ಆ್ಯಪ್ನಗರ

ಕಡಲಲ್ಲಿ ಡೀಸೆಲ್‌ ಸೋರಿಕೆ ವದಂತಿಯ ಬೆನ್ನು ಹತ್ತಿದರೂ ನಿಷ್ಫಲ !

ಸುವರ್ಣ ತ್ರಿಭುಜ ಬೋಟ್‌ ಸಹಿತ ನಾಪತ್ತೆಯಾಗಿರುವ 7 ಮೀನುಗಾರರ ಶೋಧ ಕಾರ್ಯಾಚರಣೆ ನಡುವೆ ಗೋವಾ ಕಡಲ ಕಿನಾರೆಯಲ್ಲಿ ಸಮುದ್ರದ ತಳಭಾಗದಿಂದ ಡೀಸೆಲ್‌ ಸೋರಿಕೆ ವದಂತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಗೋವಾಕ್ಕೆ ತೆರಳಿದ್ದು, ಕೋಸ್ಟ್‌ ಗಾರ್ಡ್‌ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ.

Vijaya Karnataka 23 Jan 2019, 5:00 am
ಉಡುಪಿ: ಸುವರ್ಣ ತ್ರಿಭುಜ ಬೋಟ್‌ ಸಹಿತ ನಾಪತ್ತೆಯಾಗಿರುವ 7 ಮೀನುಗಾರರ ಶೋಧ ಕಾರ್ಯಾಚರಣೆ ನಡುವೆ ಗೋವಾ ಕಡಲ ಕಿನಾರೆಯಲ್ಲಿ ಸಮುದ್ರದ ತಳಭಾಗದಿಂದ ಡೀಸೆಲ್‌ ಸೋರಿಕೆ ವದಂತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಗೋವಾಕ್ಕೆ ತೆರಳಿದ್ದು, ಕೋಸ್ಟ್‌ ಗಾರ್ಡ್‌ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ.
Vijaya Karnataka Web even though the diesel leakage on the seashore
ಕಡಲಲ್ಲಿ ಡೀಸೆಲ್‌ ಸೋರಿಕೆ ವದಂತಿಯ ಬೆನ್ನು ಹತ್ತಿದರೂ ನಿಷ್ಫಲ !


ಒಂದೆರಡು ದಿನಗಳ ಹಿಂದೆ ಸಮುದ್ರದಿಂದ ಡೀಸೆಲ್‌ ಮೇಲೆ ಬರುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿತ್ತು. ಈ ಸಂದೇಶದ ಆಧಾರದ ಮೇಲೆ ಗೋವಾಕ್ಕೆ ತೆರಳಿದ್ದ ತಂಡ ಬೇತುಲ್‌ ಪ್ರದೇಶದಲ್ಲಿ ಅಲ್ಲಿನ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ರವಾನಿಸಿ ಹುಡುಕಾಡಿದೆ. ಆದರೆ ಯಾವುದೇ ಮಹತ್ತರ ಸುಳಿವು ಅಲ್ಲಿ ಲಭ್ಯವಾಗಿಲ್ಲ. ಇದೊಂದು ಸುಳ್ಳು ವದಂತಿ ಎನ್ನುವ ತೀರ್ಮಾನಕ್ಕೆ ತಂಡ ಬಂದಿದೆ.

ಡಿ. 15ರಂದು ಮಧ್ಯರಾತ್ರಿ ಬಳಿಕ ಸುವರ್ಣ ತ್ರಿಭುಜ ಬೋಟ್‌ನ ಸಂಪರ್ಕ ಕಡಿತಗೊಂಡಿರುವ ಮಾಲ್ವಾನ್‌ ಪ್ರದೇಶಕ್ಕೆ ಬೇತುಲ್‌ನಿಂದ ಸುಮಾರು 10, 12 ನಾಟೆಕಲ್‌ ಮೈಲಿಯ ಅಂತರವಿದ್ದು, ಇಲ್ಲಿ ಅವಘಡ ಸಂಭವಿಸಿದೆ ಎನ್ನುವುದು ಸುಳ್ಳು. ಒಮ್ಮೊಮ್ಮೆ ವದಂತಿಯೂ ಸತ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೋಮವಾರ ನಾಲ್ಕು ಜನ ಪೊಲೀಸರ ತಂಡ ಗೋವಾಕ್ಕೆ ಹೋಗಿದೆ ಎಂದು ಉನ್ನತ ಮಟ್ಟದ ಪೊಲೀಸ್‌ ಮೂಲಗಳು ತಿಳಿಸಿವೆ.

ಡಿ. 13 ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್‌ ಡಿ. 14 ರಂದು ಬೇತುಲ್‌ ಪ್ರದೇಶದಲ್ಲಿ ಮೀನುಗಾರಿಕೆ ಮುಗಿಸಿ ಮುಂದೆ ಹೋಗಿದೆ ಎನ್ನಲಾಗಿದೆ. ಆ ಜಾಗದಲ್ಲಿ ಅವಘಡ ಸಂಭವಿಸುವ ಸಾಧ್ಯತೆಯೂ ಕಡಿಮೆ ಎಂದೂ ಮೂಲಗಳು ಖಚಿತ ಪಡಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ