಎಲ್ಲೂರು ಉಪಸ್ಥಿತರಿದ್ದರು. ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಎಡನೀರು ಶ್ರೀಗಳನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ಇ. ಸುಬ್ರಹ್ಮಣ್ಯ ರಾವ್, ಉಷಾ ರಮಾನಂದ ಭಾಗವಹಿಸಿದ್ದರು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪೂರು ಭಾಗ್ಯಲಕ್ಷ್ಮೇ ಪರಿಚಯಿಸಿದರು. ಶಿವಕುಮಾರ್ ಬಾರಿತ್ತಾಯ ವಂದಿಸಿದರು.
ಅವರು ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಬುಧವಾರ ಸಂಪನ್ನಗೊಂಡ ಶತರುದ್ರ ಪಾರಾಯಣ ಸಹಿತ ರುದ್ರಯಾಗ, ಮಹಾ ಅನ್ನಸಂತರ್ಪಣೆಯ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲಕಾಲಕ್ಕೆ ಮಳೆ, ಬೆಳೆಯನ್ನು ಭಗವಂತನೇ ಅನುಗ್ರಹಿಸಬೇಕೆ ವಿನಃ ಮನುಷ್ಯನಿಂದ ಸಾಧ್ಯವಿಲ್ಲ. ಆದುದರಿಂದ ಎಲ್ಲವನ್ನೂ ದಯಪಾಲಿಸುವ ದೇವರಿಗೆ ಸಂಪ್ರೀತಿಯಾದ ಯಜ್ಞ, ಯಾಗದಲ್ಲಿ ಭಾಗವಹಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯವೂ ಹೌದು ಎಂದರು.
ಧಾರ್ಮಿಕ ಪರಿಷತ್ ಸದಸ್ಯ ಕೆ.ಪಂಜ ಭಾಸ್ಕರ ಭಟ್ ಮಾತನಾಡಿ, ರುದ್ರ ಮಂತ್ರ ಅನುಷ್ಠಾನದಿಂದ ಹುಟ್ಟಿನಿಂದಲೇ ನಮ್ಮೊಂದಿಗಿರುವ ದೇವ, ಪಿತೃ, ಋುಷಿ ಋುಣದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ತಂತ್ರಿ ವೇ.ಮೂ. ಕೃಷ್ಣಮೂರ್ತಿ ಆಚಾರ್ಯ, ಜನಪದ ಸಾಹಿತಿ ಕೆ.ಎಲ್. ಕುಂಡಂತಾಯ ಎಲ್ಲೂರು ಉಪಸ್ಥಿತರಿದ್ದರು. ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಎಡನೀರು ಶ್ರೀಗಳನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ಇ. ಸುಬ್ರಹ್ಮಣ್ಯ ರಾವ್, ಉಷಾ ರಮಾನಂದ ಭಾಗವಹಿಸಿದ್ದರು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪೂರು ಭಾಗ್ಯಲಕ್ಷ್ಮೇ ಪರಿಚಯಿಸಿದರು. ಶಿವಕುಮಾರ್ ಬಾರಿತ್ತಾಯ ವಂದಿಸಿದರು.