ಆ್ಯಪ್ನಗರ

ಬೈಲೂರು: ದರ್ಗಾ ಸೃಷ್ಟಿಸಿ ಅಶಾಂತಿಗೆ ಪ್ರಯತ್ನ

ಕಾರ್ಕಳ : ಬೈಲೂರು ಕೆಳಪೇಟೆ ಬಳಿಯಲ್ಲಿ ಮುಸ್ಲಿಂ ಸಮುದಾಯದ ದರ್ಗಾದ ಆಕೃತಿ ತಂದಿರಿಸುವ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಘಟನೆ ಬುಧವಾರ ಸಂಭವಿಸಿದೆ.

Vijaya Karnataka 13 Dec 2018, 5:00 am
ಕಾರ್ಕಳ : ಬೈಲೂರು ಕೆಳಪೇಟೆ ಬಳಿಯಲ್ಲಿ ಮುಸ್ಲಿಂ ಸಮುದಾಯದ ದರ್ಗಾದ ಆಕೃತಿ ತಂದಿರಿಸುವ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಘಟನೆ ಬುಧವಾರ ಸಂಭವಿಸಿದೆ.
Vijaya Karnataka Web DARGA


ಮಂಗಳವಾರ ತಡರಾತ್ರಿ ದರ್ಗಾವನ್ನು ಹೋಲುವ ಆಕೃತಿಯೊಂದನ್ನು ತಂದಿರಿಸಿ ಅದಕ್ಕೆ ಹಸಿರು ಹೊದಿಕೆ ಅಳವಡಿಸಿರುವುದು ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು ಬೈಲೂರು ಗ್ರಾಪಂಗೆ ದೂರು ನೀಡಿದ್ದರು.

ಗ್ರಾ.ಪಂ. ಮೂಲಕ ನಗರ ಠಾಣೆಗೆ ದೂರು ನೀಡಿದ ಪರಿಣಾಮ, ಸ್ಥಳಕ್ಕಾಗಮಿಸಿದ ನಗರ ಪಿಎಸ್‌ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿವರ್ಗ ಈ ದರ್ಗಾ ಆಕೃತಿಯನ್ನು ತೆರವುಗೊಳಿಸಿದ್ದಾರೆ.

ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸಿ, ಕ್ರಮ ಕೈಗೊಳ್ಳುವಂತೆ ಜಿ.ಪಂ.ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು ಪೊಲೀಸ್‌ ಇಲಾಖೆಗೆ ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ